ಕನ್ನಡ ಕಾದಂಬರಿಗಳ ಪಿತಾಮಹ ಎಂದೇ ಕರೆಯಲ್ಪಡುವ #ಗಳಗನಾಥ ರ ಸ್ಮರಣಾರ್ಥ, ಇಲ್ಲಿ ಒಂದಿಷ್ಟು ಮಾಹಿತಿ, ಆ ಮಹನೀಯರ ಜೀವನದ ಬಗ್ಗೆ.

ಆಗ ಉತ್ತರ ಕರ್ನಾಟಕದಲ್ಲಿ ತಿಲಕರ ಕೇಸರಿ, ಆಪ್ಟೆಯವರ ಕರಮಣೂಕ ಪತ್ರಿಕೆಗಳು ಹೆಚ್ಚು ಪ್ರಚಾರದಲ್ಲಿದ್ದವು. ಕನ್ನಡ ಪತ್ರಿಕೆಗಳ ಅಭಾವದಿಂದಾಗಿ ಕನ್ನಡಿಗರು ಮರಾಠಿ ಪತ್ರಿಕೆ ಗಳನ್ನೇ ಓದುತ್ತಿದ್ದರು. Image
ತಿಲಕರ ವಿಚಾರಧಾರೆ ಇವರ ಮನಸ್ಸನ್ನು ಸಂಪೂರ್ಣ ಆಕರ್ಷಿಸಿತ್ತು; ಅಷ್ಟೇ ಸತ್ತ್ವಶಾಲಿಯಾಗಿ ಆಪ್ಟೆಯವರ ಕಾದಂಬರಿಗಳಲ್ಲಿಯ ಕಲ್ಪನಾ ವೈಭವದ ವೈಖರಿ ಮನಸ್ಸನ್ನು ಬೆರಗುಗೊಳಿಸುತ್ತಿತ್ತು.
ಆ ಭಾಗದ ಕನ್ನಡ ಜನತೆ ಮರಾಠಿ ವ್ಯಾಮೋಹದಲ್ಲಿದ್ದುದು ಇವರಿಗೆ ಕಂಡುಬಂದಿತು.
ತಿಲಕರ ವಿಚಾರಧಾರೆಯನ್ನೂ ಆಪ್ಟೆಯವರ ಕಾದಂಬರಿ ಕತೆಗಳನ್ನೂ ಕನ್ನಡದಲ್ಲಿಯೇ ಹೇಳಿ
ಕನ್ನಡಿಗರ ವಾಚನಾಭಿರುಚಿಯನ್ನು ಬೆಳೆಸುವ ಉತ್ಕಟ ಆಸೆ ಇವರಲ್ಲಿ ಮೂಡಿತು. ಅದೇ ಕಾಲಕ್ಕೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದವರು ಕನ್ನಡ ಗ್ರಂಥಕರ್ತರಿಗೆ ಬಹುಮಾನ ಕೊಡುವ ಪರಿಪಾಠವನ್ನು ಹಾಕಿದರು. ಆ ಸಂದರ್ಭದಲ್ಲಿ ಇವರು ಬರೆದ ಪ್ರಥಮ ಕಾದಂಬರಿ "ಪ್ರಬುದ್ಧ ಪದ್ಮನಯನೆ" ಗೆ ಬಹುಮಾನ ದೊರಕಿತು.
ಹಾವೇರಿ ಬಳಿಯ ಗಳಗನಾಥ, ಇಲ್ಲಿ ಪ್ರಸಿದ್ಧವಾದ
ಚಾಲುಕ್ಯರು ಕಟ್ಟಿಸಿದ ಗಳಗೇಶ್ವರ ಶಿವನ ದೇವಾಲಯವಿದೆ.
ತುಂಗಭದ್ರಾ ಮತ್ತು ವರದಾ ನದಿಗಳ ಸಮಾಗಮವಾಗುವ ಸ್ಥಳದಲ್ಲಿ 1869ನೇ ಇಸವಿ ಜನವರಿ 5 ರಂದು ಜನಿಸಿ ಕನ್ನಡ ನಾಡಿಗೆ ಅಪಾರವಾದ ಸೇವೆಯನ್ನಿತ್ತವರು ’ಗಳಗನಾಥ’ರು.
ಇವರ ಮೂಲ ಹೆಸರು ವೆಂಕಟೇಶ ತಿರಕೋ ಕುಲಕರ್ಣಿ. ಊರಿನ ಕುಲಕರ್ಣಿ ಮನೆತನದವರಾದ ಇವರ ತಂದೆ ತ್ರಿವಿಕ್ರಮಭಟ್ಟರು ತಿರಕೋ ಭಟ್ಟರೆಂದೇ
ಪ್ರಸಿದ್ಧರಾಗಿದ್ದವರು.  ವೆಂಕಟೇಶರು ತಮ್ಮ ಸಾಹಿತ್ಯ ರಚನೆಯಲ್ಲಿ ತಮ್ಮ ಊರಿನ ಹೆಸರನ್ನೇ ಅನ್ಯರ್ಥನಾಮವಾಗಿ ಬಳಸಿಕೊಂಡು ’ಗಳಗನಾಥ’ರೆಂದೇ ಪ್ರಸಿದ್ಧರಾದರು.

ಗಳಗೇಶ್ವರ ದೇವಾಲಯವೇ ಇವರ ಪ್ರಥಮ ಪಾಠಶಾಲೆ. ಅಲ್ಲಿ ಇವರಿಗೆ ಗುರುಕುಲ ಶಿಕ್ಷಣ. ಇದರಿಂದಾಗಿ ಗಳಗನಾಥರಲ್ಲಿ ಸ್ವಾಭಿಮಾನ, ಸ್ವಭಾಷೆ ಹಾಗೂ ಸಂಸ್ಕøತಿಗಳ ಬಗ್ಗೆ ವಿಶೇಷ ಪ್ರೇಮ ಬೆಳೆದುವು.
ಹಾವನೂರಿನಲ್ಲಿ ಮುಲ್ಕಿ ಪರೀಕ್ಷೆ ಮುಗಿಸಿದ ನಂತರ ಶಿಕ್ಷಕನಾಗಬೇಕೆಂಬ ಹಂಬಲವು ಇದ್ದುದರಿಂದ ಗಳಗನಾಥರು ಧಾರವಾಡ ಟ್ರೇನಿಂಗ್ ಕಾಲೇಜಿಗೆ ಹೋದರು (1886).

ಧಾರವಾಡ ಗಳಗನಾಥರು ಜೀವನದಲ್ಲಿ ಮಹತ್ತ್ವದ ಸ್ಥಾನವನ್ನು ಪಡೆದಿದೆ. ಅದು ಇವರನ್ನು ಸಾಹಿತಿಯನ್ನಾಗಿ ರೂಪಿಸಿದ ಕ್ಷೇತ್ರ.
ಇಲ್ಲಿ ಪಂಡಿತರಾದ ಕಿತ್ತೂರ ಅಯ್ಯನವರು, ಧೋಂಡೋ ನರಸಿಂಹ ಮುಳಬಾಗಿಲ
ಅವರು ತಮ್ಮ ಪ್ರಭಾವಬೀರಿ ಗಳಗನಾಥರಿಗೆ ಕನ್ನಡ ಕಲಿಸಿದರು. ಅದೇ ಪ್ರಕಾರ ಪ್ರಭಾವ ಬೀರಿದವರು ರೊದ್ದ ಶ್ರೀನಿವಾಸರಾಯರು ಹಾಗೂ ಕರಂದೀಕರರು. ಕರಂದೀಕರರ ಅಚ್ಚುಕಟ್ಟು, ಶಿಸ್ತು, ಗಳಗನಾಥರ ಸೊತ್ತಾದುವು. ಆ ಸಮಯದಲ್ಲಿ ಅಪ್ರತ್ಯಕ್ಷವಾಗಿ ಇವರ ಜೀವನದಲ್ಲಿ ಪ್ರಭಾವ ಬೀರಿದ ವ್ಯಕ್ತಿಗಳೆಂದರೆ ಲೋಕಮಾನ್ಯ ತಿಲಕ ಹಾಗೂ ಹರಿ ನಾರಾಯಣ ಆಪ್ಟೆ ಅವರು.
1898ರಲ್ಲ
ಆರಂಭವಾದ ಇವರ ಬರೆವಣಿಗೆ 1942ರ ವರೆಗೂ ಅವ್ಯಾಹತವಾಗಿ ಸಾಗಿತು.
ಶಿರಗುಪ್ಪ, ಅಗಡಿ, ಹಾವೇರಿ ಇವು ಇವರು ನೆಲಸಿ ಕನ್ನಡಕ್ಕೆ ದುಡಿದ ಇತರ ಸ್ಥಳಗಳು. ಅಗಡಿಯ ಶ್ರೀ ಶೇಷಾಚಲ ಸ್ವಾಮಿಗಳು ಗಳಗನಾಥರ ಮೇಲೆ ವಿಶೇಷ ಪ್ರಭಾವವನ್ನು ಬೀರಿದರು.

ಶಿಕ್ಷಕರಾಗಿ ಕೆಲಸ ಮಾಡಿದ ವೆಂಕಟೇಶರು ಸಾಹಿತ್ಯದ ಕಡೆ ತಮಗಿದ್ದ ಒಲವಿನಿಂದ 1907ರಲ್ಲಿ ಸ್ವಯಂ ನಿವೃತ್ತಿ
ಪಡೆದು ಹಾವೇರಿಯ ಸಮೀಪದ ಅಗಡಿಗೆಯಲ್ಲಿ B P ಕಾಳೆಯವರ ಸಹಕಾರದಿಂದ ಮುದ್ರಣಾಲಯವನ್ನು ತೆರೆದು ’ಸದ್ಭೋಧ ಪತ್ರಿಕೆ’ ಎಂಬ ಮಾಸಪತ್ರಿಕೆಯನ್ನು ಆರಂಭಿಸಿದರು. ಸದಭಿರುಚಿಯ ಕಥಾನಕಗಳನ್ನು ಪ್ರಕಟಿಸಿ ಕನ್ನಡ ಜನರಲ್ಲಿ ವಾಚನಾಭಿರುಚಿ ಬೆಳೆಸಿದ ಶ್ರೇಯಸ್ಸು ಗಳಗನಾಥರಿಗೆ ಸಲ್ಲುತ್ತದೆ.  ಸದ್ಭೋಧ ಚಂದ್ರಿಕೆಯ ವಿಷಯಪಟ್ಟಿ ಸಂವಹನದ ವಸ್ತುವಿನ ದೃಷ್ಟಿಯಿಂದ
ಕುತೂಹಲಕಾರಿಯಾಗಿದೆ.  
ಯೋಗಾಭ್ಯಾಸ, ನೀತಿ ಪ್ರಧಾನ ಕಥಾನಕ,  ಕುಟುಂಬ ಜೀವನ, ದಾಂಪತ್ಯ ಇತ್ಯಾದಿ.  ಇವೆಲ್ಲಕ್ಕೂ ಮಿಗಿಲಾಗಿ ‘ಸದ್ಭೋಧ ಚಂದ್ರಿಕೆ’ ಒಂದು ಸತ್ವಪೂರ್ಣವಾದ ಮತ್ತು ಚಾರಿತ್ರ್ಯ ನಿರ್ಮಾಣದ ಕಾರ್ಯ ಮಾಡಬೇಕು ಎನ್ನುವುದು ಗಳಗನಾಥರ ಮನೀಷೆಯಾಗಿತ್ತು.  
ಅಂದಿನ ದಿನಗಳಲ್ಲಿ 27 ಜಿಲ್ಲೆಗಳ 1200 ಊರುಗಳಲ್ಲಿನ ನಾಲ್ಕು ಸಹಸ್ರಕ್ಕೂ ಹೆಚ್ಚು
ಚಂದಾದಾರರನ್ನು ಈ ಪತ್ರಿಕೆ ತಲುಪುತ್ತಿತ್ತು ಎಂದು ತಿಳಿದು ಬರುತ್ತದೆ.
ಗಳಗನಾಥರು ತಮಗೆ ಶಿಕ್ಷಣ ವೃತ್ತಿಯಲ್ಲಿದ್ದ ಗೌರವದಿಂದ ಒಂದು ಪಾಠಶಾಲೆಯನ್ನೂ ತೆರೆದರು.

ಕನ್ನಡ ಸಾಹಿತ್ಯ ಅವನತಿಯ ಅಂಚಿನಲ್ಲಿದ್ದ ಸಂದರ್ಭದಲ್ಲಿ ತಮ್ಮ ಕಾದಂಬರಿಯ ಮುಖೇನ ಕನ್ನಡ ಸಾಹಿತ್ಯದಲ್ಲಿ ಆಸಕ್ತಿಯನ್ನು ಹುಟ್ಟು ಹಾಕಿದ ಕೀರ್ತಿ ಗಳಗನಾಥರಿಗೆ ಸಲ್ಲುತ್ತದೆ.
ಗಳಗನಾಥರ ಬರಹದ ವೈಖರಿ ಪಂಡಿತ ಮತ್ತು ಪಾಮರರಿಬ್ಬರನ್ನೂ ರಂಜಿಸುತ್ತಿತ್ತು.
ಇವರ ಕಾದಂಬರಿಗಳಲ್ಲಿ ಸನಾತನ ಧರ್ಮದ ಪುನುರುಜ್ಜೀವನದ ಬಯಕೆಗಳು ವ್ಯಕ್ತವಾಗಿದೆ.  ಅವರು ಸಂಸ್ಕೃತ ಭಾಷೆ ಮತ್ತು ಸಾಹಿತ್ಯದಲ್ಲಿ ಆಭಿಮಾನವುಳ್ಳವರಾಗಿದ್ದರೂ ಆ ಭಾಷೆಯ ಶಬ್ದಗಳ ಪ್ರಯೋಗಗಳಿಗೆ ಮರುಳಾಗದೇ ತಮ್ಮದೇ ಆದ ತಿರುಳ್ಗನ್ನಡದ ಶಬ್ದಗಳು, ಗಾದೆ ಮಾತುಗಳು ಮತ್ತು
ಪಡೆನುಡಿಗಳನ್ನು ಬೆರೆಸಿದ ಶೈಲಿಯನ್ನು ಸೃಷ್ಟಿಸಿದರು.
ಇವರು ರಚಿಸಿದ ಸಾಹಿತ್ಯ ವಿಪುಲವಾದದ್ದು ಮತ್ತು ವೈವಿಧ್ಯಪೂರ್ಣದದ್ದು. ಸುಮಾರು ಐವತ್ತು ಕೃತಿಗಳನ್ನು ರಚಿಸಿದ ಇವರ ಬರಹಗಳನ್ನು ಕಾದಂಬರಿಗಳು, ಪೌರಾಣಿಕ ಕಥೆಗಳು,  ಚರಿತ್ರೆ ಮತ್ತು ಪ್ರಬಂಧಗಳಾಗಿ ವಿಂಗಡಿಸಬಹುದಾಗಿದೆ. 24 ಕಾದಂಬರಿಗಳು, 9 ಪೌರಾಣಿಕ ಕಥೆಗಳು, 3 ಚರಿತ್ರೆಗಳು ಹಾಗು
8 ಪ್ರಬಂಧಗಳನ್ನು ಗಳಗನಾಥರು ರಚಿಸಿದ್ದಾರೆ. ಇವರ ’ಸದ್ಭೋಧ ಪತ್ರಿಕೆ’ಯಲ್ಲಿ 13 ಕಾದಂಬರಿಗಳು ಧಾರಾವಾಹಿ ರೂಪದಲ್ಲಿ ಪ್ರಕಟವಾಗಿದೆ.
ಪದ್ಮನಯನೆ, ಕುಮುದಿನಿ, ಮಾಧವ ಕರುಣಾವಿಲಾಸ, ಭಗವತೀ ಕಾತ್ಯಾಯಿನಿ, ದುರ್ಗದ ಬಿಚ್ಚುಗತ್ತಿ ಮುಂತಾದವುಗಳು ಇವರ ಸ್ವತಂತ್ರ ಕಾದಂಬರಿಗಳು. ಗಿರಿಜಾ ಕಲ್ಯಾಣ, ಉತ್ತರರಾಮಚರಿತ್ರ, ನಳಚರಿತ್ರ, ಚಿದಂಬರ ಚರಿತ್ರ,
ಭಗವತಾಮೃತ, ಶೈವಸುಧಾರ್ಣವ, ತುಳಸೀರಾಮಾಯಣ, ಮಹಾಭಾರತ ಚರಿತ್ರೆಗಳು, ಸದ್ಗುರು ಪ್ರಭಾವ, ಕಲಿಕುಠಾರ ಮುಂತಾದವುಗಳು ಇವರ ಪೌರಾಣಿಕ ಕಥೆಗಳು. ದಾಂಪತ್ಯ, ಕುಟುಂಬ, ಸುಂದರಲೇಖ, ಸಮುಚ್ಚಯ, ನಿಬಂಧಶಿಕ್ಷಣ, ರಾಜನಿಷ್ಠೆ, ಶ್ರೇಷ್ಠಸದುಪದೇಶ, ಬ್ರಾಹ್ಮಣ ಪ್ರಾಪ್ತಿಸಾಧನೆ, ಕನ್ಯಾಶಿಕ್ಷಣ ಪ್ರಬಂಧಗಳು.

ತಮ್ಮ ಜೀವನವನ್ನೆಲ್ಲಾ ಕಾದಂಬರಿ ರಚನೆ, ಪುಸ್ತಕ
ಪ್ರಕಟಣೆ, ಶಿಕ್ಷಣ, ಪತ್ರಿಕೋದ್ಯಮಕ್ಕೆ ಮೀಸಲಿಟ್ಟ ಗಳಗನಾಥರು ಕೊನೆಯ ಕಾಲದಲ್ಲಿ ಗ್ರಂಥ ಪ್ರಕಟಣೆಯ ಸಾಲದ ಹೊರೆಯಲ್ಲಿ ಸಿಲುಕಿ ಗ್ರಂಥ ಮಾರಾಟಕ್ಕಾಗಿ ಊರೂರು ಅಲೆದಾಡಿದರು.  ಗಳಗನಾಥರು ತಮ್ಮ ಪತ್ರಿಕೆಯ ಮುಖಾಂತರ ಅನೇಕ ಗಣ್ಯರ ಸಂಪರ್ಕ ಸಂವಹನ ಸ್ಥಾಪಿಸಿಕೊಂಡಿದ್ದರು.  ಟಿ ಎಸ್ ವೆಂಕಣ್ಣಯ್ಯ, ಬೆಳ್ಳಾವೆ ವೆಂಕಟನಾರಣಪ್ಪ, ಹೊಸಕೆರೆ ಚಿದಂಬರಯ್ಯ,
ಡಿ ವಿ ಗುಂಡಪ್ಪ, ಎ. ಆರ್. ಕೃಷ್ಣಶಾಸ್ತ್ರಿ, ದೇವುಡು, ಬಿ.ಎಂ.ಶ್ರೀ, ಡಿ. ಕೆ ಭಾರದ್ವಾಜ ಹೀಗೆ ಅನೇಕರು ಅವರ ಸಾಲದ ಹೊರೆ ಇಳಿಸಲು ನೆರವಾದರು.  ಇವರಲ್ಲಿ ಅನೇಕರು ಗಳಗನಾಥರನ್ನು ತಮ್ಮ ಗುರುಗಳೆನ್ನುವಷ್ಟು ಪೂಜ್ಯತೆಯಿಂದ ಕಾಣುತ್ತಿದ್ದರೆಂದು ತಿಳಿದುಬರುತ್ತದೆ.

ಗಳಗನಾಥರನ್ನು ಕಾದಂಬರಿಕಾರ ಎಂದು ಕನ್ನಡಿಗರು ಗುರುತಿಸಿದ್ದು ಅವರಿಗೆ ಸಂತೋಷದ
ವಿಷಯವಾಗಿತ್ತು. ಅವರೇ ವಿವರಿಸುವಂತೆ “ಕರ್ನಾಟಕವು ಪ್ರಾಮುಖ್ಯವಾಗಿ ನನ್ನನ್ನು ಕಾದಂಬರಿಕಾರನೆಂದು ಗುರುತಿಸುತ್ತಿರುವುದು ನನಗೆ ಅಭಿಮಾನದ ಸಂಗತಿಯು.”

ಸಾಲದ ಶೂಲ ನಿತ್ಯ ತಿವಿದಿತಾಗಿ ಆರೋಗ್ಯ ತೀರ ಕೆಟ್ಟು ಕ್ಯಾನ್ಸರ್ ಮೊದಲಾಯಿತು. ಗಳಗನಾಥರು ಆ ಬೇನೆಯಿಂದ ತಮ್ಮ 74ನೆಯ ವಯಸ್ಸಿನಲ್ಲಿ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ
1942ರ ಏಪ್ರೀಲ್ 22ರಂದು ಕೊನೆಯುಸಿರೆಳೆದರು.

#ಗಳಗನಾಥ
#ಪುಣ್ಯಸ್ಮರಣೆ
#VANDEMATARAM

• • •

Missing some Tweet in this thread? You can try to force a refresh
 

Keep Current with Sheshapatangi1 ಪ್ರಭಾ ಮಗ ಈ ಅಲೆಮಾರಿ ಅಯ್ಯಂಗಾರಿ🇮🇳

Sheshapatangi1 ಪ್ರಭಾ ಮಗ ಈ ಅಲೆಮಾರಿ ಅಯ್ಯಂಗಾರಿ🇮🇳 Profile picture

Stay in touch and get notified when new unrolls are available from this author!

Read all threads

This Thread may be Removed Anytime!

PDF

Twitter may remove this content at anytime! Save it as PDF for later use!

Try unrolling a thread yourself!

how to unroll video
  1. Follow @ThreadReaderApp to mention us!

  2. From a Twitter thread mention us with a keyword "unroll"
@threadreaderapp unroll

Practice here first or read more on our help page!

More from @sheshapatangi1

Apr 25
March 28 - 1982.

Pappu had to leave "allotted" residence as he got disqualified.

Why he got disqualified?
Because of his venomous speech.

Who's at fault?
RGs writers.

Who's getting targeted?
PM Modi.

Let's not forget that Maneka and Varun were thrown out of the house by Image
Indira Gandhi.

The Gandhi family shared a household & lived at the prime minister's office at Delhi's Safdarjung. Rahul, was born on June 19, 1970, while Varun was born on March 13, 1980.

Spanish writer Javier Moro details the events of the night in his book 'The Red Sari'.
On the morning of March 28, 1982, Indira came home "determined to be obeyed". Maneka's greeting was met with a curt “We’ll talk later” from Indira.

Maneka locked herself in her room till a servant came to her bearing a tray with her food on it.

Upon being asked about why he
Read 12 tweets
Apr 24
"The Case That Shook British Empire"

Two heroes emerged after Jallianwala Bagh Massacre.

1 is Now Celebrated Sardar Udham Singh
2 is Conveniently Erased
#SankaranNair.

Thread 🧵 on the 1st and the only Malayali Congress President who took the fight against British in ImageImage
Queens backyard.

Immediately after Jallianwalabagh, Sir C. Sankaran Nair writes in his autobiography: “Almost every day I was receiving complaints, personal and by letters, of the most harrowing description of the massacre at Jallianwalla Bagh at Amritsar and the martial law Image
administration & I found that Lord Chelmsford [the Viceroy] approved of what was being done in Punjab. That, to me, was shocking.”

The effects of his resignation were immediate. Censorship of the press was immediately abolished and martial law in Punjab was terminated.
Read 18 tweets
Apr 4
In his autobiography, he wrote that he is afraid that contribution of revolutionaries in freedom movement will be erased & hence writing the same.

And the writer was #SachindranathSanyal – The Freedom Fighter Who Was Imprisoned at CellularJail, TWICE & also the Founder of
Hindustan Republic Association.

Before reading further, think about this, why so called historians made Bhagath famous, but not his mentor?

Well, the answer is Sanyal also wrote Mercy Petitions & which was common.
His autobiography “BANDI JEEVAN” gives you many incidents which
were otherwise hidden from Distorians.
Sachindranath was born at Varanasi on April 03,1893.
At a young age, Sachindra Nath took a vow to liberate the motherland from the clutches of the British rule. He had stated: “When I was a child, I had taken a pledge due to various
Read 14 tweets
Apr 3
ಚಿತ್ರ: ಬಂಗಾರದ ಮನುಷ್ಯ
ಗಾಯಕ: ಪಿ. ಬಿ. ಶ್ರೀನಿವಾಸ್
ರಚನೆ: ಹುಣಸೂರು ಕೃಷ್ಣಮೂರ್ತಿ
ಸಂಗೀತ: ಜಿ ಕೆ ವೆಂಕಟೇಶ್

ನಗುನಗುತಾ ನಲಿ ನಲಿ, ಎಲ್ಲಾ ದೇವನ ಕಲೆ ಎಂದೇ ನೀ ತಿಳಿ, ಅದರಿಂದಾ ನೀ ಕಲಿ
ನಗುನಗುತಾ ನಲಿ ನಲಿ. ಏನೇ ಆಗಲಿ

ಜಗವಿದು ಜಾಣ ಚೆಲುವಿನ ತಾಣ
ಎಲ್ಲೆಲ್ಲೂ ರಸದೌತಣ ನಿನಗೆಲ್ಲೆಲ್ಲೂ ರಸದೌತಣ
ಲತೆಗಳು ಕುಣಿದಾಗ, ಹೂಗಳು ಬಿರಿದಾಗ
ನಗುನಗುತಾ ನಲಿ ನಲಿ. ಏನೇ ಆಗಲಿ

ತಾಯಿ ಓಡಲಿನ ಕುಡಿಯಾಗಿ ಜೀವನ
ತಾಯಿ ಓಡಲಿನ ಕುಡಿಯಾಗಿ ಜೀವನ
ಮೂಡಿ ಬಂದು ಚೇತನ, ಕಾಣಲೆಂದು ಅನುದಿನ
ಮೂಡಿ ಬಂದು ಚೇತನ, ಕಾಣಲೆಂದು ಅನುದಿನ
ಅವಳೆದೆ ಅನುರಾಗ ಕುಡಿಯುತ ಬೆಳೆದಾಗ

ನಗುನಗುತಾ ನಲಿ ನಲಿ. ಏನೇ ಆಗಲಿ

ಗೆಳೆಯರ ಜೊತೆಯಲಿ ಕುಣಿಕುಣಿದು, ಬೆಳೆಯುವ ಸೊಗಸಿನ ಕಾಲವಿದು
ಗೆಳೆಯರ ಜೊತೆಯಲಿ ಕುಣಿಕುಣಿದು, ಬೆಳೆಯುವ ಸೊಗಸಿನ ಕಾಲವಿದು
ಮುಂದೇ ಯವ್ವನ, ಮದುವೇ ಬಂಧನ .....
ಎಲ್ಲೆಲ್ಲೂ ಹೊಸ ಜೀವನ.. ಅಹ, ಎಲ್ಲೆಲ್ಲೂ ಹೊಸ ಜೀವನ
ಜೊತೆಯದು ದೊರೆತಾಗ ಜೊತೆಯದು ದೊರೆತಾಗ
ಮೈಮನ ಬೆರೆತಾಗ

ನಗುನಗುತಾ ನಲಿ ನಲಿ ಏನೇ ಆಗಲಿ

ಏರುಪೇರಿನ ಗತಿಯಲ್ಲಿ ಜೀವನ
ಏರುಪೇರಿನ ಗತಿಯಲ್ಲಿ ಜೀವನ
ಸಾಗಿಮಾಗಿ ಹಿರಿತನ, ತಂದಿತಯ್ಯ ಮುದಿತನ
Read 4 tweets
Mar 30
Had India begun preparation for a ‘possible’ war with China, as professionally advised by #GeneralThimayya in 1959, history would have been very different.

In independent India’s history of 68-odd years, we have fought five major wars, four of which were with Pakistan and one
with China. The Indo-Pak wars went clearly in our favour, although the 1965 clash may not have had as definitive an outcome as we wanted. The Indo-China war of 1962 was a monumental fiasco, the ripple effects of which still resonate in our collective psyche.

Shiv Kunal Verma’s
book titled, “1962: THE WAR THAT WASN’T” tries to give a complete account of 1962 War between India and China. General Kodandera Subayya Thimayya, Padma Bhushan, DSO was Indian Army Chief from 08 May 1957 to 07 May 1961, and General Pran Nath Thapar served as Indian Army Chief
Read 20 tweets
Mar 29
ಚಿತ್ರ: ಗಿರಿಕನ್ಯೆ
ರಚನೆ: ಚಿ. ಉದಯಶಂಕರ್
ಸಂಗೀತ: ರಾಜನ್ ನಾಗೇಂದ್ರ
ಗಾಯಕ: ಡಾ. ರಾಜಕುಮಾರ್

ಏನೆಂದು ನಾ ಹೇಳಲೀ, ಮಾನವನಾಸೆಗೆ ಕೊನೆಯಲ್ಲಿ
ಕಾಣೋದೆಲ್ಲಾ ಬೇಕು ಎಂಬ ಹಠದಲ್ಲಿ, ಒಳ್ಳೇದೆಲ್ಲಾ ಬೇಕು ಎಂಬ ಛಲದಲ್ಲಿ
ಯಾರನ್ನೂ ಪ್ರೀತಿಸನು ಮನದಲ್ಲಿ, ಏನೊಂದೂ ಬಾಳಿಸನು ಜಗದಲ್ಲಿ
ಏನೆಂದು ನಾ ಹೇಳಲೀ, ಮಾನವನಾಸೆಗೆ ಕೊನೆಯಲ್ಲಿ
ಜೇನುಗಳೆಲ್ಲ ಅಲೆಯುತ ಹಾರಿ, ಕಾಡೆಲ್ಲಾ ಕಾಡೆಲ್ಲಾ ಕಾಡೆಲ್ಲಾ
ಹನಿ ಹನಿ ಜೇನು ಸೇರಿಸಲೇನು ಬೇಕು ಎಂದಾಗ ತನದೆನ್ನುವ

ಕೆಸರಿನ ಹೂವು ವಿಷಾದ ಹಾವು, ಭಯವಿಲ್ಲ ಭಯವಿಲ್ಲ ಭಯವಿಲ್ಲ
ಚೆಲುವಿನದೆಲ್ಲಾ, ರುಚಿಸುವುದೆಲ್ಲಾ ಕಂಡು ಬಂದಾಗ ಬೇಕೆನ್ನುವಾ

ಏನೆಂದು ನಾ ಹೇಳಲೀ ಮಾನವನಾಸೆಗೆ ಕೊನೆಯಲ್ಲಿ

ಪ್ರಾಣಿಗಳೇನು ಗಿಡಮರವೇನು, ಬಿಡಲಾರ ಬಿಡಲಾರ ಬಿಡಲಾರ
ಬಳಸುವನೆಲ್ಲಾ, ಉಳಿಸುವುದಿಲ್ಲಾ ತನ್ನ ಹಿತಕಾಗೆ ಹೋರಾಡುವ
ನುಡಿಯುವುದೊಂದು ನೆಡೆಯುವುದೊಂದು, ಎಂದೆಂದು ಎಂದೆಂದು ಎಂದೆಂದು
ಪಡೆಯುವುದೊಂದು ಕೊಡುವುದು ಒಂದು, ಸ್ವಾರ್ಥಿ ತಾನಾಗೆ ಮೆರೆದಾಡುವ

ಏನೆಂದು ನಾ ಹೇಳಲೀ, ಮಾನವನಾಸೆಗೆ ಕೊನೆಯಲ್ಲಿ
ಕಾಣೋದೆಲ್ಲಾ ಬೇಕು ಎಂಬ ಹಠದಲ್ಲಿ, ಒಳ್ಳೇದೆಲ್ಲಾ ಬೇಕು ಎಂಬ ಛಲದಲ್ಲಿ
ಯಾರನ್ನೂ ಪ್ರೀತಿಸನು ಮನದಲ್ಲಿ,
Read 4 tweets

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3/month or $30/year) and get exclusive features!

Become Premium

Don't want to be a Premium member but still want to support us?

Make a small donation by buying us coffee ($5) or help with server cost ($10)

Donate via Paypal

Or Donate anonymously using crypto!

Ethereum

0xfe58350B80634f60Fa6Dc149a72b4DFbc17D341E copy

Bitcoin

3ATGMxNzCUFzxpMCHL5sWSt4DVtS8UqXpi copy

Thank you for your support!

Follow Us on Twitter!

:(