ಹಿಂದೂ ಧರ್ಮ ಅಲ್ಲ ಅದೊಂದು ಜೀವನ ವಿಧಾನ ಇದನ್ನು ನಾನು ಹೇಳಿಲ್ಲ ಈ ದೇಶದ ಉಚ್ಚ ನ್ಯಾಯಾಲಯ ೧೯೯೫ ರಲ್ಲಿ ನ್ಯಾಯಮೂರ್ತಿ ಜೆ.ಎಸ್ ವರ್ಮಾ ಅವರ ನ್ಯಾಯಪೀಠ ಎಸ್ ರಾಧಾಕೃಷ್ಣನ್ ಅವರ ತತ್ವಶಾಸ್ತ್ರ ಮತ್ತು ವಿಲ್ ಡ್ಯೂರಾಂಟ್ ಅವರ ಇತಿಹಾಸದ ಬರವಣಿಗೆಗಳ ಜೊತೆ ಅನೇಕ ದಾಖಲೆಗಳನ್ನು ಅವಲೋಕಿಸಿ ನೀಡಿದ ತಿರ್ಪು ಏಕೆಂದರೆ ನಮಗೆ ಅನೇಕ ವೈವಿಧ್ಯಮಯ ಆಚರಣೆ
ಮತ್ತು ಜೀವನ ಪದ್ದತ್ತಿಗಳಿವೆ(ಧಾರ್ಮಿಕ,ಸಾಂಸ್ಕೃತಿಕ ಮತ್ತು ಸಾಮಾಜಿಕವಾಗಿ)
ಅದಲ್ಲದೇ ಈ ಹಿಂದೂ ಎಂಬ ಪದ ಪ್ರಾಚೀನ ಕಾಲದ ಯಾವ ಧರ್ಮ ಮತ್ತು ಲೌಕಿಕ ಗ್ರಂಥಗಳಲ್ಲಿ ಉಲ್ಲೇಖ ಇಲ್ಲ ಈಗ ಇದನ್ನು ಬಳಸುವವರಿಗೆ ಇದು ಧರ್ಮ ಸೂಚಕವೋ?
ಜನಾಂಗೀಯ ಸೂಚಕವೋ? ಭೌಗೋಳಿಕ ಸೂಚಕವೋ ಎಂದು ನಿಖರವಾಗಿ ಗೊತ್ತಿಲ್ಲ
ಏಕೆಂದರೆ ಸಿಂದೂ ಎಂಬ ಪದದ ಮುಂದಿನ ಅರ್ಥಗಳೇ ಈ
ಹಿಂದೂ(ಪರ್ಶಿಯನ್) & ಇಂಡಸ್(ಗ್ರೀಕರು). ಇವರ ಸಾಂಸ್ಕೃತಿಕ ವಲಸೆ ಪರಿಣಾಮವಾಗಿ ಮತ್ತು ಪದಬಳಕೆಯಲ್ಲಾದ ಶಬ್ದೋಚ್ಚಾರದ ಪರಿಣಾಮದಿಂದ ಸಿಂದೂ ನದಿ ತೀರದ ಸುತ್ತಲಿನ ಪ್ರದೇಶಕ್ಕೆ ಹಿಂದೂ ಅಥವಾ ಇಂಡಸ್ (ಈಗ ಇಂಡಿಯಾ) ಎಂಬ ಉಲ್ಲೇಖಗಳು ಬಂದಿವೆ ಅದೊಂದು ಸೀಮಿತ ವಲಯದ ಪ್ರದೇಶದ ಭೌಗೋಳಿಕ ಸೂಚಕ ಮಾತ್ರ ಇಡಿ ಭಾರತ ಒಕ್ಕೂಟದ ಸೂಚಕವಲ್ಲ.
ಸಾಮಾನ್ಯ ಶಕ ಎಂಟನೆ
ಶತಮಾನದ ತಾಂತ್ರಿಕ ಪಂಥವೊಂದರ ಗ್ರಂಥದಲ್ಲಿ ಹಿಂದೂ ಪದ ಒಂದು ಬಾರಿ ಉಲ್ಲೇಖವಾಗಿದೆ ಅದು ಬಿಟ್ಟರೇ ಮತ್ತೆ ನಮ್ಮ ದೇಶಿಯ ಯಾವ ಕೃತಿಗಳಲ್ಲಿ ದಾಖಲಾಗಿಲ್ಲ (ಮುಸ್ಲಿಂ ಚರಿತ್ರೆಗಳಲ್ಲಿ ಇದೆ)ಕೊನೆಗೆ ಆಂಗ್ಲರು ಭಾರತಕ್ಕೆ ಬಂದಾಗ ಈ ಪದ ಬಳಕೆ ಪ್ರಾರಂಭ ಅದೂ ತಾತ್ವಿಕವಾಗಿ ವಿವೇಕಾನಂದರು ಸೇರಿದಂತೆ ಅನೇಕ ಸಾಮಾಜಿಕ ಧಾರ್ಮಿಕ ಸುಧಾರಣಾಕಾರರು ಉಪಯೋಗ
ಮಾಡಿದ್ದಾರೆ ಅದರಲ್ಲೂ ವಿವೇಕಾನಂದರು ಅರ್ಥಪೂರ್ಣ ಉಲ್ಲೇಖ ಮಾಡಿದ್ದಾರೆ.
ಅದನ್ನೊಂದು ಧರ್ಮ ಎನ್ನುವಂತೆ ಬಿಂಬಿಸಿದ್ದು ಆಧುನಿಕ ಕಾಲದವರೇ ಹೊರತು ಪ್ರಾಚೀನರಲ್ಲ ಅಷ್ಟೇ ಏಕೆ ಶಂಕರಾಚಾರ್ಯರು ೭ ನೇ ಶತಮಾನದಲ್ಲಿ ಶೈವ,ವೈಷ್ಣವ,ಶಾಕ್ತ,ಕುಮಾರ,ಗಣೇಶ,ಸೂರ್ಯ ಇಂತಹ ಧಾರ್ಮಿಕ ಪಂಥಗಳನ್ನು ಒಂದು ಗೂಡಿಸಲು ಪ್ರಯತ್ನ ಮಾಡಿದ್ದರು ಅದಕ್ಕಾಗಿ ಅವರನ್ನು
ಷಣ್ಮತ ಸ್ಥಾಪನಾಚಾರ್ಯ ಎಂಬ ಬಿರುದಿನಿಂದ ಕರೆಯಲಾಗಿದೆ.
ಚರಿತ್ರೆಯಲ್ಲಿ ಬುದ್ದ,ಮಹಾವೀರ,ಶಂಕರಾಚಾರ್ಯರು,ರಮಾನುಜಚಾರ್ಯರು,ಮಧ್ವಚಾರ್ಯರು ಬಸವಣ್ಣ,ರಮಾನುಜರು,ಕಬೀರರು,ಚೈತನ್ಯ ಹಾಗೂ ಗುರುನಾನಕರು,ವಿವೇಕಾನಂದರು ರಾಜಾ ರಾಮ ಮೋಹನ ರಾಯರು ದಯಾನಂದ ಸರಸ್ವತಿ ಆತ್ಮಾರಾಂ ಪಾಂಡುರಂಗ ಜ್ಯೋತಿಭಾ ಪುಲೆ ಅಂಬೇಡ್ಕರ್ ಇತ್ಯಾದಿ ಅನೇಕರು ಸುಧಾರಿಸ ಬಯಸಿದ್ದು
ಪ್ರಾಚೀನ ಕಾಲದಲ್ಲಿ ಸಮಾಜದಲ್ಲಿ ಹರಡಿದ್ದ ಮೌಢ್ಯ ಮತ್ತು ದುಬಾರಿ ಆಚರಣೆ ಹಾಗೂ ಆರ್ಥಿಕವಾಗಿ ಅಧಿಕ ವೆಚ್ಚದ ಧಾರ್ಮಿಕ ಪದ್ದತ್ತಿಗಳು ಹಾಗೂ ಆಚರಣೆಗಳನ್ನು ಅವರು ಎಲ್ಲೂ ಹಿಂದೂ ಧರ್ಮದ ಬಗ್ಗೆ ಉಲ್ಲೇಖ ಮಾಡುವದಿಲ್ಲ ಆದರೆ ಇದರ ಉಲ್ಲೇಖ ಸಮಾನವಾದ ಉದ್ದೇಶದೊಂದಿಗೆ ಆಧುನಿಕ ಕಾಲದಲ್ಲಿ ಪ್ರಾರಂಭವಾದ ಸಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳು
ಪ್ರಾರಂಭವಾದಾಗ ಅಧಿಕೃತ ಹಿಂದೂ ಎಂಬ ಪದ ವ್ಯಾಪಕವಾಗಿ ಬಳಕೆಗೆ ಬರಲು ಪ್ರಾರಂಭ ಆಗುತ್ತದೆ.
ಈಗಲೂ ಸಹ ಇದನ್ನು ಬಳಸುವವರಿಗೆ ಈ ವಿಚಾರದಲ್ಲಿ ತಮ್ಮ ಒಳ ಮನಸ್ಸಿನಲ್ಲಿ ಗೊಂದಲ ಇರುವುದಂತೂ ಸತ್ಯ ಇದು ಭೂಗೋಳಿಕ ಸೂಚಕವೋ?ಧಾರ್ಮಿಕ ಸೂಚಕವೋ?ಜನಾಂಗೀಯ ಸೂಚಕವೋ ಅಂತ ನನ್ನ ಪ್ರಕಾರ ಇದು ಯಾವುದರ ಸೂಚಕವೂ ಅಲ್ಲ ರಾಜಕೀಯವಾಗಿ ತಮ್ಮ ಸ್ಥಾನವನ್ನು ಭದ್ರ
ಮಾಡಿಕೊಳ್ಳಲು ಬೇಕಾದ ಒಂದು ಉದ್ದೇಶಿತ ಪದ ಹಾಗೂ ಕೆಲ ಮತೀಯ ಶಕ್ತಿ ಸಂಘಟನೆಗಳ ಮೂಲಭೂತವಾದದ ಈಡೇರಿಕೆಗೆ ಬಳಸಬಹುದಾದ ಪದ ಎಂದರೆ ಸೂಕ್ತವಾದಿತು ಅದರಲ್ಲೂ ವಿಶೇಷವಾಗಿ ಧಾರ್ಮಿಕ ಮೂಲಭೂತವಾದಕ್ಕೆ ಈ ಪದ
ಪ್ರಸ್ತುತ ಶಕ್ತಿ ತುಂಬಿರುವುದಂತೂ ಸತ್ಯ...!
ಯಾವ ವೇದ,ಬ್ರಾಹ್ಮಣಕ,ವೇದಾಂಗ,ಉಪನಿಷತ್,ಸ್ಮೃತಿ,ಪುರಾಣಗಳಲ್ಲಿ ಪಟಾಕಿ ಹೊಡೆಯೋದು ಹಿಂದೂ ಸಂಸ್ಕೃತಯ ಭಾಗ ಎಂದು ಹೇಳಿದೆ ಹೇಳಿ ನಾವು ಕೇಳಿ ಪುಣ್ಯ ಕಟ್ಕೊಳ್ತೀವಿ ಏಕೆಂದರೆ ನಿಮ್ಮಷ್ಟು ಜ್ಞಾನ ನಮಗಿಲ್ಲ.
ಇನ್ನೂ ಗೋ ಹತ್ಯೆಯ ವಿಚಾರ ಅಧಿಕಾರಕ್ಕೆ ಬಂದು ಏಳು ವರ್ಷ ಆಗಿದೆ ಒಕ್ಕೂಟ ಸರ್ಕಾರಕ್ಕೆ ಏನು ರೋಗ ನಿಷೇದ ಮಾಡೋದಕ್ಕೆ ಬೇಡ ಅಂದೋರು ಯಾರು?
ಇನ್ನೂ ಧ್ವನಿವರ್ದಕಗಳ ವಿಚಾರ ಸರಕಾರ ಮಾನದಂಡ ಡೆಸಿಬಲ್ ಗಳ ಲೆಕ್ಕದಲ್ಲಿ ನಿಗದಿ ಮಾಡಿದೆ ಸಾಮಾನ್ಯವಾಗಿ ೬೦ ಡೆಸಿಬಲ್ ಗಳ ವರೆಗೆ ಉತ್ತಮ ಅದಕ್ಕಿಂತ ಜಾಸ್ತಿ ಇರುವ ಮುಸ್ಲಿಂರ ಅಜಾನ್ ಹಾಕುವ ಧ್ವನಿವರ್ದಕವಾಗಲಿ ಹಿಂದೂ ಗುಡಿಗಳಲ್ಲಿ ಹಾಕುವ ದ್ವನಿವರ್ದಕಗಳಾಗಲಿ ಟ್ರಾಕ್ಟರ್ ಹಾಡುಗಳಾಗಲಿ ಗಣೇಶ ಇತ್ಯಾದಿ ಉತ್ಸವಗಳಲ್ಲಿ ಹಾಕುವ ಡಿಜೆ ಆಗಲಿ ನಿಷಿದ್ಧ
ಹೀಗೆ ಯಾರೇ ಯಾವುದೇ ಧರ್ಮವರಿರಲಿ ನಿಗದಿತ ಮಾನದಂಡಕ್ಕಿಂತ ಜಾಸ್ತಿ ಶಬ್ದ ಮಾಡಿದರೆ ಅದು ಪರಿಸರಕ್ಕೆ ಹಾನಿ/ಶಬ್ದ ಮಾಲಿನ್ಯ ಇದನ್ನು ಖಂಡಿಸುವ ಹಾಗಿದ್ದರೆ ಪರಿಸರಾತ್ಮಕ ದೃಷ್ಟಿಕೋನದಿಂದ ಇಡಿ ಮಾಲಿನ್ಯಕಾರಕವಾದ ಎಲ್ಲಾ ಬಗೆಯ ಶಬ್ದಮಾಲಿನ್ಯದ ವಿಧಾನಗಳನ್ನೂ ಸಹ ಖಂಡಿಸಬೇಕು ಅದರಲ್ಲಿ ಜಾತಿ ಧರ್ಮ ಹುಡುಕುವುದು ತರವಲ್ಲ. @threadreaderapp unroll
ಈ ಯವನ ಕುಲ ಅಂದ್ರೆ ಇಂಡೋ ಗ್ರೀಕ್ ಸಂಜಾತರು ನಾವು ಇತಿಹಾಸದಲ್ಲಿ ಯವನರ ಉಲ್ಲೇಖವನ್ನು ಇಂಡೋ ಗ್ರೀಕರು ಎಂದೇ ಗುರುತಿಸುತ್ತೇವೆ ರಾಮಾಯಣದಲ್ಲಿ ಒಂದು ಶ್ಲೋಕದ ಮೂಲಕ ಮತ್ತು ವ್ಯಾಸಭಾರತದಲ್ಲಿ ಶ್ರೀಕೃಷ್ಣನ ಕುರಿತಾದ ಸನ್ನಿವೇಶದಲ್ಲಿ ಈ ಯವನರ ಕುರಿತು ಉಲ್ಲೇಖ ಮಾಡಲಾಗಿದೆ ಅದನ್ನು ಹಾಕ್ತೀನಿ ವ್ಯಾಸಭಾರತದಲ್ಲಿ ಶ್ರೀಕೃಷ್ಣ ಮತ್ತು ಕಾಳಯವನ ನಡುವೆ
ತಸ್ಯಾಃ ಹುಮ್ ಕಾರತಃ
ರವಿ ಸನ್ನಿಭಾ ಕಾಂಬೋಜಾ ಜಾತಾಃ
ಅಥಃ ಉದಸಃ ಶಸ್ತ್ರ ಪಾಣಯಃ
ಪಹ್ಲವ ಸಂಜಾತಾಃ
ಯೋನಿ ದೇಶಾತ್ ಯವನಃ ಚ
ತಥಾ ಶಕ್ ಯಿ ದೇಶಾತ್ ಶಕಾಃ
ರೋಮ ಕುಶೇಪು ಮ್ಲೆಚ್ಛಾಃ ಚ
ಸ ಕಿರಾತಕಾಃ ಹಾರಿತಾಃ
ಈ ಯೋನಿ ದೇಶಾತ್ ಯವನಃ ಚ ಅಂದರೆ ಸ್ತ್ರೀ ಆಧಾರಿತ ಪೂಜಿತ ದೇಶದವ್ರು ಅಂದ್ರೆ
ಯವನರು ಅಥವಾ ಗ್ರೀಕರು ಅಥವಾ ಇಂಡೋ ಗ್ರೀಕರು ಏಕೆಂದರೆ ಗ್ರೀಕರದ್ದು ಸಂಪೂರ್ಣ ಸ್ತ್ರೀ ದೇವತಾಧಾರಿತ ಧಾರ್ಮಿಕ ಆಚರಣೆ ಇದೆ ಇದಕ್ಕೆ ಇನ್ನೂ ಉತ್ತಮ ಉದಾಹರಣೆ ಎಂದರೆ ಭಾರತದಲ್ಲಿ ಗ್ರೀಕ್ ಅಥವಾ ಯವನರ ಪ್ರವೇಶ ಆಗುವವರೆಗೆ ಎಲ್ಲಿಯೂ ನಮ್ಮಲ್ಲಿ ಸೃಷ್ಟಿ ಲಿಂಗ ಪೂಜಾ ಪದ್ದತ್ತಿ ಇರಲಿಲ್ಲ ಕೇವಲ ಶಿಶ್ನ ಲಿಂಗಾಧಾರಿತ ಪೂಜಾ ಪದ್ದತ್ತಿ ಇತ್ತು ಇದಕ್ಕೆ
ಏಕೆಂದರೆ ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿದೆ ಅದರ ಮೇಲೆ ಕಾನೂನು ಮಾಡುವ ಅಧಿಕಾರ ಕೇಂದ್ರದಂತೆ ರಾಜ್ಯಕ್ಕೂ ಸಹ ಇದೆ ಅದನ್ನು ನಾವು ಮರೆಯಬಾರದು ಅಲ್ವಾ #NEP ಪ್ರಕಾರ ಮಾತೃ ಭಾಷಾ ಶಿಕ್ಷಣ ೫+೩ ವರೆಗೂ ಅಂತ ಹೇಳಲಾಗಿದೆ ಅದನ್ನು ೫+೩+೩ ವರೆಗೂ ಮುಂದುವರೆಸಬೇಕು
ಕೌಶಲ್ಯಾಧಾರಿತ ಶಿಕ್ಷಣದಲ್ಲಿ ಕಡ್ಡಾಯ ವ್ಯವಸಾಯ ಕೌಶಲ್ಯ ಹಾಗೂ ನಮ್ಮ ಸ್ಥಳಿಯ...
ಗುಡಿ/ಗೃಹ ಕೈಗಾರಿಕೆಗಳಾಧಾರಿತ ಕೌಶಲ್ಯ ಶಿಕ್ಷಣಕ್ಕೆ ಆದ್ಯತೆ ಇರಬೇಕು