Dr. Bharatashree V M🇮🇳 Profile picture
Sep 30, 2020 16 tweets 4 min read Read on X
ಉರ್ದು ಮೂಲದ ಈ ಕವಿತೆ ನಿಮಗಾಗಿ ಅರ್ಪಣೆ..

ನೀನು ರಾತ್ರಿ ಬರಿ ನಾವು ಚಂದಿರ ಗೀಚುವೆವು
ನೀನು ಜೈಲಿಗೆ ನೂಕು, ನಾವು ಗೋಡೆಗಳ ಮೇಲೆ ಬರೆಯುವೆವು

ನೀನು ಎಫ್ಐಆರ್ ಹಾಕು ನಾವು ಸದಾ ಸಿದ್ಧ ಎಂದು ಬರೆಯುವೆವು
ನೀನು ನಮಗೆ ಕೊಲೆ ಮಾಡು , ದೆವ್ವಗಳಾಗಿ ನಮ್ಮ ಕೊಲೆಗಳ ಒಂದೊಂದು ಸಾಕ್ಷಿ
ಬರೆಯುವೆವು
ನೀನು ನ್ಯಾಯಾಲಯದಲ್ಲಿ ಕುಳಿತು ಒಳ್ಳೆಯ ಜೋಕುಗಳನು ಬರಿ,
ನಾವು ರಸ್ತೆಯಲಿ, ಗೋಡೆಯಲಿ ನ್ಯಾಯ ಬರೆಯುವೆವು
ಕಿವುಡ ಸಹ ಕೇಳುವ ಹಾಗೆ ಗಟ್ಟಿಯಾಗಿ ಮಾತನಾಡುವೆವು

ಕುರುಡನೂ ಸಹ ಓದುವಷ್ಟು ಸ್ಪಷ್ಟವಾಗಿ ಬರೆಯುವೆವು
ನೀನು ಕರಿ ಕಮಲ ಬರಿ, ನಾವು ಕೆಂಗುಲಾಬಿ ಬಿಡಿಸುವೆವು
ನೀನು ಭೂಮಿ ಮೇಲೆ ದೌರ್ಜನ್ಯ ಬರಿ
ನಾವು ಆಗಸದಲಿ ಕ್ರಾಂತಿ ಬರೆಯುವೆವು
ಎಲ್ಲ ನೆನಪಿಡಲಾಗುವುದು‌ ಒಂದೂ ಬಿಡದೇ ನೆನಪಿಡಲಾಗುವುದು
ನಿನ್ನ ದುಬಾರಿ ಇಂಕಿನಿಂದ ಸುಳ್ಳಿನ ಕಂತೆ ಬರೆಯುವಿ ಎಂದು ತಿಳಿದಿದೆ,
ಆದರೆ ನಮ್ಮ ಅಗ್ಗದ ರಕ್ತದಿಂದಾರೂ ಸರಿ ಸತ್ಯ ಖಂಡಿತ ಬರೆದೇ ಬರೆಯಲಾಗುವುದು.

ಎಲ್ಲ ನೆನಪಿಡಲಾಗುವುದು ಒಂದೂ ಬಿಡದೇ ನೆನಪಿಡಲಾಗುವುದು
ಜೊತೆಗೆ ನಿನ್ನ ಲಾಠಿ ಹಾಗೂ ಗುಂಡಿನಿಂದ,
ತೀರಿರುವ ನನ್ನ ಪ್ರತಿ ಗೆಳೆಯರ ನೆನಪಿನಲಿ,
ಹೃದಯ ಮುರಿದಿಟ್ಟು ಕೊಳ್ಳಲಾಗುವುದು‌.

ಎಲ್ಲ ನೆನಪಿಡಲಾಗುವುದು‌ ಒಂದೂ ಬಿಡದೇ ನೆನಪಿಡಲಾಗುವುದು
ನಿನ್ನ ದುಬಾರಿ ಇಂಕಿನಿಂದ ಸುಳ್ಳಿನ ಕಂತೆ ಬರೆಯುವಿ ಎಂದು ತಿಳಿದಿದೆ,
ಆದರೆ ನಮ್ಮ ಅಗ್ಗದ ರಕ್ತದಿಂದಾರೂ ಸರಿ ಸತ್ಯ ಖಂಡಿತ ಬರೆದೇ ಬರೆಯಲಾಗುವುದು.
ಎಲ್ಲ ನೆನಪಿಡಲಾಗುವುದು ಒಂದೂ ಬಿಡದೇ ನೆನಪಿಡಲಾಗುವುದು
ಜೊತೆಗೆ ಮೊಬೈಲು, ಫೋನು, ಇಂಟರ್ನೆಟ್ ಹಾಡಹಗಲೇ ಬಂದು ಮಾಡಿಸಿ,
ಥರಗುಟ್ಟುವ ಚಳಿಯಲಿ ಇಡೀ ನಗರವನ್ನು ಕಣ್ಮುಚ್ಚಿಸಿದಾಗ,
ಸುತ್ತಿಗೆ ತೆಗೆದುಕೊಂಡು ನನ್ನ ಮನೆಯಲಿ ನುಗ್ಗಿದಾಗ,
ನನ್ನ ತಲೆ, ಬೆನ್ನಿನ ಜೊತೆಗೆ ನನ್ನ ಇಡೀ ಜೀವನ ಮುರಿದಾಗ,
ನನ್ನ ಕರುಳಿನ ಕುಡಿಯು ತುಂಡಾದಾಗ,
ನನ್ನ ಕರುಳಿನ ಕುಡಿಯನು ನಡುರಸ್ತೆಯಲಿ ಸಾಯಿಸಿದಾಗ,
ಯಾವುದೇ ಭಾವನೆಯಿಲ್ಲದ ಗುಂಪಿನಲಿ ನಿಂತು ನಕ್ಕಾಗ,
ನಿನ್ನ ಕುಹಕದ ನಗು ನೆನಪಿಡಲಾಗುವುದು,
ಎಲ್ಲ ನೆನಪಿಡಲಾಗುವುದು ಒಂದೂ ಬಿಡದೇ ನೆನಪಿಡಲಾಗುವುದು.
ಮತ್ತೆ ಹಗಲಲಿ ಸಿಹಿ ಸಿಹಿ ಮಾತು ಮುಂದೆ ಆಡಿ,
ಎಲ್ಲ ಸರಿ ಇದೆ ಎಂದು ತಡವರಿಸಿ ಮಾತನಾಡಿ,
ರಾತ್ರಿ ಆಗುತ್ತಲೇ ಹಕ್ಕು ಕೇಳುವ ಜನರ ಮೇಲೆ ಲಾಠಿ ಹೊಡೆಸಿ, ಗುಂಡು ಹೊಡೆಸಿ,
ನಮ್ಮ ಮೇಲೆ ದಾಳಿ ನಡೆಸಿ,
ನಾವೇ ದಾಳಿಕೋರರು ಎಂದು ಹೇಳುವಾಗ,
ಎಲ್ಲ ನೆನಪಿಡಲಾಗುವುದು, ಒಂದೂ ಬಿಡದೇ ನೆನಪಿಡಲಾಗುವುದು.
ನನ್ನ ಮೂಳೆಗಳ ಮೇಲೆ ಬರೆಯುವೆ,
ಈ ಎಲ್ಲ ಘಟನೆಗಳನು,
ನನ್ನ ಮೂಳೆಗಳ ಮೇಲೆ ಬರೆಯುವೆ,
ಈ ಎಲ್ಲ ಘಟನೆಗಳನು,
ನೀನು ನಾನು ನಾನಾರೆಂದು ಕೇಳುವ ದಾಖಲೆಗಳನು,
ನನ್ನ ಇರುವಿಕೆಯ ಸಾಕ್ಷಿ ಖಂಡಿತ ನೀಡಲಾಗುವುದು,
ಈ ಹೋರಾಟ ಕೊನೆಯ ಉಸಿರಿನ ವರೆಗೂ ಹೋರಾಡಲಾಗುವುದು,
ಎಲ್ಲ ನೆನಪಿಡಲಾಗುವುದು ಒಂದೂ ಬಿಡದೇ ನೆನಪಿಡಲಾಗುವುದು‌
ಹೇಗೆ ಹೇಗೆ ನನ್ನ ದೇಶ ಮುರಿಯಲು ನೀನು ಸಂಚು ಮಾಡಿದೆ,
ಇದನ್ನೂ ನೆನಪಿಡಲಾಗುವುದು,
ಹೇಗೆ ಹೇಗೆ ದೇಶ ಜೋಡಿಸಲು ನಾವು ಆಸೆಪಟ್ಟ ಕನಸನ್ನೂ ಸಹ ನೆನಪಿಡಲಾಗುವುದು,
ಇದನ್ನೂ ನೆನಪಿಡಲಾಗುವುದು,
ಆಗಾಗ ನೆನಪಾಗುವಾಗ, ಜಗದಲಿ ಹೇಡಿಗಳ ಯುಗದಲಿ ನಿನ್ನ ಪ್ರತಿ ಕೆಲಸ ನೆನಪಿಡಲಾಗುವುದು.
ಜಗದಲಿ ಜೀವಿಸುವ ಬಗ್ಗೆ ಮತ್ತೆ ಯಾವಾಗಲೋ ನೆನಪಾದಾಗ,
ನಮ್ಮ ಹೆಸರುಗಳನು ನೆನಪಿಡಲಾಗುವುದು,
ಈ ಕೆಲವು ಜನರು ಕಬ್ಬಿಣದ ಸುತ್ತಿಗೆಯಲಿ ಹೊಡೆದಾಗಲೂ ಬಾಗಲಿಲ್ಲ,
ಸರಕಾರದ ಎರಡು ಕವಡೆ ಕಾಸಿನ ಬೆಲೆಗೆ ,
ನೀನು ಹೇಗೆ ನಿನ್ನನು ಮಾರಿಕೊಂಡಿದ್ದೆ,
ಆದರೆ ನಾವು ಕರುಳು ತುಂಡಾದರೂ ಆತ್ಮಸಾಕ್ಷಿ ಮಾರಲಿಲ್ಲ ಎಂದು,
ಒಂದೂ ಬಿಡದೇ ನೆನಪಿಡಲಾಗುವುದು‌.
ಕೆಲವರಿದ್ದರು ಚಂಡಮಾರುತಗಳು ಬಂದು ಹೋಗುವ ತನಕ,
ಅಲುಗಾಡದೆ ನಿಂತಿದ್ದರು,
ಕೆಲವರಿದ್ದರು ಅವರ ಸಾವಿನ ಸುದ್ದಿ ಕೇಳಿದ ನಂತರ ಸಹ ಬದುಕಿದ್ದರು ಎಂದು,
ಒಂದೂ ಬಿಡದೆ ಎಲ್ಲ ನೆನಪಿಡಲಾಗುವುದು‌

ಕಣ್ಣುಗಳು ರೆಪ್ಪೆಯನು ಸಹ ಬಡಿಯುವುದು ಮರೆಯಬಹುದು,
ಭೂಮಿ ತನ್ನ ಸುತ್ತ ತಿರುಗುವುದು ಸಹ ಮರೆಯಬಹುದು,
ಕಡಿದ ನಮ್ಮ ಸ್ವಾತಂತ್ರ್ಯದ ರೆಕ್ಕೆಯ ಕೂಗನು,
ಕೂಗಿ ಕೂಗಿ ಗಂಟಲು ಹರಿದ ಪ್ರತಿ ಧನಿಯನೂ ಸಹ,
ಒಂದೂ ಬಿಡದೆ ಎಲ್ಲ ನೆನಪಿಡಲಾಗುವುದು‌.

ನೀನು ರಾತ್ರಿ ಬರಿ ನಾವು ಚಂದಿರ ಗೀಚುವೆವು,
ನೀನು ಜೈಲಿಗೆ ನೂಕು, ನಾವು ಜೈಲಿನ ಗೋಡೆಗಳ ಮೇಲೆ ಬರೆಯುವೆವು,
ನೀನು ಎಫೈಆರ್ ಹಾಕು ನಾವು ಸದಾ ಸಿದ್ಧ ಎಂದು ಬರೆಯುವೆವು.
ನೀನು ಕೊಲೆಮಾಡಿದಾಗ ನಾವು ದೆವ್ವಗಳಾಗಿ ಬರೆಯುವೆವು,
ನಿನ್ನ ಪಾತಕದ ಪ್ರತಿ ಸಾಕ್ಷಿ ಒಂದು ಬಿಡದೇ ಬರೆಯುವೆವು,
ಜೊತೆಯಲಿ ನೀನು ಕೋರ್ಟಿನಲಿ ಕುಳಿತು
ಒಳ್ಳೆಯ ಜೋಕುಗಳನು ಬರಿ,
ನಾವು ರಸ್ತೆಯಲಿ ಗೋಡೆಯಲಿ ನ್ಯಾಯ ಎಂದು ಬರೆಯುವೆವು,
ಕಿವುಡನಿಗೂ ಸಹ ಕೇಳಿಸಬೇಕು ಹಾಗೆ ಮಾತನಾಡುವೆವು,
ಕುರುಡನೂ ಸಹ ಓದುವಷ್ಟು ಸ್ಪಷ್ಟವಾಗಿ ಬರೆಯುವೆವು,
ಎಲ್ಲ ನೆನಪಿಡಲಾಗುವುದು‌ ಒಂದೂ ಬಿಡದೇ ಎಲ್ಲ ನೆನಪಿಡಲಾಗುವುದು‌.

ಮತ್ತು ನೀನು ಕರಿ ಕಮಲ ಬರಿ, ನಾವು ಕೆಂಗುಲಾಬಿ ಬಿಡಿಸುವೆವು,
ನೀನು ಭೂಮಿ ಮೇಲೆ ದೌರ್ಜನ್ಯ ಬರೆದಾಗ
ಆಗಸದಲಿ ಕ್ರಾಂತಿ ಎಂದು ಬರೆಯಲಾಗುವುದು,
ಎಲ್ಲ ನೆನಪಿಡಲಾಗುವುದು‌ ಒಂದೂ ಬಿಡದೇ ನೆನಪಿಡಲಾಗುವುದು‌‌
ಏಕೆಂದರೆ ನಿನ್ನ ಹೆಸರಿನ ಮೇಲೆ, ತಲೆತಗ್ಗಿಸುವ ಸಂದೇಶ ಕಳಿಸಲು,
ಏಕೆಂದರೆ ಮಾರಿರುವ ನಿನ್ನ ಆತ್ಮ ಸಾಕ್ಷಿಯ ಮೇಲೆ ಕರಿ ಮಸಿ ಬಳಿಯಲು,
ನಿನ್ನ ಹೆಸರು ನಿನ್ನ ಇರುವಿಕೆಯನು ನೆನಪಿಡಲಾಗುವುದು,
ಒಂದೂ ಬಿಡದೆ ಎಲ್ಲ ನೆನಪಿಡಲಾಗುವುದು‌.

-ಆಮೀರ್ ಆಝೀಝ್
(ಮೂಲ: ಸಬ್ ಯಾದ್ ರಖಾ ಜಾಯೇಗಾ ಉರ್ದು)
ಅನುವಾದ: ಈ ಬಡಪಾಯಿಯದ್ದು
@AamirAzizJmi 🙏

• • •

Missing some Tweet in this thread? You can try to force a refresh
 

Keep Current with Dr. Bharatashree V M🇮🇳

Dr. Bharatashree V M🇮🇳 Profile picture

Stay in touch and get notified when new unrolls are available from this author!

Read all threads

This Thread may be Removed Anytime!

PDF

Twitter may remove this content at anytime! Save it as PDF for later use!

Try unrolling a thread yourself!

how to unroll video
  1. Follow @ThreadReaderApp to mention us!

  2. From a Twitter thread mention us with a keyword "unroll"
@threadreaderapp unroll

Practice here first or read more on our help page!

More from @Bharatashree

Nov 14, 2021
ಪೇಜಾವರ ಶ್ರೀಗಳು ತೀರಿಕೊಂಡಾಗ ನಾನು ಬರೆದ ಲೇಖನ.

ಬಹುಶಃ ಒಂದು ಏಳು ದಶಕಗಳ ಹಿಂದಿನ ಮಾತು. ಆಗ ನನ್ನ ತಂದೆ ಚಿಕ್ಕವರು. ಊರಲ್ಲಿ ಹೇಳಿಕೊಳ್ಳುವಂತಹ ಹಬ್ಬ ಇರದಿದ್ದರೂ ಊರಿನಿಂದ ತುಸು ದೂರ ನದಿಯ ಹತ್ತಿರ ಇರುವ ಬ್ರಾಹ್ಮಣರ ಅಶ್ವತ್ಥನಾರಾಯಣ ಕಟ್ಟೆಯಲ್ಲಿ ತುಂಬಾ ಸಂಭ್ರಮದ ವಾತಾವರಣ ಇತ್ತು. ನದಿಯಲ್ಲಿ ಸ್ನಾನ ಮಾಡಿ ನನ್ನ ತಂದೆ ಈ ಸಡಗರದ
ವಾತಾವರಣ ಕುತೂಹಲದಿಂದ ನೋಡುತ್ತಿದ್ದರು.
ಆಗ ಬ್ಯಾನರ್ ನಲ್ಲಿ ಮೂಡಿ ಬಂದಿರುವ ಅಕ್ಷರ ಓದಿದಾಗ ತಿಳಿಯಿತು. ಪೇಜಾವರ ಶ್ರೀಗಳು ತಮ್ಮ ಊರಿಗೆ ಬಂದಿದ್ದಾರೆ ಎಂದು. ತಮ್ಮ ಸ್ನೇಹಿತರ ಬಳಿ ಬಾ ನೋಡೋಣ ಎಂದಾಗ ಅದು ಬ್ರಾಹ್ಮಣರ ಸಮಾವೇಶ ಬೇರೆಯವರಿಗೆ ಪ್ರವೇಶ ಇಲ್ಲ ಎಂದಿದ್ದರು. ನದಿಯಿಂದ ಸ್ನಾನ ಮುಗಿಸಿ ಮನೆ ದಾರಿ ಹಿಡಿಯುತ್ತಿರುವಾಗ ದಾರಿಯ ಮೇಲೆ
ಜಿಲೇಬಿ ತುಂಬಿದ ಬುಟ್ಟಿ ಹೊತ್ತು ಒಬ್ಬ ಬಂದ. ನಮ್ಮ ತಂದೆಯನ್ನು ಕಂಡೊಡನೇ,"ಅಯ್ಯೋ ಶೂದ್ರ, ಮಡಿ ಮಡಿ", ಎಂದು ಬುಟ್ಟಿ ಅಲ್ಲಿಯೇ ಬಿಸಾಡಿ ಗೊಣಗುತ್ತಾ ಹೋದನಂತೆ. ರಸ್ತೆ ಮೇಲೆ ಬಿದ್ದಿರುವ ಜಿಲೇಬಿ ಹೆಕ್ಕಿ ತೆಗೆದು ತಿಂದು ಮನೆಗೆ ಬಂದರಂತೆ. ನಾನು ಕೆಲವು ವರ್ಷಗಳ ಹಿಂದೆ ಆ ಕಟ್ಟೆಯ ಹತ್ತಿರ ಹೋಗಿದ್ದೇನೆ. ಮುಂಚಿನ ಹಾಗೆ ಮಡಿ ಮೈಲಿಗೆ ಎಂದು
Read 9 tweets
Nov 13, 2021
ಸರ್ @PMadhwaraj

ಮೊದಲನೆಯದಾಗಿ ಪೇಜಾವರ ಶ್ರೀಗಳಷ್ಟು ಜಾತೀಯತೆ ಮಾಡುವ ಹಾಗು ಬೆಳೆಸುವ ಸ್ವಾಮಿಗಳನ್ನು ನೋಡಿಲ್ಲ. ಪಂಕ್ತಿಬೇಧದ ಬಗ್ಗೆ ಅವರ ಅಭಿಪ್ರಾಯ ಚೆನ್ನಾಗಿ ತಿಳಿದಿದೆ. ವಿಶ್ವಮಾನವ ಎಂದು ಪಟ್ಟ ನೀಡುವುದು ತಪ್ಪು. ವಿಶ್ವಮಾನವ ಎಂದೂ ವಿಷ ಕಕ್ಕುವ ಮಾನವ ಆಗಲಾರ‌‌. ಈಗಲೂ ಉಡುಪಿ ಕೃಷ್ಣ ಮಠದಲ್ಲಿ ಷರ್ಟು ತೆಗೆಸುವ ಹಾಗೂ ಪಂಕ್ತಿಭೇದ
ವಿರುದ್ಧ ಮಾತನಾಡುವ ಯಾವ ರಾಜಕಾರಣಿಯನ್ನೂ ನಾನು ನೋಡಿಲ್ಲ. ಬ್ರಾಹ್ಮಣರ ಓಲೈಕೆ ಮಾಡದೇ ಸಮಾನತೆ ಹಾಗೂ ಸಂಪನ್ಮೂಲಗಳ ಸಮಾನ ಹಂಚಿಕೆ ಬಗ್ಗೆ ಉಡುಪಿಯಲ್ಲಿ ಯಾರೂ ಮಾತನಾಡುತ್ತಿಲ್ಲ. ಬಹುಶಃ ಪೇಜಾವರ ಶ್ರೀಗಳ ಪ್ರಭಾವ ಅಷ್ಟಿರಬಹುದು.

ಇನ್ನು ಪದ್ಮ ಪ್ರಶಸ್ತಿಗಳ ಬಗ್ಗೆ ಮಾತು. ಪದ್ಮ ಪ್ರಶಸ್ತಿ ಎಂದೂ ಅರ್ಜಿ ಹಾಕಿ ಪಡೆಯುವ ಪ್ರಶಸ್ತಿ ಅಲ್ಲ.
ಪದ್ಮ ಪ್ರಶಸ್ತಿಗೆ ಒಂದು ಕಮಿಟಿ ಇರುತ್ತದೆ. ಆ ಕಮಿಟಿಗೆ ರಾಜ್ಯ ಸರ್ಕಾರ, ಹಾಗೂ ವಿವಿಧ ಸಂಸ್ಥೆಗಳು, ಗೃಹ ಸಚಿವಾಲಯದ ಸೆಕ್ರೆಟರಿ ಪ್ರಧಾನಿ ಸುಪರ್ದಿಯಲ್ಲಿ ಬರುತ್ತದೆ. ಪದ್ಮ ಪ್ರಶಸ್ತಿ ಕಂಗನಾ ರಾಣಾವತ್ ಗೆ ದಕ್ಕಿದ್ದಕ್ಕೆ ರಾಜಕೀಯ ಪ್ರೇರಣೆ ಇದೆ ಎಂಬ ಮಾತು ಕೇಳಿಬರುತ್ತಿದೆ. ಅದಕ್ಕೆ ಅವಳ ಹೇಳಿಕೆಗಳೇ ಸಾಕ್ಷಿ!
Read 6 tweets
Aug 1, 2021
ಭಾಷೆ ಒಂದು ದೇಶ, ಸಂಸ್ಕೃತಿ ಮತ್ತು ಜನರನ್ನು ಪ್ರತಿನಿಧಿಸುತ್ತದೆ.‌ ಭಾಷಾಭಿಮಾನಿಗಳು ಹಾಗಾಗಿ ಭಾಷೆಯ ವಿಷಯಕ್ಕೆ ಸಂಬಂಧಿಸಿದ ಯಾವುದೇ ವಿಷಯವಾಗಲಿ ಅದನ್ನು ತುಂಬಾ ಭಾವನಾತ್ಮಕವಾಗಿ ತೆಗೆದುಕೊಂಡು ನಡೆಯುತ್ತಾರೆ. ಇದನ್ನೇ ರಾಜಕೀಯ ಪಕ್ಷಗಳು ಹಾಗೂ ವ್ಯಕ್ತಿಗಳು ತಮ್ಮ ಮತಬ್ಯಾಂಕ್ ರಾಜಕೀಯಕ್ಕೆ ಬಂಡವಾಳ‌ ಮಾಡುತ್ತಾರೆ.‌

ಅಂತಹ ವಿಷಯ 'ಮೇಕೆದಾಟು'
ಪರಿಸರ ತಜ್ಞರು ಹಾಗೂ ಪರಿಸರ ಪ್ರೇಮಿಗಳು ಸದಾ ಈ ಆಣೆಕಟ್ಟು ಕಟ್ಟುವುದರ ವಿರುದ್ಧ ಧ್ವನಿ ಎತ್ತುತ್ತಾರೆ. ಏಕೆಂದರೆ ಭಾರತದ ಯಾವ ಆಣೆಕಟ್ಟುಗಳೂ ನೀರಿನ ಸರಬರಾಜು ಹಾಗೂ ವಿದ್ಯುತ್ ಉತ್ಪಾದನೆಗೆ ಏನೆಲ್ಲಾ ಆಶ್ವಾಸನೆ ಕಟ್ಟುವ ಮುನ್ನ ನೀಡಿದರೂ ಕಟ್ಟಿದ ನಂತರ ಪರಿಸರಕ್ಕೆ ವಿಪರೀತ ಹಾನಿ, ಬಂಡವಾಳಶಾಹಿಗಳಿಗೆ ವಿದ್ಯುತ್ ಪೂರೈಕೆ, ಹಾಗೂ ಭ್ರಷ್ಟಾಚಾರ
ಇವು ಎಗ್ಗಿಲ್ಲದೆ ನಡೆಯುತ್ತಿದೆ.

ನಾನು ಹುಟ್ಟಿದ ಸಮಯದಲ್ಲಿ ಕಾಳಿ ನದಿ ಒಂದು ಸ್ವಚ್ಛವಾದ ನದಿ. ಚಿಕ್ಕಂದಿನಲ್ಲಿ ನನ್ನ ತಂದೆ ಬೆನ್ನ ಮೇಲೆ ಕಟ್ಟಿಕೊಂಡು ಉಳವಿ ಕ್ಷೇತ್ರಕ್ಕೆ ಪಾದಯಾತ್ರೆ ಮೂಲಕ ಕರೆದುಕೊಂಡು ಹೋಗುತ್ತಿದ್ದಾಗ ಮೊಣಕಾಲು ಕೆಳಗೆ ಇದ್ದ ಕಾಳಿನದಿ ದಾಟಿ ಶಿವಪುರ ತಲುಪಿ ಉಳವಿ ಮುಟ್ಟುತ್ತಿದ್ದರಂತೆ! ಹೀಗೆ ದಾಟುವಾಗ ನದಿ ನೀರು ಎಷ್ಟು
Read 17 tweets
May 17, 2021
@craziebawa hey upper caste Boss, I saw your video mocking oppressed community by making fun of Doctor entered through quota!

You have also mocked specially abled doctors who are serving humanity.

I scored 92% in my 12th and had 1494 rank in CET and I got through quota.
I have been treating Covid-19 patients free of cost through online and tele consultations.

And I have their thanks note on their successful recovery!

BTW you should know why anyone had to be stand up comic.

The stand up comic mocks the ills of the society, not upholds ills.
For example despite of being doctor I was rejected for marriage by my girlfriend's family because of my caste identity.

Despite of being doctor I was badly treated by upper caste men at his home.

I used to enter into canals, gutters to pick up the cricket balls so that upper
Read 7 tweets
Jan 27, 2021
I never thought I would come across this article! But somehow I came across this thread.

This article is misleading and pseudoscience.

It's very easy to manipulate anyone with this.

The way is very simple.

We all know the basic anatomy and blood circulation. So the
Pseudoscience starts from there and ends up in bizarre conclusion.

The article says nasal route is the best route for the treatment.

Which is not true, intravenous route drug administration is the best way of administration due to 100% bioavailability of the drug!
Alright, let's come to the seizures.

Seizures or fits are abnormal synchronised excessive neuronal discharge in the brain. That is manifested by various symptoms and many types are there.(Leave this to medicos or Google them for detail! 😊)

Cause may be traumatic or genetic
Read 16 tweets
Jan 6, 2021
Here is a story of my Father,who spent almost half of his life fighting against casteism

I am sharing one major story which happened with him & the story which haunted us for many years and now I can say a success story!

(That's my favourite picture with him during convocation)
My Dad after finishing his degree (B.Sc and B.Ed) in late 60s joined as high school master in Itagi and in Ghataprabha ( both in Belagavi district and were near his hometown)

During school trip to western ghats and coastal Karnataka, he was mesmerized by the
Beauty of Western Ghats! So he decided to settle in Western Ghats area and started looking for job.

He got to know that Yellapur semi government High school is having vacancy of science master, so he applied for it.

He had one small exam and an interview which he did
Read 21 tweets

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3/month or $30/year) and get exclusive features!

Become Premium

Don't want to be a Premium member but still want to support us?

Make a small donation by buying us coffee ($5) or help with server cost ($10)

Donate via Paypal

Or Donate anonymously using crypto!

Ethereum

0xfe58350B80634f60Fa6Dc149a72b4DFbc17D341E copy

Bitcoin

3ATGMxNzCUFzxpMCHL5sWSt4DVtS8UqXpi copy

Thank you for your support!

Follow Us!

:(