@cpronammametro ಬೆಂಗಳೂರಿನ ನಮ್ಮ ಮೆಟ್ರೋ ಕಟ್ಟುವ ಕೆಲಸದಲ್ಲಿ ಸುಮಾರು ೧೦,೦೦೦ಜನ ಕಾರ್ಮಿಕರು ಇದಾರೆ ಅಂತ ಅಂದಾಜು ಮಾಡಲಾಗಿದೆ. ಕರ್ನಾಟಕದ ಬೇರೆ ಬೇರೆ ಕಡೆಯ ಕಾರ್ಮಿಕರು ಜೊತೆಗೆ ಬಂಗಾಳ,ಅಸ್ಸಾಂ,ಒರಿಸ್ಸಾ,ಬಿಹಾರ್,ಝಾರ್ಕಂಡ್ ನಾಡಿನಿಂದ ವಲಸೆ ಕಾರ್ಮಿಕರನ್ನು ಮುಖ್ಯವಾಗಿ ಕಂಪನಿ ಗುತ್ತಿಗೆದಾರರು ಕರೆತಂದಿದ್ದಾರೆ. ನಮ್ಮ ಮೆಟ್ರೋ ಹಿಂದಿ ಬೇಡ Image
ಅಂತ ಮಾಡಿದ ಹೋರಾಟದ ಪರಿಣಾಮ ಬಹುತೇಕ ಕಡೆ ಹಿಂದಿ ತೆಗೆದಿದ್ರೂ, ರೇಲಿನ ಒಳಗೆ, ನಿಲ್ದಾಣದಲ್ಲಿ ಇರುವ ಅಂಟುಚೀಟಿಗಳಲ್ಲಿ ಇನ್ನೂ ಹಿಂದಿ ಇದೆ. ಹಳೆಯ ರೇಲು ಮಾತ್ರವಲ್ಲ ಹೊಸ ರೇಲಿಗೂ ಮಾಡುವ ಹೊಸ ಅಂಟುಚೀಟಿಯನ್ನು ಮೂರು ನುಡಿಯಲ್ಲಿ ಅಚ್ಚು ಹಾಕಿಸ್ತಾ ಇದಾರೆ. ಹಾಗೆಯೇ ಮೇಲೆ ಚಿತ್ರದಲ್ಲಿ ತೋರಿಸಿದಂತೆ ಹಿಂದಿ ಬಳಕೆ ಮಾಡಲಾಗ್ತಿದೆ.
ಇದೆಂತ ಒಂದು ಸಣ್ಣ ಹಲಗೆ, ಸಣ್ಣಕ್ಕೆ ಅಲ್ಲಲ್ಲಿ ಅಂಟಿಸಿರುವ ಚೀಟಿ ದೊಡ್ಡ ವಿಚಾರ ಅಲ್ಲ. ಸುಮ್ನೆ ಕೊಂಕು ಮಾಡ್ತಾ ಇದೀನಿ ಅಂತ ಅಂದುಕೊಳ್ಳಬೇಡಿ
ಹೌದು ಇದು ಸಣ್ಣ ವಿಚಾರ ಆದ್ರೆ ಹಿಂದಿ ದಬ್ಬಾಳಿಕೆ, ಹಿಂದಿಯ ಮೇಲರಿಮೆ ಎಶ್ಟು ಅಳವಾಗಿದೆ ಹರಡಿಕೊಂಡಿದೆ ಅನ್ನೋದನ್ನು ನಾವು ಅರಿಯಬೇಕು. ಹಿಂದಿಗೆ ಕೊಡುವಶ್ಟು ಪ್ರಾಮುಖ್ಯತೆ ಬೇರೆ ಯಾವ ನುಡಿಗೂ ಕೊಡಲ್ಲ
ಹಿಂದಿ ಓದಲು ಬರೆಯಲು ಬರೋರು ಇದಾರಾ ಅವರಿಗೆ ಬೇಕೋ ಬೇಡವೋ ಎಂಬ ಯಾವುದೇ ವಿಚಾರ ಮಾಡದೆ ಎಲ್ಲ ಕಡೆ ಹಿಂದಿ ಸಹಜವಾಗಿ ಇರಬೇಕು ಅಂತ ಬಳಕೆ ಮಾಡ್ತಾ ಇದಾರೆ ಈ ಮೂಲಕ ಅವರು ಹಿಂದಿ ಎಲ್ಲಾ ಕಡೆ ಹರಡಿರುವ ನುಡಿ ಅಂತ ತೋರಿಸಲು ಪ್ರಯತ್ನ ಮಾಡ್ತಾ ಇದ್ದಾರೆ. ಈ ಪ್ರಯತ್ನದ ವಿರುದ್ಧ ನಾವುಗಳು ನಿಲ್ಲಬೇಕು.
#stopHindiImposition

• • •

Missing some Tweet in this thread? You can try to force a refresh
 

Keep Current with ಕ್ರುಶಿಕ ಎವಿ/Krushika AV

ಕ್ರುಶಿಕ ಎವಿ/Krushika AV Profile picture

Stay in touch and get notified when new unrolls are available from this author!

Read all threads

This Thread may be Removed Anytime!

PDF

Twitter may remove this content at anytime! Save it as PDF for later use!

Try unrolling a thread yourself!

how to unroll video
  1. Follow @ThreadReaderApp to mention us!

  2. From a Twitter thread mention us with a keyword "unroll"
@threadreaderapp unroll

Practice here first or read more on our help page!

More from @KrishKrushik

Dec 12
ಗುಜರಾತಿನ ಹಾಲು ಸಹಕಾರ ಮಹಾಮಂಡಲ ಅಮುಲ್ ದೊಡ್ಡ ಮಟ್ಟದಲ್ಲಿ ಮಾರುಕಟ್ಟೆ ವಿಸ್ತರಣೆ ಮಾಡ್ತಿದೆ. ಅಮುಲ್ ಸು.೨೦೦೦ಹೆಚ್ಜು ಹಾಲಿನ ಉತ್ಪನ್ನಗಳನ್ನು ಮಾಡಿ ಮಾರಾಟ ಮಾಡ್ತಿದೆಯಂತೆ. ನಮ್ಮ ಪಕ್ಕದ ಕೇರಳದಲ್ಲಿ ಅಮುಲ್ ಮಳಿಗೆಗಳು ನುರಾರಿವೆ. ಆದ್ರೆ ನಮ್ಮ ನಾಡಿನ ನಂದಿನಿ-ಕರ್ನಾಟಕ ಹಾಲು ಸಹಕಾರ ಮಹಾಮಂಡಲದ ಉತ್ಪನ್ನಗಳ ಎಣಿಕೆ ೧೧೦ಕೂಡ ದಾಟೋಲ್ಲ.
ಇನ್ನೂ ನಂದಿನಿ ಮಳಿಗೆಗಳು ಕರ್ನಾಟಕದ ಎಲ್ಲೆಡೆ ಬೇಕಾದಷ್ಟು ಇಲ್ಲ. ಕೆ.ಎಂ.ಎಫ್ ಉಳ್ಕೊಂಡಿರೋದು ರಾಜಕೀಯ ಮಾಡೋಕೆ ಅಂತ ಆಗಿ ಬಿಟ್ಟಿದೆ. ರಾಜಕಾರಾಣಿಗಳನ್ನು ಕೆ.ಎಂ.ಎಫ್ ಇಂದ ಓಡಿಸಿ ಸುಧಾರಣೆ ಮಾಡುವ ಅಗತ್ಯವಿದೆ. ಹೊಸ ಹೊಸ ಉತ್ಪನ್ನಗಳನ್ನು ಮಾಡಿ ಎಲ್ಲಾ ಕಡೆ ಅದನ್ನು ತಲುಪಿಸುವ ಅಗತ್ಯವಿದೆ. ರೈತರು ಈ ಸಂಸ್ಥೆ ಉಳಿಯಬೇಕು ಅಂದ್ರೆ ಕೇವಲ ಹಾಲು
ಹಾಕೋದು ಮಾಡ್ತಾ ಗೋಳಾಟ ಮಾಡಿಕೊಂಡು ಇದ್ದರೆ ಸಾಲದು. ಒಗ್ಗೂಡಿದ ಹೋರಾಟ ಸಂಸ್ಥೆಯ ಸುಧಾರಣೆಗಾಗಿ ಮಾಡಬೇಕು ಅಮುಲ್ ಬಿಟ್ಟರೆ ಎರಡನೆಯ ಜಾಗದಲ್ಲಿ ನಂದಿನಿಯೇ ಇರುವುದು. ಆದ್ರೆ ನಂದಿನಿ ಗುಣಮಟ್ಟ ಕಡಿಮೆ ಆಗ್ತಿದೆ ಅನ್ನೋ ಆರೋಪದ ಜೊತೆಗೆ ಪಕ್ಕದ ನಾಡಿನ ಹಾಲಿನ ಕಂಪನಿಗಳು ವಿಸ್ತರಣೆ ಆಗ್ತಿವೆ. ಇದೇ ರೀತಿ ಮುಂದುವರೆದರೆ ನಂದಿನಿ ಅಮುಲ್ ಜೊತೆಗೆ ವಿಲೀನ
Read 4 tweets
Dec 11

ಮಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜು ಒಂದು ನಾಲ್ಕು ಮುಸ್ಲಿಂ ಹೆಣ್ಮಕ್ಕಳನ್ನು ಕಲಿಕೆಮನೆಯಿಂದ ಅಮಾನತು ಮಾಡಿದೆ.
ಆ ಹೆಣ್ಮಕ್ಕಳ ಅಪರಾಧ ಬುರ್ಕಾ ಹಾಕಿಕೊಂಡು ಹಾಡಿಗೆ ವೇದಿಯಲ್ಲಿ ಕುಣಿದಿರೋದು.
ಅವರ ಕುಣಿತದ ವಿಡಿಯೋ ವೈರಲ್ ಆಗಿ ಮುಸ್ಲಿಂ ಮೂಲಭೂತವಾದಿ ಗಂಡಸರು ಇದು ಇಸ್ಲಾಂಗೆ ಉದ್ದೇಶಪೂರ್ವಕವಾಗಿ ಮಾಡಿದ ಅವಮಾನ
ಅಂತ ಹುಯಿಲೆಬ್ಬಿಸಿ, ಆ ಮಕ್ಕಳನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿ ಬಯ್ದು ಕೊನೆಗೆ ಕಾಲೇಜು ಅವರನ್ನು ತೆಗೆದು ಹಾಕಿದೆ. ಇನ್ನು ಆ ಹೆಣ್ಮಕ್ಕಳಿಗೆ ಕಲಿಕೆ ಇಲ್ಲ.

ಅಲ್ರಯ್ಯ ಮುಸ್ಲಿಂ ಗಂಡಸರೇ ಬುರ್ಕಾ/ಹಿಜಾಬ್ ಆಯ್ಕೆ ಅಂತೀರಾ ಅದನ್ನು ಆ ಹೆಣ್ಮಕ್ಕಳು ಹಾಕಿಕೊಂಡಿದ್ದಾರೆ. ಈಗೇನು ಕುಣಿತ ಇಸ್ಲಾಂ ಅಲ್ಲಿ ನಿಷಿದ್ಧವೇ?
ಆ ಮಕ್ಕಳು ಕುಣಿಯುವ ಆಸೆ ಇಟ್ಟುಕೊಂಡವರು ಸ್ವತಂತ್ರ ನಾಡು ನಮ್ಮದು ಕುಶಿಯಿಂದ ಕುಣಿದಿದ್ದಾರೆ ನಿಮ್ಮ ಗಂಟೆನು ಕರ್ಚಾಗಿದ್ದು?
ಹಿಂದೊಮ್ಮೆ ಸಾಗರದ ಮುಸ್ಲಿಂ ಹೆಣ್ಮಗಳು ರಿಯಾಲಿಟಿ ಹಾಡಿನ ಕಾರ್ಯಕ್ರಮದಲ್ಲಿ ಭಕ್ತಿ ಹಾಡು ಹಾಡಿದಳು ಅಂತ ಗದ್ದಲ ಮಾಡಿದ್ರು ಈಗ ಕುಣಿತ ಮಾಡಿದ್ರು ಅಂತ ಗದ್ದಲ
ಹೆಣ್ಮಕ್ಕಳು ನಿಮ್ಮ ಗುಲಾಮರು ಅಂತ ಅಂದುಕೊಂಡಿದ್ದೀರಾ?
Read 5 tweets
Dec 10
Came across this Civil servant VedveerArya 1997 batch IDAS at present Joint Secretary and additional FA (R&D), ministry of defence.
He is also mentor of ITHIHASA,Eternal Hindu NGO started by RSS ideologue KN Govindacharya.
Like him there are many directly& indirectly associated ImageImage
with the RSS/Hindutva, at different level and capacities. Politicians getting associated directly with RSS works is one thing but serving civil servant's association is strange, disturbing. That too working in ministry of defence. Civil service code of conduct allows this?
Ministry of culture is now full time working on popularising RSS agenda/hindutva through various activities. They in collaboration with IGNCA organising talk about Suryasidhanta(I don't have any issues with the talk or topic)
Lt.Col.PrasadShrikatPurohit case should be remembered
Read 4 tweets
Nov 13
ಅಡಿಕೆ ಬೆಳೆ-ಮಲೆನಾಡಿನ ಶಾಪ.

ಅಡಿಕೆಗೆ ಸುಮಾರು ೪೫೦೦-೫೦೦೦ ಏಡುಗಳ ಇತಿಹಾಸವಿದೆ. ಪಿಲಿಪೈನ್ಸ್ ನಾಡಿನಲ್ಲಿ ಇದರ ಬಳಕೆಯ ಮೊದಲ ಕುರುಹುಗಳು ನಮಗೆ ಸಿಗುತ್ತವೆ. ಆ ಹೊತ್ತಿನಿಂದ ಈ ಹೊತ್ತಿನವರೆಗೆ ಆ ನಾಡಿನಿಂದ ನಮ್ಮ ನಾಡಿನವರೆಗೆ ಅಡಿಕೆಯ ಬಳಕೆ ಹಾಗೂ ಪ್ರಾಮುಖ್ಯತೆ ಬಹುತೇಕ ಒಂದೇ ತೆರನಾಗಿದೆ.
ಅಡಿಕೆ ವೀಳ್ಯದ ಎಲೆ ಇದಕ್ಕೆ ರಾಜ ಮರ್ಯಾದೆ ಇದೆ
ಪೂಜನೀಯ ಜಾಗವನ್ನು ಕೊಡಲಾಗಿದೆ.
ಅಂತಹ ಅಡಿಕೆ ಹತ್ತಿಪ್ಪತ್ತು ಏಡುಗಳವರೆಗೆ ಕರ್ನಾಟಕದ ಮಲೆನಾಡು ಹಾಗೂ ಕರಾವಳಿಯಲ್ಲಿ ಮಾತ್ರ ಮುಕ್ಯ ವಾಣಿಜ್ಯ ಬೆಳೆ ಆಗಿತ್ತು. ಇದರ ಬಳಕೆ ಸೀಮಿತವಾಗಿದ್ದು ಗುಟುಕಾ ಬರುವವರೆಗೂ ಅಂತಹ ದೊಡ್ಡ ಮಾರುಕಟ್ಟೆಯೇ ಇರ್ಲಿಲ್ಲ ಅಂತ ಹೇಳಿದ್ರೂ ತಪ್ಪಾಗಲಾರದು.
ಈಗಲೂ ಬಳಕೆಯಲ್ಲಿರೋ ಬಹುತೇಕ ಅಡಿಕೆ ಗುಟುಕಾ ಮಾರುಕಟ್ಟೆ
ನಿಯಂತ್ರಣದಲ್ಲಿದೆ.
ಅಡಿಕೆ ಹಾಕೋದು ಒಂದೆರಡು ಗ್ರಾಮ್ ಮಾತ್ರ ಆದ್ರೆ ಇಡಿಯ ಗುಟುಕಾ ಪೊಟ್ಟಣವೇ ಅಡಿಕೆ ಅನ್ನೋ ಭಾವನೆ ಹುಟ್ಟುಹಾಕಿದೆ ಗುಟುಕಾ ಉದ್ದಿಮೆ.
ಮಲೆನಾಡಿನ ವಾತಾವರಣ ಮಣ್ಣು ಗುಡ್ಡ ಜಾಗಕ್ಕೆ ಅಡಿಕೆಯಂತ ಗಟ್ಟಿ ಜಾತಿಯ ಗಿಡ ಅಷ್ಟೇ ಬದುಕಿ ಲಾಭ ಬರುವಷ್ಟು ಬೆಳೆ ಕೊಡಬಲ್ಲುದು.
ಕಾಫಿ ಇತ್ಯಾದಿ ವಾಣಿಜ್ಯ ಬೆಳೆಗಳು ೫೦-೬೦ನೇ ದಶಕದ ವರೆಗೂ
Read 22 tweets
Aug 22
ಶೂದ್ರರಿಗೆ, ಬಹುಜನರಿಗೆ ಅವರ ಹುಟ್ಟಿನ ಜಾತಿಯ ಬಗ್ಗೆ, ಅವರ ಸಾಮಾಜಿಕ ಅಂತಸ್ತಿನ ಬಗ್ಗೆ, ಊಟದ ಪದ್ದತಿ ಬಗ್ಗೆ,ಆಚರಣೆ ನಂಬಿಕೆಗಳ ಬಗ್ಗೆ ಸಣ್ಣ ವಯಸ್ಸಿನಿಂದಲೇ ಕೀಳರಿಮೆ ತುಂಬಲಾಗುತ್ತದೆ
ಬಾಡೂಟ ಅಂದ್ರೆ ಅಶುದ್ದ,ಅಪವಿತ್ರ ಅದು 'ಶುಭ'ಕಾರ್ಯಗಳಿಗೆ ಸಲ್ಲದು,ದೇಗುಲಗಳ ಪಾವಿತ್ರ್ಯಕ್ಕೆ ಹೊಂದದು ಅಂತ ನಂಬಿಸಲಾಗುತ್ತದೆ
#ಬಾಡೂಟ_ವಿರೋಧಿ_ಮನುವಾದಿಗಳು
ಇದಕ್ಕೆ ತರಕಾರಿ ಅಂಗಡಿ/ಸಂತೆ ಊರ ಮಧ್ಯದಲ್ಲಿ ಎಲ್ಲರ ಸಂಗಡ ಇದ್ದಾರೆ ಬಾಡು ಅಂಗಡಿ ಊರ ಹೊರಗೆ. ತರಕಾರಿ ಯಾವುದೇ ಮುಜುಗರವಿಲ್ಲದೆ ಕೊಂಡು ಎಲ್ಲೆಡೆ ಒಯ್ಯಬಹುದು ಆದ್ರೆ ಬಾಡು ಹಾಗಲ್ಲ ಕಪ್ಪು ಪ್ಲಾಸ್ಟಿಟ್ ತೊಟ್ಟೆಯಲ್ಲಿ ಮುಚ್ಚಿಟ್ಟು. ಯಾರಾದ್ರೂ ಅಪ್ಪಿತಪ್ಪಿ ಗಿಡದೂಟ ಉಣ್ಣುವವರು ಏನದು ಅಂತ ಕೇಳಿದ್ರೂ ಹೇಳಲಾಗದ ಮುಜುಗರ
#ಬಾಡೂಟ_ವಿರೋಧಿ_ಬಿಜೆಪಿ
ಬಾಡು ಊಟ ಅದ್ರ ಬಗ್ಗೆ ಹೆಮ್ಮೆ ಅಥವಾ ಅಹಂಕಾರ ತೋರುವಂತದ್ದು ಎನಿಲ್ಲದೆ ಇದ್ರು ಕೀಳರಿಮೆ ಪಡುವಂತದ್ದು ನಾಚಿಕೆ ಮುಜುಗರ ಅಪರಾಧಿ ಭಾವ ಇರುವಂತದ್ದು ಕೂಡ ಎನಿಲ್ಲ.
ಗಿಡದೂಟ ಉಣ್ಣುವವರು ತಮ್ಮ ಊಟದ ಪದ್ದತಿ ಬಗ್ಗೆ ಹೆಮ್ಮೆಯನ್ನು ಅತಿಯಾದ ಅಭಿಮಾನವನ್ನು ಹೊಂದುವ ಸಾಮಾಜಿಕ ವ್ಯವಸ್ಥೆ ಧಾರ್ಮಿಕ ನಂಬಿಕೆ ನಮ್ಮ ನಡುವಿದೆ.
#ಬಾಡೂಟ_ವಿರೋಧಿ_ಸಂಘಿಗಳು
Read 9 tweets
Aug 22
@siddaramaiah ಅವ್ರೇ, ನೀವು ವೇದಿಕೆಯಲ್ಲಿ ಮಾತಾಡ್ತಾ 'ನಾವೇನು ಕಯ್ಗೆ ಬಳೆ ಹಾಕ್ಕೊಂಡಿದಿವಾ' ಅಂತೇಳಿ, ತಾವು ಕಯ್ಲ್ಯಾಗದವರು ಅಲ್ಲ 'ಗಂಡಸರು' ಅನ್ನೋ ಅರ್ತದಲ್ಲಿ ಹೇಳಿದ್ದೀರಿ. ಅದು ತಪ್ಪು.
ಸಿಟ್ಟಲ್ಲಿ ಸಾಮಾನ್ಯವಾಗಿ ಗಂಡಸರು ಪ್ರಚಲಿತದಲ್ಲಿರೋ ಈ ಹೇಳಿಕೆ ಕೊಟ್ಟುಬಿಡುತ್ತೇವೆ. ಅದು ಹೆಣ್ಣು ಕಯ್ಲ್ಯಾಗದವಳು ಗಂಡಸರು ಮಾತ್ರ ಸಶಕ್ತ/ಶ್ರೇಷ್ಠ
ಅನ್ನೋ ಲಿಂಗತ್ವ ಭೇದ, ಮೇಲರಿಮೆ ಹೇಳುತ್ತದೆ.
ಸಾಮಾಜಿಕ ನ್ಯಾಯದ ಅರಿವಿರುವ ತಾವು ಲಿಂಗತ್ವ ಸಮಾನತೆ ಬಗ್ಗೆಯೂ ಕೆಲಸ ಮಾಡಿದ್ದೀರಿ ಹಾಗಿರುವಾಗ ಇಂತಹ ಗಂಡಸು ಪ್ರಧಾನ ವ್ಯವಸ್ತೆ ಪ್ರತಿಪಾದಿಸುವ ಹೇಳಿಕೆಗಳು ಮಾಡಿರುವ ಕೆಲಸ ಬೋಧಿಸುವ ಅರಿವಿಗೆ ವಿರುದ್ದವಾಗುತ್ತದೆ. ಮಾತಾಡುವಾಗ ಜಾಗೃತೆವಹಿಸಿ.
ಇಂತಹ ಗಂಡಸ್ತನದ ಮನಸ್ಥಿತಿ ಬಹುತೇಕರಲ್ಲಿ ಇದೆ.
ಹಾಗಾಗಿ ಬಾಡೂಟ ತಿನ್ನೋದನ್ನು ವಿವಾದ ಮಾಡ್ತಾರೆ ಆದ್ರೆ ಇದನ್ನು ಮಾಡಲ್ಲ. ಇದು ಚರ್ಚೆಯಾಗಬೇಕಾಗಿದ್ದ ವಿಚಾರ ಬಾಡೂಟ ನಮ್ಮ ಹಕ್ಕು ನಮ್ಮ ಆಯ್ಕೆಯ ವಿಚಾರ.
ಹಾಗಾಗಿ ಇನ್ನೊಮ್ಮೆ ಬಳೆ/ಬಳೆ ತೊಡುವುದು ಅಸಮರ್ತತೆಯ ಸಂಕೇತ ಅಲ್ಲ, ಹೆಣ್ಣು ಗಂಡಿಗಿಂತ ಹೆಚ್ಚು ಶಕ್ತಿವಂತೆ ಸಮರ್ತೆ.
#GenderBias
#ಬಾಡೂಟ_ವಿರೋಧಿ_ಬಿಜೆಪಿ
#ಬಾಡೂಟ_ವಿರೋಧಿ_ಮನುವಾದಿಗಳು
Read 4 tweets

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3/month or $30/year) and get exclusive features!

Become Premium

Don't want to be a Premium member but still want to support us?

Make a small donation by buying us coffee ($5) or help with server cost ($10)

Donate via Paypal

Or Donate anonymously using crypto!

Ethereum

0xfe58350B80634f60Fa6Dc149a72b4DFbc17D341E copy

Bitcoin

3ATGMxNzCUFzxpMCHL5sWSt4DVtS8UqXpi copy

Thank you for your support!

Follow Us on Twitter!

:(