Discover and read the best of Twitter Threads about #ಉದಯವಾಗಲಿನಮ್ಮಚೆಲುವಕನ್ನಡನಾಡು

Most recents (1)

ಗದಗ ಎಂದರೆ, ತಕ್ಷಣವೇ ಕರ್ನಾಟ ಭರತ ಕಥಾಮಂಜರಿ ಲೇಖಕ ಕುಮಾರ ವ್ಯಾಸ ಎಂದು ಪ್ರಸಿದ್ಧರಾದ ನಾರಾಯಣಪ್ಪನ ಹೆಸರನ್ನು ಮನಸ್ಸಿಗೆ ತರುತ್ತದೆ. ನಾಡು ಕಂಡಂತಹ ಶ್ರೇಷ್ಠ ಕವಿ, ಬರಹಗಾರ, ಸಾಹಿತಿ, ನಾಟಕ ಹಾಗೂ ಹೋರಾಟಗಾರ.ಶ್ರೀ.ಹುಯಿಲಗೋಳ ನಾರಾಯಣ ರಾವ್ ಕೂಡ ಜನಿಸಿದ್ದು ಈ ಪವಿತ್ರ ಭೂಮಿಯಲ್ಲಿಯೇ.

ವಿಪರ್ಯಾಸ ಏನೆಂದರೆ ಈ ಮಹಾನುಭಾವನ ಜೀವನ ಚರಿತ್ರೆ
ಎಷ್ಟು ಹುಡುಕಿದರೂ ಸಿಗುತ್ತಿಲ್ಲ.
ಸ್ಮಾರಕವಾಗಬೇಕಿದ್ದ ಅವರ ಮನೆ ಇಂದು ಪಾಳು ಬಿದ್ದ ಸ್ಥಿತಿಯಲ್ಲಿದೆ.

ನಾರಾಯಣರಾಯರು ಜನಿಸಿದ್ದು 1884 ಅಕ್ಟೋಬರ್ 4ರಂದು. ತಂದೆ-ತಾಯಿ ಕೃಷ್ಣರಾವ್ ಮತ್ತು ಬಹಿಣಕ್ಕ. ಬಾಲ್ಯದ ಶಿಕ್ಷಣವನ್ನು ಗದಗ, ಗೋಕಾಕ ಹಾಗು ಧಾರವಾಡಗಳಲ್ಲಿ ಪೂರೈಸಿದರು. 1902ರಲ್ಲಿ ಧಾರವಾಡದಲ್ಲಿ ಮೆಟ್ರಿಕ್ ಪರೀಕ್ಷೆಯನ್ನು ಮುಗಿಸಿ
ಉಚ್ಚ ಶಿಕ್ಷಣಕ್ಕಾಗಿ ಪುಣೆಯ ಫರ್ಗ್ಯೂಸನ್ ಕಾಲೇಜನ್ನು ಸೇರಿದರು. 1907ರಲ್ಲಿ ಪದವಿಯನ್ನು ಪಡೆದ ಬಳಿಕ ಧಾರವಾಡದ ವಿಕ್ಟೋರಿಯಾ ಪ್ರೌಢಶಾಲೆಯಲ್ಲಿ ಶಿಕ್ಷಕರಾದರು. ಕೆಲಕಾಲದ ನಂತರ ಶಿಕ್ಷಕ ವೃತ್ತಿಯನ್ನು ತ್ಯಜಿಸಿ, ಮುಂಬೈಗೆ ತೆರಳಿ, ಕಾನೂನು ಪದವಿಯನ್ನು ಪಡೆದು 1911ರಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರು. ನಾರಾಯಣರಾಯರು ಮೂಲತಃ ನಾಟಕಕಾರರು.
Read 7 tweets

Related hashtags

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3.00/month or $30.00/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!