ಶ್ರೇಯಾ🚩🚩🚩Shreya🌹❤️🇮🇳श्रेया 🚩🚩🚩 Profile picture
🇮🇳Proud to be Sanatani🚩Modi.. Yogi.. Follower 🚩🚩 ರಾಷ್ಟ್ರೀಯವಾದಿ ಹಿಂದೂ 🚩🚩ಹರ ಹರ ಮಹಾದೇವ 🙏🕉️ 🔱ಓಂ ನಮಃ ಶಿವಾಯ 🔱🕉️ ಜೈ ಗೋಡ್ಸೆ ಜೀ🔥🚩#ಕಟ್ಟರ್_ಕೋಮುವಾದಿ_ಪಡೆ🚩
Jul 15, 2023 16 tweets 3 min read
ನೈಜ ಪರಿಶುದ್ಧ ಪ್ರೇಮ ಕಥೆ❤️

ಹೆಸರು ಕ್ಯಾಪ್ಟನ್ ವಿಕ್ರಮ್ ಬಾತ್ರಾ
ಇಂದಿನ ಪೀಳಿಗೆಯ Love Story ಗಳನ್ನು ನೋಡಿದಾಗ ಅಸಹ್ಯ ಆಗುತ್ತದೆ.
ಪ್ರೇಮಕ್ಕೆ ಎಷ್ಟು ಸಂಕುಚಿತವಾದ ಅರ್ಥವನ್ನು ಇಂದಿನ ಪೀಳಿಗೆ ಕಲ್ಪಿಸಿಕೊಂಡಿದೆ.

ಬಹುತೇಕ ಜನರಿಗೆ ಆಕರ್ಷಣೆಗೂ,ಪ್ರೇಮಕ್ಕೂ ವ್ಯತ್ಯಾಸ ಗೊತ್ತಿಲ್ಲ.ಕಾಮಕ್ಕೂ ಪ್ರೇಮಕ್ಕೂ ವ್ಯತ್ಯಾಸ ಗೊತ್ತಿಲ್ಲ.
೧/೧೬ Image ಪ್ರೇಮ ಅನ್ನೋದು ಅತ್ಯಂತ ಪವಿತ್ರವಾದುದು.... ನಿಜವಾದ ಪ್ರೇಮ‌ ಸೋಲೋಕೆ, ಜನರಿಂದ Respect ಅನ್ನು ಗಳಿಸದಿರೋಕೆ ಸಾಧ್ಯವೇ ಇಲ್ಲ.

I can bet my Life on it....

ನಿಮಗೆ ನಿಜವಾಗಲೂ ಓರ್ವ Right Partner choose ಮಾಡಿಕೊಳ್ಳುವ, ಪರಸ್ಪರರನ್ನು ಅರ್ಥ ಮಾಡಿಕೊಳ್ಳುವ, ನಿಮ್ಮಿಬ್ಬರ ಸಂಬಂಧವನ್ನು Handle ಮಾಡಬಲ್ಲ Maturity ಇದ್ದರೆ
೨/೧೬
Jul 8, 2023 24 tweets 4 min read
ಪುಟ್ಟ ಕತೆ😊

ಅದು ಕೆನರಾ ಬ್ಯಾಂಕ್ ನ ಕ್ಯಾಶ್ ಕೌಂಟರ್, ರಶ್ ಇತ್ತು. ಅಲ್ಲಿ ಒಬ್ಬರು ಸುಮಾರು 75 ವರ್ಷದ ಅಜ್ಜ ಕೈಯ್ಯಲ್ಲಿ ಚೀಟಿ ಯೊಂದನ್ನು ಹಿಡಿದು ಬಂದಿದ್ದರು. ಕ್ಯಾಶಿಯರ್ ಅವರ ಅಕೌಂಟ್ ಚೆಕ್ ಮಾಡಿದ 660 ರೂ ಮಾತ್ರ ಇತ್ತು ಕಳೆದ 2 ತಿಂಗಳಿಂದ 15 ಲಕ್ಷದ ಹೋಂ ಲೋನ್ ನ 14,000 ರೂ EMI ಕಟ್ಟಿರಲಿಲ್ಲ.
೧/೨೪ ಆ ಮನುಷ್ಯ.. ಕ್ಯಾಶಿಯರ್ ಸಿಟ್ಟಲ್ಲಿದ್ದ..
"ಏನಜ್ಜ 2 ತಿಂಗಳಿಂದ EMI ಕಟ್ಟಿಲ್ಲ ಅಕೌಂಟ್ ಅಲ್ಲಿ ಹಣ ಇಲ್ಲ ಏನಾಗಿದೆ ನಿಮಗೆ? " ಮತ್ತೆ ಕೂಗಿದ... ನೋಡಿ ಮಗ ಅಕೌಂಟ್ ಗೆ ಹಣ ಹಾಕಿರ್ತಾನೆ ಚೆಕ್ ಮಾಡಿ ಅಜ್ಜ ಮೆಲ್ಲಗೆ ಹೇಳಿದಾಗ ಈ ಬಾರಿ ಕ್ಯಾಶಿಯರ್ ನ ಬಿಪಿ ಏರಿತ್ತು...
"ನೋಡಿ ಅಜ್ಜ ಆಗದಿಂದ ಹೇಳಿದ್ದೇ ಹೇಳುತ್ತೀರಲ್ವ, ತಲೆ ಸರಿ ಇಲ್ವಾ?
೨/೨೪
May 23, 2023 8 tweets 2 min read
ಪ್ರಾಣ ಉಳಿಸಲು ಉಟ್ಟ ಸೀರೆ ಬಿಚ್ಚಿಕೊಟ್ಟ ಮಹಾತಾಯಿ ಮತ್ತು ಪಬ್ಲಿಕ್ ಟಿವಿಯ ಈ ಇಬ್ಬರು ಹೀರೋಗಳು...

ಮೊದಲು ಈ ಫೋಟೋದಲ್ಲಿ ಕಾಣುತ್ತಿರುವ ಸೀರೆಯ ಕಥೆ . ಮೊನ್ನೆ ಕೆ ಆರ್ ಸರ್ಕಲ್ ನ ಅಂಡರ್ ಪಾಸ್ ನಲ್ಲಿ ನೀರು ತುಂಬಿ ಕಾರಿನಲ್ಲಿ ಮುಳುಗಿದ್ದ ಕುಟುಂಬದವರು ಸಹಾಯಕ್ಕಾಗಿ ಅರಚಾಡುತ್ತಿದ್ರು.
೧/೮ Image ಲೋಕಾಯುಕ್ತ ಕಚೇರಿಯ ಬಳಿ ಇದ್ದ ರಿಪೋರ್ಟರ್ ನಾಗೇಶ್ ಅರಚಾಟದ ಸದ್ದು ಕೇಳಿ ಸ್ಥಳಕ್ಕೆ ಹೋಗುತ್ತಾರೆ. ಅವರ ಜೊತೆಗಿದ್ದ ಪಬ್ಲಿಕ್ ಟಿವಿ ಕ್ಯಾಬ್ ಚಾಲಕ ವಿಜಯ್ ಈಜು ಬರುತ್ತಿದ್ದರಿಂದ ಬೇರೆ ಯೋಚನೆ ಮಾಡದೇ ನೀರಿನೊಳಗೆ ಇಳಿದು ಅಲ್ಲಿದ್ದವರ ರಕ್ಷಣೆಗೆ ಮುಂದಾಗುತ್ತಾರೆ. ನಾಗೇಶ್ ರಸ್ತೆಯಲ್ಲಿ ಹೋಗೋ ಬರೋರನ್ನು ನಿಲ್ಲಿಸಿ ರಕ್ಷಣೆ
೨/೮
Mar 22, 2023 15 tweets 2 min read
ಯುಗಾದಿ🌱🌿🌿
ಯುಗಾದಿ ಸೃಷ್ಟಿಯ ಆರಂಭಕಾಲ. ಯುಗ ಮತ್ತು ಆದಿ ಶಬ್ದಗಳೇ 'ಯುಗಾದಿ' .ದಕ್ಷಿಣ ಭಾರತದಲ್ಲಿ ಚಂದ್ರನ ಚಲನೆಯನ್ನು ಗುರುತಿಸಿ ಮಾಡುವ ಯುಗಾದಿ ಚಾಂದ್ರಮಾನ ಯುಗಾದಿ ಆಚರಿಸುತ್ತಾರೆ. ಸೂರ್ಯ ಮೇಷ ರಾಶಿಗೆ ಬಂದಾಗ ಸೌರಮಾನ ಯುಗಾದಿ ಆಚರಿಸುತ್ತಾರೆ ಇದನ್ನು ಉತ್ತರ ಭಾರತದ ಹಲವು
೧/೧೫ ಕಡೆಗಳಲ್ಲಿ ಸೌರಮಾನ ಯುಗಾದಿ ಆಚರಿಸುತ್ತಾರೆ.
ಈ ವರ್ಷ ಶ್ರೀ ಶೋಭಕೃತ್ ನಾಮ ಸಂವತ್ಸರ, ಚೈತ್ರ ಮಾಸ, ಶುಕ್ಲ ಪಕ್ಷ, ಪಾಡ್ಯ ದಿನ, 22-03-2023 ಬುಧವಾರ, ಯುಗಾದಿ ಹಬ್ಬವನ್ನು ವಸಂತ ಋತುವಿನ ಆರಂಭ ದೊಂದಿಗೆ ಆಚರಿಸುತ್ತಾರೆ.ಪ್ರತಿ ಹಬ್ಬ ಹುಣ್ಣಿಮೆಗಳನ್ನು 'ಪ್ರಕೃತಿ' ಯನ್ನು ಮೂಲವಾಗಿಟ್ಟುಕೊಂಡು ಆಚರಿಸುವುದರಿಂದ ಹಬ್ಬಗಳು ವಿಶೇಷವಾಗುತ್ತದೆ
೨/೧೫
Mar 19, 2023 10 tweets 2 min read
ಅಮ್ಮ❤️
ಪಾತ್ರೆಗಳ ಕರ್ಕಶ ಶಬ್ದ ತಡರಾತ್ರಿವರೆಗು ಬರುತ್ತಿತ್ತು ಅಡಿಗೆ ಮನೆಯಿಂದ
ಅಮ್ಮಾ ಅಡಿಗೆ‌ಮನೆಯಲ್ಲಿದ್ದಾಳೆ?
ಮನೆಯ ಮೂವರು ಸೊಸೆಯಂದಿಯರು ನಿದ್ರಿಸಲು ಹೋಗಿದ್ದಾರೆ ,
ಅಮ್ಮಾ ಇನ್ನೂ ಅಡಿಗೆ‌ಮನೆಯಲ್ಲಿದ್ದಾಳೆ...
ಅಮ್ಮನ ಕೆಲಸ ಇನ್ನೂ ಬಾಕಿಯಿದೆ,ಆದರೆ ಕೆಲಸ ಎಲ್ಲರದೂ ಅಲ್ಲವೇ?
ಆದರೂ ಅಮ್ಮಾ ಎಲ್ಲರ ಕೆಲಸ ತನ್ನದು ಎಂದು ನಂಬುತ್ತಾಳೆ.
೧/೧೧ ಹಾಲು ಬಿಸಿ ಮಾಡಿ ತಣ್ಣಗಾಗಿಸಿ
ಮೊಸರು ಮಾಡಬೇಕು
ಯಾಕೆಂದರೆ ಬೆಳ್ಳಂಬೆಳಿಗ್ಗೆ ಮಗನಿಗೆ ಫ್ರೇಶ್ ಮಜ್ಜಿಗೆ ಕೊಡಬೇಕಲ್ಲವೇ...

ಸಿಂಕ್ ನಲ್ಲಿರುವ ಪಾತ್ರೆಗಳನ್ನು ಅಮ್ಮ ತಿಕ್ಕುತ್ತಿದ್ದಾಳೆ
ವಿಧಾನ ಬದಲಾಗಿರಬಹುದು ಶುಚಿಯಾಗಬೇಕಲ್ಲವೇ??
ಪಾತ್ರೆಗಳ ಶಬ್ದದಿಂದ
ಸೊಸೆ ಸುಪುತ್ರರ ನಿದ್ರೆ ಹಾಳಾಗುತ್ತಿದೆ
೨/೧೧
Jan 4, 2023 11 tweets 2 min read
#ಉಪಯುಕ್ತ_ಮಂತ್ರಗಳು
💠ಬೆಳಿಗ್ಗೆ ಎದ್ದ ಕೂಡಲೇ ಕೈಗಳನ್ನು ನೋಡುತ್ತಾ ಹೇಳುವ ಮಂತ್ರ:

♦ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೆ ಸರಸ್ವತಿl
ಕರಮೂಲೇ ತು ಗೋವಿಂದಃ (ಸ್ತಿಥ್ಥ ಗೌರಿ) ಪ್ರಭಾತೇ ಕರದರ್ಶನಂll

💠ಬೆಳಿಗ್ಗೆ ಎದ್ದ ಕೂಡಲೇ ನೆಲ ಮುಟ್ಟುವಾಗ ಹೇಳುವ ಮಂತ್ರ:
೧/೧೧ ♦ಸಮುದ್ರ ವಸನೆ ದೇವಿ ಪರ್ವತ ಸ್ತನಮಂಡಲೆl
ವಿಷ್ನುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೆll

💠ಸ್ನಾನ ಮಾಡುವ ಸಮಯದಲ್ಲಿ ನೀರನ್ನು ಮುಟ್ಟಿ ಹೇಳುವ ಮಂತ್ರ:

♦ ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು
೨/೧೧
Jan 3, 2023 14 tweets 2 min read
ಮಹಾಭಾರತದಲ್ಲಿ ಕರ್ಣ ಕೃಷ್ಣನ ಹತ್ರ ಕೇಳ್ತಾನೆ..

ನಮ್ಮಮ್ಮ ನನ್ನನ್ನ ಹಡೆದ ಕೂಡಲೇ ನದಿಯಲ್ಲಿ ತೇಲಿಸಿ ಬಿಟ್ಟು ಹೋದಳು. ಅವಳು ಮದುವೆಗೆ ಮೊದಲೇ ನನ್ನ ಹೆತ್ತಿದ್ದು ನನ್ನ ತಪ್ಪಾ?
ದ್ರೋಣಾಚಾರ್ಯರು ನಾನು ಕ್ಷತ್ರಿಯ ಅಲ್ಲ ಅನ್ನುವ ಕಾರಣ ಕೊಟ್ಟು ನನಗೆ ವಿದ್ಯೆ ಕಲಿಸಲಿಲ್ಲ.
೧/೧೪ ಅದೇ..ಪರಶುರಾಮರು ನಾನೊಬ್ಬ ಕ್ಷತ್ರಿಯ ಅನ್ನುವ ಕಾರಣಕ್ಕೆ ತಮ್ಮಿಂದ ಕಲಿತ ವಿದ್ಯೆಯೆಲ್ಲ ಸಮಯಕ್ಕೆ ಬಾರದಿರಲಿ ಎಂದು ಶಪಿಸಿಬಿಟ್ಟರು

ನಾನು ಕ್ಷತ್ರಿಯನೋ ಸೂತಪುತ್ರನೋ ಅಂತ ನನಗೇ ಗೊತ್ತಿರಲಿಲ್ಲ. ಇದರಲ್ಲಿ ನನ್ನ ತಪ್ಪೇನಿತ್ತು ಹೇಳು.

ಎಲ್ಲೋ ಅಕಸ್ಮಾತ್ತಾಗಿ ನನ್ನ ಬಾಣ ಹಸುವೊಂದನ್ನು ಕೊಂದುಬಿಟ್ಟಿತು.
೨/೧೪
Jan 2, 2023 5 tweets 1 min read
ಮಹಿಳೆಯೊಬ್ಬರು ಮನೆಗೆ ದಿನಸಿ ತರಲು ಅಂಗಡಿಗೆ ಹೋಗಿದ್ದರು.

ಅಂಗಡಿಯವ : ಅಮ್ಮಾ, ನಿಮಗೆ ಏನು ಬೇಕು?

ಮಹಿಳೆ : ಒಂದು ಕಿಲೋ ಹುರಿಗಡ್ಲೆ , ಒಂದು ಕಿಲೋ ಹೆಸರುಬೇಳೆ ಮತ್ತು ಒಂದು ಕಿಲೋ ಉದ್ದಿನ ಬೇಳೆಯನ್ನು ಕೊಡಿ ಎಂದು ಹೇಳಿ ಅಂಗಡಿಯವನ ಕೈಗೆ ಒಂದು ಬಟ್ಟೆ ಚೀಲವನ್ನು ಕೊಟ್ಟು ಎಲ್ಲವನ್ನೂ ಒಟ್ಟಿಗೆ ಇದಕ್ಕೇ ಹಾಕಿ ಕೊಡಿ ಎಂದರು.
೧/೫ ಅಂಗಡಿಯಾತ : ಆದರೆ ಅಮ್ಮಾ, ಇದರಲ್ಲಿ ಎಲ್ಲವೂ ಮಿಕ್ಸ್ ಆಗುತ್ತೆ!

ಮಹಿಳೆ : ಪರವಾಗಿಲ್ಲ ಹಾಕಿ, ಮನೆಯಲ್ಲಿ ಮೂವರು ಸೊಸೆಯಂದಿರು ನಿಷ್ಪ್ರಯೋಜಕರಾಗಿ ಸುಮ್ಮನೆ ಕುಳಿತಿದ್ದಾರೆ. ಅವರು ಎಲ್ಲವನ್ನೂ ಬೇರೆ ಬೇರೆ ಮಾಡುತ್ತಾರೆ.

ಅಂಗಡಿಯವನು ಮೂರೂ ಸಾಮಾನುಗಳನ್ನು ಚೀಲದಲ್ಲಿ ಒಟ್ಟಿಗೇ ಹಾಕಿ ಕೇಳಿದ : ಅಮ್ಮಾ, ನಿಮಗೆ ಇನ್ನೇನಾದರೂ ಬೇಕಾ?
೨/೫
Dec 24, 2022 29 tweets 4 min read
ವೈರಿ ಶಿಭಿರದೊಳಗಿನ ಭಾರತದ ಕಣ್ಣು ಕಿವಿಗಳಿವರು...🙏
ಅವರ ನಿಸ್ವಾರ್ಥ ಸಾಹಸಕ್ಕೊಂದು ಸೆಲ್ಯೂಟ್ 🫡🙏

ದಿಲ್ಲಿಯ ಪ್ರಗತಿ ವಿಹಾರ ದಲ್ಲಿ ದೇಶದ ಭದ್ರತೆಗೆ ಸಂಬಂಧಿಸಿದ ಹತ್ತಾರು ಕಟ್ಟಡ ಕಚೇರಿಗಳಿವೆ, ರಾಷ್ಟ್ರೀಯ ಗುಪ್ತಚರ ವಿಭಾಗ, ಇಂಡೋ ಟಿಬೇಟಿಯನ್ ಬಾರ್ಡರ್ ಫೋರ್ಸ್, ಸಿಬಿಐ ಹೀಗೆ ಬಹುತೇಕ ಸಂಸ್ಥೆಗಳ ಬೋರ್ಡ್ ನಿಮಗೆ ಕಾಣಸಿಗುತ್ತದೆ.
೧/೨೯ ಆದರೆ ಅದೊಂದು ಬಹು ಮಹಡಿ ಕಟ್ಟಡ ಮಾತ್ರ ಯಾವುದೇ ಬೋರ್ಡು ಹಾಕಿಕೊಳ್ಳದೇ ಅನಾಮದೇಯವಾಗಿ ನಿಂತಿದೆ. ಹಾಗಂತ ಒಳಗೇನಿದೆ ನೋಡೋಣ ಎಂದು ನಾವು ನೀವು ಹೋಗುವಂತೆಯೂ ಇಲ್ಲ. ಸಾರ್ವಜನಿಕರಿಗೆ ಅಲ್ಲಿ ಪ್ರವೇಶ ನಿಷಿದ್ಧ. ಅದು ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್ ಎಂಬ ಸಂಸ್ಥೆಯ ಕಚೇರಿ, ಜನರು ಆ ಸಂಸ್ಥೆಯನ್ನು ರಾ ಎಂದು ಸಂಬೋಧಿಸುತ್ತಾರೆ.
೨/೨೯
Dec 24, 2022 6 tweets 1 min read
ಇರುವ ಜೀವನವನ್ನು ಆನಂದಿಸಿ...😍
⏰ ವಯಸ್ಸು 20 ಇರುವಾಗ *"ಸ್ವದೇಶ" ಮತ್ತು "ವಿದೇಶ" ಎರಡೂ ಒಂದೇ.* (ನೀವು ಎಲ್ಲಿದ್ದರೂ ಪರವಾಗಿಲ್ಲ. ಅಲ್ಲಿಗೆ ಹೊಂದಿಕೊಳ್ಳುವಿರಿ)..

⏰ ವಯಸ್ಸು 30 ಆದಾಗ *"ರಾತ್ರಿ" ಮತ್ತು "ಹಗಲು " ಎರಡೂ ಒಂದೇ.* ( ಕೆಲವು ದಿನ ನಿದ್ದೆ ಇಲ್ಲದಿದ್ದರೂ ಏನೂ ತೊಂದರೆ ಆಗಲ್ಲ)....
೧/೬ ⏰ ವಯಸ್ಸು 40 ಆದಾಗ *"ಅತಿ ಹೆಚ್ಚು ಓದಿದವರು" ಮತ್ತು "ಕಡಿಮೆ ಓದಿದವರು" ಒಂದೇ.* ( ಕಡಿಮೆ ಓದಿದವರೂ ಕೆಲವೊಮ್ಮೆ ಹೆಚ್ಚು ಸಂಪಾದಿಸುತ್ತಾರೆ)...

⏰ ವಯಸ್ಸು 50 ಆದಾಗ *"ಸೌಂದರ್ಯ" ಮತ್ತು "ಕುರೂಪ" ಒಂದೇ.* (ನೀವು ಎಷ್ಟೇ ಸುಂದರವಾಗಿದ್ದರೂ, ಚರ್ಮ ನೆರಿಗೆ ಬೀಳುವುದು, ಅಲ್ಲಲ್ಲಿ ಕಪ್ಪಾಗುವುದು, ಮುಚ್ಚಿಡಲು ಸಾಧ್ಯವಿಲ್ಲ)
೨/೬
Dec 23, 2022 4 tweets 1 min read
#ತ್ಯಾಗ
ಅಮ್ಮಾ... ಯಾಕೋ ತುಂಬಾ ಬೆವರುತ್ತಾ ಇದೆ.. ನಾನು ಇವತ್ತು ತಣ್ಣೀರಲ್ಲಿ ಸ್ನಾನ ಮಾಡ್ತೀನಿ.. ನನ್ನ ಪಾಲಿನ ಬಿಸಿ ನೀರು ನೀನು ತಗೋ ಎಂದಳು ಸ್ಮಿತ. ತಾನು ತಣ್ಣೀರಲ್ಲಿ ಬೇಗ ಸ್ನಾನ ಮುಗಿಸಿ ಶಾಲೆಗೆ ಹೋದಳು. ಮಗಳ ಪಾಲಿನ ಬಿಸಿನೀರಲ್ಲಿ ಗೀತ ಸ್ನಾನ ಮುಗಿಸಿದಳು
1/4
ಮರುದಿವಸ ಪುನಃ, ಅಮ್ಮಾ, ನಾನು ನಿನ್ನೆ ತಣ್ಣೀರಲ್ಲಿ ಸ್ನಾನ ಮಾಡಿದೆನಲ್ಲ.. ತುಂಬಾ ಫ್ರೆಶ್ ಅನ್ನಿಸಿತ್ತು.. ಇನ್ಮೇಲೆ ತಣ್ಣೀರಲ್ಲಿಯೇ ಸ್ನಾನ ಮಾಡ್ತೀನಿ.. ಅತ್ತೆಗೆ ಹೇಳಬೇಡ. ನನ್ನ ಪಾಲಿನ ಬಿಸಿ ನೀರು ನೀನು ತಗೋ ಎಂದಳು ಸ್ಮಿತ. ಯಾಕಮ್ಮ.. ದಿನಾ ತಣ್ಣೀರಲ್ಲಿ ಸ್ನಾನ ಮಾಡಿದರೆ ನಿಂಗೆ ನೆಗೆಡಿಯಾಗಲ್ವೇ? ಎಂದು ತಾಯಿ ಕೇಳಿದಾಗ ಇಲ್ಲಮ್ಮ ..
2/4
Dec 22, 2022 5 tweets 2 min read
#ನೀತಿಕತೆ #ಮಾನವೀಯ_ಮೌಲ್ಯ

ಮನೆಯಲ್ಲಿ ಇದ್ದ ಹಳೆಕಾಲದ ಗೋಡೆ ಗಡಿಯಾರ ನೋಡಿದ 24ವರ್ಷದ ಮಗ ಒಂದು ದಿನ....ತನ್ನ ತಂದೆಗೆ ಹೇಳಿದ.....ಅಪ್ಪ ಈ ಹಳೆ ಕಾಲದ ಗಡಿಯಾರ ಗುಜರಿಗೆ ಮಾರಿ ಬಿಡಿ.....ಇವೆಲ್ಲ ಯಾರು ಇಟ್ಕೋಳ್ತಾರೆ ಈ ಕಾಲದಲ್ಲಿ ಎಂದ....
ತಂದೆ ತನ್ನ ಮಗನಿಗೆ ಉತ್ತರವಾಗಿ ಹೀಗೆ ಹೇಳಿದರು: "ಇದು ನಿನ್ನ ಅಜ್ಜ ನನಗೆ ನೀಡಿದ
೧/೫ ಗೋಡೆಗಡಿಯಾರ...ನಿನ್ನ ಅಜ್ಜನಿಗೆ ಅವರ ಅಪ್ಪ ನೀಡಿದ ಗೋಡೆ ಗಡಿಯಾರ ಇದು.... ಮತ್ತು.. ಇದಕ್ಕೆ 250 ವರ್ಷ ಆಗಿದೆ ಅಷ್ಟು ಹಳೆಯದು, ಆದರೆ... ನಾನು ಇದನ್ನು ನಿನಗೆ ಮಾರಲು ಅನುಮತಿ ಕೊಡುವ ಮೊದಲು .....ಗಡಿಯಾರವನ್ನು ಸಿಟಿಯಲ್ಲಿರುವ ದೊಡ್ಡ ಗಡಿಯಾರ ಅಂಗಡಿಗೆ ಹೋಗಿ ತೋರಿಸಿ, ಅವರತ್ರ 'ನಾನು ಅದನ್ನು ಮಾರಲು ಬಂದಿರುವೆ ಎಂದು ಹೇಳು' ,
೨/೫
Dec 21, 2022 5 tweets 1 min read
ನವದಂಪತಿಗಳು ಒಂದು ದಿನ ಒಂದು ಪಾರ್ಕಿನಲ್ಲಿ ಕೂತು ಮಾತನಾಡುತ್ತಿದ್ದರು .
ಒಮ್ಮಿಂದೊಮ್ಮೆಲೆ ಬೀದಿನಾಯಿಯೊಂದು ಜೋರಾಗಿ ಬೊಗಳುತ್ತಾ ಅವರ ಹತ್ತಿರ ಬಂತು. ಅದು ಖಂಡಿತ ಕಚ್ಚುತ್ತದೆ ಅಂತ ಅರಿತ ಆತ ತನ್ನ ಪ್ರೀತಿಯ ಪತ್ನಿಯನ್ನು ಮೇಲಕ್ಕೆ ಎತ್ತಿದ.
ಆತ ಮನಸಲ್ಲಿಯೇ ಹೇಳಿದ ಕಚ್ಚುವುದಾದರೆ ನನ್ನನ್ನು ಕಚ್ಚಲಿ.
೧/೫ ಆದರೆ ನನ್ನ ಪ್ರೀತಿಯ ಪತ್ನಿಯನ್ನು ಕಚ್ಚಲು ಬಿಡಲಾರೆ ಅಂತ ಆಕೆಯನ್ನು ಇನ್ನೂ ಮೇಲಕ್ಕೆ ಎತ್ತಿ ಹಿಡಿದ.
ನಾಯಿ ಬಂದು ಆತನ ಕಾಲ ಬಳಿ ಬಂದು ನಿಂತು ಎರಡುಬಾರಿ ಬೊಗಳಿತು. ಆತ ಮನಸಲ್ಲೇ ಹೇಳಿದ ನಾನು ಈಕೆಯ ಹತ್ತಿರ ಇರುವಾಗ ನೀನಲ್ಲ ನಿನ್ನ ಅಪ್ಪ ಬಂದರೂ ಆಕೆಯನ್ನು ಏನೂ ಮಾಡಲು ಬಿಡಲಾರೆ ಅಂತ ಆ ನಾಯಿಯ ಕಣ್ಣುಗಳನ್ನು ದಿಟ್ಟಿಸಿ ನೋಡಿದ...
೨/೫
Dec 6, 2022 4 tweets 1 min read
#ಫಿಟಿಂಗ್_ಇಟ್ಟು_ಫೈಟ್_ಮಾಡಿಸುವವನೆ_ನಿಜವಾದ_ಶತ್ರು

ನೀವು 200 ಕೆಂಪು ಇರುವೆ ಮತ್ತು 200 ಕಪ್ಪು ಇರುವೆಗಳನ್ನು ಒಂದೇ ಗಾಜಿನ ಬಾಟಲಿಯಲ್ಲಿ ಶಾಂತವಾಗಿ ಹಾಕಿ...ಬಾಟಲ್ ಒಳಗೆ ಸ್ವಲ್ಪ ಸಕ್ಕರೆ ಹಾಕಿ... ಏನೂ ಆಗುವುದಿಲ್ಲ..ಎಲ್ಲ ಇರುವೆಗಳು ಸಕ್ಕರೆಯನ್ನು ಹಂಚಿಕೊಂಡು ತಿನ್ನುವವು........ಆದ್ರೆ ಅವೆರಡೂ ಇರುವೆಗಳ ಗುಂಪಿನಲ್ಲಿ ವೈರತ್ವ Image ಬರಿಸಬೇಕು ಅಂತ ಇದ್ರೆ....ನೀವು ಅದೇ ಸಮಯದಲ್ಲಿ ಬಾಟಲ್ ಅನ್ನು ಅಲ್ಲಾಡಿಸಿದರೆ ಸಾಕು......ಆ ಇರುವೆಗಳು ಪರಸ್ಪರ ಒಂದಾನೊಂದು ಕೊಲ್ಲಲು ಪ್ರಾರಂಭಿಸುತ್ತವೆ..... ಕರಿ ಇರುವೆಗಳನ್ನು ತಮ್ಮ ಶತ್ರುಗಳೆಂದು ಕೆಂಪು ಬಣ್ಣದ ಇರುವೆಗಳು ಭಾವಿಸುತ್ತವೇ....ಮತ್ತು..... ಕರಿ ಇರುವೆಗಳು ಕೆಂಪು ಬಣ್ಣದ ಇರುವೆಗಳನ್ನು ತಮ್ಮ ಶತ್ರು ಎಂದು ನಂಬುತ್ತವೇ.
Dec 6, 2022 26 tweets 4 min read
ಕರುಣಾ ಜನಕ ಕಥೆ

ಅಡುಗೆ ಮನೆಯಿಂದ ಸೆರಗನ್ನು ಗಟ್ಟಿಯಾಗಿ ಹಿಡಿದು ಸರ ಸರ ಹೊರನಡೆದ ಮನೆ ಕೆಲಸದ ನಿರ್ಮಲಳನ್ನು ಆ ಮನೆಗೆ ಹೊಸದಾಗಿ ಬಂದಿದ್ದ ಸೊಸೆ ಅನುಮಾನದಿಂದ ನೋಡುತ್ತಾಳೆ.

ಮಾರನೆಯ ದಿನವೂ ಮನೆಕೆಲಸದವಳು ಎಲ್ಲಾ ಕೆಲಸ ಮುಗಿಸಿ ಹೋಗುವಾಗ ಸೆರಗನ್ನು ಗಟ್ಟಿ ಹಿಡಿದು ಸರ ಸರ ಹೋಗುತ್ತಾಳೆ.
೧/೨೬ ಮತ್ತೆ ಆ ಮನೆಯ ಎರಡನೆ ಸೊಸೆ ಸಾನ್ವಿಗೆ ಅನುಮಾನ ಬಂದು ಅತ್ತೆಗೆ ಹೇಳುತ್ತಾಳೆ. ಮನೆಕೆಲಸದವಳು ಬಹುಷಃ ದಿನಾ ಏನನ್ನೋ ಕದ್ದು ಹೋಗುತ್ತಿದ್ದಾಳೆ ಅತ್ತೆ ವಿಚಾರಿಸಿ ಅನ್ನುತ್ತಾಳೆ.ಆಗ ಅತ್ತೆ, "ಸಾನ್ವಿ, ನಿರ್ಮಲ ಆತರಹದವಳಲ್ಲ ಪಾಪ ಅವಳ ಗಂಡ ಗಾರೆ ಕೆಲಸಕ್ಕೆ ಹೋದಾಗ ಬಿದ್ದು ಸೊಂಟ ಮುರಿದಿದೆ.
೨/೨೬
Dec 6, 2022 8 tweets 1 min read
ತರಗತಿಯಲ್ಲಿ ಅಧ್ಯಾಪಕರು ಕೇಳುವ ಪ್ರಶ್ನೆಗೆ ಮಕ್ಕಳು ಉತ್ಸಾಹದಿಂದ ಉತ್ತರ ನೀಡುತ್ತಿದ್ದರು.

ಅಧ್ಯಾಪಕರು ಕೇಳಿದರು, "ರಾಮ ಒಂದು ತಾಸಿನಲ್ಲಿ 10 ಕಿಮೀ ದೂರದ ದಾರಿ ನಡೆದನು. ಸೋಮನೂ ಸಹ 10 ಕಿಮೀ ದಾರಿಯನ್ನು ಒಂದೂವರೆ ಗಂಟೆಯಲ್ಲಿ ನಡೆಯುತ್ತಾನೆ. ಹಾಗಾದರೆ ಈ ಇಬ್ಬರಲ್ಲಿ ಹೆಚ್ಚು ಆರೋಗ್ಯವಂತರು ಯಾರು? ಯಾರು ಹೆಚ್ಚು ಸದೃಢರು?
೧/೮ ಮಕ್ಕಳೆಲ್ಲರ ಉತ್ತರ... "ರಾಮನೇ ..."

ಅಧ್ಯಾಪಕರು ನಸುನಗುತ್ತಾ ಹೇಳಿದರು, "ಅಲ್ವಾ.. ಈಗ... ರಾಮನು ನಡೆದ ಆ 10 ಕಿಮೀ ದಾರಿ ಒಂದು ಸಪಾಟಾದ ರಸ್ತೆ. ಸೋಮನು ನಡೆದ ಆ 10 ಕಿಮೀ ದಾರಿ, ಕಲ್ಲು ಬಂಡೆಗಳ ನಡುವೆ, ಮುಳ್ಳು ಕಲ್ಲುಗಳ ... ತಗ್ಗು ದಿಣ್ಣೆಗಳಿಂದ ಕೂಡಿದ ದಾರಿ.. ಈಗ ನಿಮ್ಮ ಉತ್ತರ?"

ಈಗ..ಎಲ್ಲರ ಉತ್ತರ,"ಸೋಮನೇ ಹೆಚ್ಚು ಸದೃಢ!"
೨/೮
Dec 5, 2022 8 tweets 2 min read
#ಆಕಳ_ಹಾಲಿನಲ್ಲಿರುವ_ದೇವತೆಗಳು
ಗ್ರಹ_ಪ್ರವೇಶದಲ್ಲಿ ಯಾಕೆ ಹಾಲನ್ನು ಉಕ್ಕಿಸಬೇಕು ,
ಆಕಳಹಾಲಿಗೆ ಯಾಕಿಷ್ಟು ಮಹತ್ವ ಇದೆ ಅಂದರೆ ಆ ಹಾಲಿನ ಪ್ರತಿಯೊಂದು ಹಂತದಲ್ಲೂ ಒಬ್ಬೊಬ್ಬ ದೇವತೆಗಳಿದ್ದಾರೆ , ಅಗ್ನಿ ಹೋತ್ರ ,ಹವನ , ಭಗವಂತನ ನೈವೇದ್ಯಕ್ಕೆ , ಅಭಿಷೇಕಕ್ಕೆ ಆಕಳಹಾಲು ಅಮೃತಕ್ಕೆ ಸಮಾನ
೧/೮ ಮೊದಲು ಹಾಲು ದನದ ಕೆಚ್ಚಲಿನಲ್ಲಿರುತ್ತದೆ. ಐತರೇಯ ಆರಣ್ಯಕದಲ್ಲಿ ಹೇಳುವಂತೆ ‘ರೌದ್ರಂ ಗವಿಸತ್’.

ಕೆಚ್ಚಲಲ್ಲಿರುವ ಹಾಲಿಗೆ ರುದ್ರದೇವರು ದೇವತೆ.

ನಂತರ ಹಾಲನ್ನು ಕರೆಯುವುದಕ್ಕಾಗಿ ಕರುವನ್ನು ಬಿಡುತ್ತೇವೆ. ಕೆಚ್ಚಲಿಗೆ ಕರು ಬಾಯಿ ಹಾಕುವಾಗ ಅದರ ದೇವತೆ ವಾಯು.

ನಂತರ ಹಾಲು ಕರೆಯುವುದು;
೨/೮
Nov 27, 2022 4 tweets 1 min read
ವಿಭಿನ್ನ ಜನರು ಹೇಳುವ ಸುಳ್ಳು ಕಥೆಗಳು😜😁
1) ಆಪ್ತ ಸ್ನೇಹಿತ ಹೇಳಿದ ಸುಳ್ಳು ಕಥೆ-
"ಅವಳು ನಿನ್ನನ್ನೇ ನೋಡುತ್ತಿದ್ದಾಳೆ.."
2) ಬಸ್ ಕಂಡಕ್ಟರ್ ಹೇಳಿದ ಸುಳ್ಳು ಕಥೆ-
"Next ಗಾಡಿ ಖಾಲಿ ಇದೆ, ಅದರಲ್ಲಿ ಬನ್ನಿ.."
3) ಪೋಷಕರು ಹೇಳಿದ ಸುಳ್ಳು ಕಥೆ-
"10 th ವರೆಗೆ ಕಷ್ಟಪಟ್ಟರೆ ಸಾಕು.. ಆಮೇಲೆ ಆರಾಮವಾಗಿ ಇರಬಹುದು.." 4) ಕಾಲೇಜ್ ಪ್ರಿನ್ಸಿಪಾಲ್ ಹೇಳಿದ ಸುಳ್ಳು ಕಥೆ -
"ಈ ಕೋರ್ಸ್ ಗೆ ಮುಂದೆ ಬಹಳ ಸ್ಕೋಪ್ ಇದೆ.."
6) ಹೊಸದಾಗಿ ನೇಮಕಗೊಂಡ ಸ್ನೇಹಿತ ಹೇಳಿದ ಸುಳ್ಳು ಕಥೆ-
"ಸಂಬಳ ಕಡಿಮೆ, ಆದರೆ ಏನಂತೆ ಕಲಿಯಲು ಬಹಳಷ್ಟು ಅವಕಾಶ ಇದೆ.."
7) ಬಡ್ತಿ ತಿರಸ್ಕರಿಸುವಾಗ ಬಾಸ್ ಹೇಳಿದ ಸುಳ್ಳು ಕಥೆ-
"ನಿನ್ನ performance ತೃಪ್ತಿದಾಯಕವಾಗಿಲ್ಲ.."
Nov 27, 2022 7 tweets 2 min read
ಗೀತೆಯಲ್ಲಿ ಕೃಷ್ಣನಿಗೆ ಭಗವಂತ ಎಂದು ಹೇಳಲಾಗಿದೆ. ಭಗ ಎಂದರೆ ಯೋನಿ
ವಂತ ಎಂದರೆ ಹೊಂದಿರುವವನು ಭಗ+ವಂತ. ಭಗ ಅಥವಾ
ಯೋನಿ ಎಂದರೆ ಉತ್ಪತ್ತಿಸ್ಥಾನ, ಕಾರಣ ಅಥವಾ ಮೂಲ ಎಂದರ್ಥ. ಯೋನಿ ಸೃಷ್ಟಿಯ ಸಂಕೇತ. ಈ ಜಗತ್ತಿನ ಮೂಲದ ಸಂಕೇತ. ಯಾವುದರಿಂದ ಈ ಜಗತ್ತು ಹೊರಬಂತೋ, ಜಗತ್ತಿನ ಉತ್ಪತ್ತಿಕೇಂದ್ರ ಯಾವುದಿದೆಯೋ ಅದು ಭಗ(ಭಜ್) ಯಾವುದು ಈ
1/7 ಉತ್ಪತ್ತಿಯ ಕೇಂದ್ರ ಸ್ಥಾನವನ್ನು ಹೊಂದಿದೆಯೋ ಅದು ಭಗವಂತ. ಅಂದರೆ ದೇವರು. ದೇವರಿಂದಲೇ ಜಗತ್ತು ವ್ಯಕ್ತವಾಯಿತು ಎಂದರ್ಥ. ಭಗವತಿ, ಆದಿಶಕ್ತಿ, ಜಗನ್ಮಾತೆ ಇವೆಲ್ಲವೂ ಮೂಲ ಭಗವಂತನ ಹೆಸರುಗಳೇ.

ಸನಾತನಿಗಳ ಆಚರಣೆಯಾದ ಯೋನಿ ಪೂಜೆಯ ಹಿಂದಿರುವ ಮೂಲ ಅರ್ಥವೇ ಇದು. ಆದರೆ ವಿವೇಕಪೂರ್ಣವೂ, ವೈಜ್ಞಾನಿಕವೂ ಜ್ಞಾನಪೂರ್ಣವೂ,
2/7
Nov 26, 2022 7 tweets 1 min read
🙏🚩
ಸಾವಿರ ರೂಪಾಯಿಯ ನವಿಲುಗಳು!
ಪಕ್ಷಿಗಳನ್ನು ಮಾರುವ ಸಂತೆಯಲ್ಲಿ ಒಬ್ಬಾತ ನವಿಲುಗಳನ್ನು ಮಾರುತ್ತಿದ್ದ.

ಅಲ್ಲಿ ದೊಡ್ಡ ಬಲೆಯೊಂದರಲ್ಲಿ ಸಿಲುಕಿದ ಎಷ್ಟೋ ನವಿಲುಗಳು ಇದ್ದವು......!

ಅವುಗಳೊಂದಿಗೆ ಒಂದು ನವಿಲು ಪ್ರತ್ಯೇಕವಾಗಿ ಚಿಕ್ಕದಾದ ಪಂಜರವೊಂದರಲ್ಲಿತ್ತು ...!
೧/೭

ಗ್ರಾಹಕನೊಬ್ಬ ಕೇಳಿದ, "ನವಿಲಿನ ಬೆಲೆ ಎಷ್ಟು?" "೪೦ ರೂಪಾಯಿಗಳು" ಎಂದು ನವಿಲುಗಳನ್ನು ಮಾರುತ್ತಿದ್ದ ವ್ಯಕ್ತಿ ಹೇಳಿದ.

ಆಮೇಲೆ, ಆ ಗ್ರಾಹಕ ಚಿಕ್ಕ ಪಂಜರದಲ್ಲಿ ಪ್ರತ್ಯೇಕವಾಗಿದ್ದ ನವಿಲಿನ ಬೆಲೆ ಎಷ್ಟು ಎಂದು ಕೇಳಿದ.

ನವಿಲಿನ ವ್ಯಾಪಾರಿ, "ಅಸಲಿಗೆ ಅದನ್ನು ಮಾರಲು ನನಗಿಷ್ಟವಿಲ್ಲ....!" ಎಂದು ಹೇಳಿದ.

ಆದರೆ, ಆ ಗ್ರಾಹಕ ತನಗೆ ಅದೇ ನವಿಲು ಬೇಕು ಎಂದು ಹಠ ಹಿಡಿದ!
೨/೭
Nov 25, 2022 4 tweets 1 min read
ಹಾಸ್ಯ ಆದರೂ ನಿಜ ಅಲ್ವಾ...
''ವಿಸ್ಕಿ 'ಗೂ ಎರಡಕ್ಷರ
'ಬ್ರಾಂಡಿ ' ಗೂ ಎರಡಕ್ಷರ
'ರಮ್ ' ಗೂ ಎರಡಕ್ಷರ
'ಜಿನ್ ' ಗೂ ಎರಡಕ್ಷರ
ವೋಡ್ಕಾ ' ಗೂ ಎರಡಕ್ಷರ
'ವೈನ್ ' ಗೂ ಎರಡಕ್ಷರ
'ಬೀರ್ ' ಗೂ ಎರಡಕ್ಷರ
'ಸ್ಕಾಚ್ ' ಗೂ ಎರಡಕ್ಷರ

ಸುರಿಯುವ 'ಗ್ಲಾಸ್ ' ಗೂ ಎರಡಕ್ಷರ
ಬೆರೆಸುವ 'ನೀರು ' ಗೂ ಎರಡಕ್ಷರ
ಬೆರೆಸುವ 'ಸೋಡಾ 'ಗೂ ಎರಡಕ್ಷರ
೧/೪ ಮಾರಾಟ ಮಾಡುವ 'ಬಾರ್ ' ಗೂ ಎರಡಕ್ಷರ
ಅಳತೆ ಮಾಡುವ 'ಪೆಗ್ 'ಗೂ ಎರಡಕ್ಷರ
ಕುಡಿದ ಮೇಲೆ ಬರುವ 'ಮತ್ ' ಗೂ ಎರಡಕ್ಷರ.
ಕುಡಿದು ಮಾಡುವ 'ವಾಂತಿ 'ಗೂ ಎರಡಕ್ಷರ.
ಮತ್ತೇರಿ ಬೀಳುವ 'ಗುಂಡಿ 'ಗೂ ಎರಡಕ್ಷರ.
ಹೊತ್ತೊಯ್ಯುವ 'ಜನ 'ರಿಗೂ ಎರಡಕ್ಷರ.
ಹೋಗುವ 'ಮಾನ 'ಕ್ಕೂ ಎರಡಕ್ಷರ.
ಕಣ್ಣೀರು ಹಾಕುವ 'ಪತ್ನಿ 'ಗೂ ಎರಡಕ್ಷರ.
ಬರುವ 'ರೋಗ ' ವೂ ಎರಡಕ್ಷರ.
೨/೪