ಸುನಿಲ್🌱 Profile picture
Sep 19, 2020 29 tweets 14 min read Read on X
ಸಧ್ಯದ ಓದು - ನೃಪತುಂಗ
ಲೇಖಕ : ತರಾಸು ಅವ್ರು ( ತಳಕು ರಾಮಸ್ವಾಮಯ್ಯ ಸುಬ್ಬರಾಯ ಅವ್ರು ) 🙏

"ರಾಷ್ಟ್ರಕೂಟ ಚಕ್ರವರ್ತಿ ಅಮೋಘವರ್ಷ ನೃಪತುಂಗ.
ಕಾವೇರಿಯಿಂದ ಗೋದಾವರಿ ಪರ್ಯಂತದ ನಾಡನ್ನು ಸುಮಾರು ಅರವತ್ತು ವರ್ಷ ಧರ್ಮದಿಂದ ಪಾಲಿಸಿ, ದೇಶ ವಿದೇಶಗಳಲ್ಲೂ ಪ್ರಸಿದ್ಧನಾಗಿದ್ದ ದೊರೆ."
#ನೃಪತುಂಗ #ತರಾಸು ImageImage
"ಸುಖವಾಗಲಿ ದುಃಖವಾಗಲಿ ಒಂಟಿಯಾಗಿ ಬರುವುದಿಲ್ಲ, ಇಲ್ಲದಾಗ ಇಲ್ಲ, ಬರುವಾಗ ಹಿಂಡುಹಿಂಡಾಗಿ ಹುಣ್ಣಿಮೆಯ ಮಧ್ಯರಾತ್ರಿ ಏರಿ ಏರಿ ಬರುವ ಕಡಲ ಅಲೆಗಳಂತೆ ಬರುತ್ತವೆ."
#ನೃಪತುಂಗ #ತರಾಸು
ತಾವಾಗಿ ಯಾರೂ ಯುದ್ಧಕ್ಕೆ ರಕ್ತಪಾತಕ್ಕೆ ಹಾತೊರೆಯಬಾರದು.ಅಂಥ ಅಧರ್ಮ ಯುದ್ಧ ಇಹಪರರ ವೈರಿ.ಆದರೆ ಪ್ರಜಾ ಪಾಲನೆಗೆ ಅಗತ್ಯವಾದ ಯುದ್ಧಕ್ಕೆ ಹಿಂಜರಿಯುವ ಅರಸನನ್ನು ರಾಜ್ಯಲಕ್ಷ್ಮಿ ಹೇಸಿ ದೂರವಾಗುತ್ತಾಳೆ.ನಿಗ್ರಹಯೋಗ್ಯನಾದ ಶತ್ರುವನ್ನಾಗಲಿ,ದುಷ್ಟ ಪುತ್ರನನ್ನಾಗಲಿ ಸಮಾನವಾಗಿ ನಿಗ್ರಹಿಸಿ,ಪ್ರಜಾ ಪರಿಪಾಲನೆ ಮಾಡುವ ದೊರೆಯೇ ಸಮಂಜಸನು. #ನೃಪತುಂಗ
"ಅರಸೊತ್ತಿಗೆ ನಿತ್ಯ ಸುಖಾಸಮಾರಾಧನೆಯ ಸುಪ್ಪತ್ತಿಗೆಯಲ್ಲ. ಪ್ರಜೆಗಳ  ವೀರಭಟರ ತ್ಯಾಗದ ಹಾಲಿನಿಂದ ಬೆಳೆದ ರಾಜಶರೀರ ಅವರ ಸೇವೆಗೆ ಮೀಸಲಾಗಬೇಕು."

#ನೃಪತುಂಗ #ತರಾಸು_ಅವ್ರು 🙏
"ಪ್ರಜಾಪ್ರೇಮ ಸಿಂಹಾಸನಕ್ಕೆ ವಜ್ರಕೋಟೆ. ಸಾಮ್ರಾಟರಿಂದ ಸಿಂಹಾಸನಗಳು ಉಳಿಯಿವುದಿಲ್ಲ,ಬೆಳೆಯುವುದಿಲ್ಲ.ಪ್ರಜೆಗಳ ಪ್ರೇಮಪೂರ್ಣ ನಿಷ್ಠೆಯೇ ಸಿಂಹಾಸನದ ರಕ್ಷಾ ದೇವತೆ."

#ನೃಪತುಂಗ #ತರಾಸು_ಅವ್ರು 🙏
"ನಿಂತಲ್ಲಿ ನಿಲ್ಲದೆ ಸಾಗಿದ, ಕೆಣಕಿದ ಜೇನುಪೆಡೆಯಂಥ ಕನ್ನಡ ಸೇನೆ , ವೆಂಗಿವಳ್ಳಿಯ ಬಯಲಲ್ಲಿ ಚಾಲುಕ್ಯ ಸೇನೆಯ ಮೇಲೆ ಎರಗಿತು, ಹಾವಿನ ಮೇಲೆ ಎರಗುವ ಗರುಡನಂತೆ.
#ನೃಪತುಂಗ #ತರಾಸು_ಅವ್ರು
"ರಾಷ್ಟ್ರಕೂಟ ಸೇನೆಯ ಸಿಡಿಲಾಘಾತದಿದಿರು ಚಾಲುಕ್ಯ ಸೇನೆ ತತ್ತರಿಸಿ ಸತ್ತ ದೊರೆ ಕಲಿವಿಷ್ಣುವರ್ಧನನನ್ನು ಸಮರಭೂಮಿಯಲ್ಲಿ ಬಿಟ್ಟು ಸಾಮಂತ ಪದವಿ ಸ್ವೀಕಾರ ಮಾಡಿ ಪಲಾಯನ ಮಾಡಿತು. ಮುಗಿಲಿನಂತೆ ಕವಿದು ಬಂದದು ಇಬ್ಬನಿಯಂತೆ ಕರಗಿ ಹೋಯಿತು."
#ನೃಪತುಂಗ #ತರಾಸು_ಅವ್ರು
"ಬಂಗಾರದ ಹೂವಿಗೆ ಪರಿಮಳವೂ ಮೂಡಿದಂತಾಯಿತು"
#ನೃಪತುಂಗ #ತರಾಸು
"ಬರುವುದೆಲ್ಲಾ ನಾವು ಅನುಭವಿಸಬೇಕೆಂದು ಬರುತ್ತವೆಯೇ ಹೊರತು , ಮನೋವ್ಯಥೆ ಮಾಡಿಕೊಂಡು ಕೊರಗುವುದಕ್ಕಲ್ಲ. ಸುಖ ದುಃಖಗಳು ಅಭ್ಯಾಗತರಂತೆ. ಒಬ್ಬರು ಬಂದರೆಂದು ಹಿಗ್ಗೇಕೆ, ಮತ್ತೊಬ್ಬರು ಬಂದರೆಂದು ಕೊರಗೇಕೆ.? ಬರುವುದು ಬರಲಿ ನಮ್ಮ ಕರ್ತವ್ಯ ನಾವು ಮಾಡಬೇಕು."
#ನೃಪತುಂಗ #ತರಾಸು
ಲಕ್ಷ್ಮವ್ವ - "ಕಾಪಾಡುವ ದೈವವೇ ಕಾಡುವ ಪಿಡುಗಾದಾಗ ಏನು ಮಾಡುವುದು ?"

ನೃಪತುಂಗ - "ಕಾಡುವ ಪಿಡುಗು ದೈವದ ಅವತಾರವೇ ಎಂದು ನಂಬಿ ನಿಲ್ಲುವುದು."
#ನೃಪತುಂಗ #ತರಾಸು
"ಪರಿಹಾರವಿಲ್ಲದ ದುಃಖವಾವೂದು ಈ ಜಗತ್ತಿನಲ್ಲಿಲ್ಲ"
#ನೃಪತುಂಗ #ತರಾಸು
"ಅತಿ ಯಾವ ಸಂದರ್ಭದಲ್ಲೂ ಒಳಿತಲ್ಲ"
#ನೃಪತುಂಗ #ತರಾಸು
"ಹೂವಿನ ಗಿಡದ ಮೇಲೆ ಪ್ರೀತಿ ಇರಬೇಕು ನಿಜ. ಹಾಗೆಂದು ಹೆಚ್ಚಾಗಿ ನೀರು, ಗೊಬ್ಬರ ಹಾಕಿದರೆ ಗಿಡ ಉಳಿದೀತೆ..? ಮಕ್ಕಳೂ ಗಿಡದ ಹಾಗೆ, ಕಾಪಾಡುವಾಗ ಮಮತೆ ಬೇಕು , ಪ್ರೀತಿಸುವಾಗ ಸಂಯಮ ಬೇಕು."
#ನೃಪತುಂಗ #ತರಾಸು
"ಅರಸೊತ್ತಿಗೆ ಸುಖದ ಸುಪ್ಪತ್ತಿಗೆಯಲ್ಲ , ಕಠಿಣ ಹೊಣೆಗಾರಿಕೆಯ ಮುಳ್ಳಿನ ಮಂಚ."
#ನೃಪತುಂಗ #ತರಾಸು
"ಇಹವನ್ನು ಮರೆತು ಪರಕ್ಕೆ ಎಳೆಸುವುದು ಮುಗಿಲಿಗೆ ಏಣಿ ಹಾಕಲು ಯತ್ನಿಸಿದಂತೆ"

"ತನ್ನ ಪಾಲಿಗೆ ಬಂದ ಕರ್ತವ್ಯವನ್ನು ಕುಶಲತೆಯಿಂದ ತನ್ಮಯತೆಯಿಂದ ಮಾಡುವುದೇ ಯೋಗ."

#ನೃಪತುಂಗ #ತರಾಸು
"ಮೃತರಾದವರ ಬಗ್ಗೆ ನಮಗೆ ಪ್ರೇಮವಿದ್ದರೆ ಕಂಬನಿಗರೆಯುತ್ತ ಕುಳಿತುಕೊಳ್ಳುವುದೇ ಆ ಪ್ರೇಮಕ್ಕೆ ಸಾಕ್ಷಿಯಲ್ಲ,ಪರಲೋಕದಲ್ಲಿರುವ ಅವರ ಆತ್ಮಕ್ಕೆ ತೃಪ್ತಿಯಾಗುವಂತೆ ಬದುಕಿರುವ ನಾವು ಬದುಕಬೇಕು.ಶೋಕದಿಂದ ಹತಾಶರಾಗಿ ಕುಳಿತರೆ ಅವರ ಆತ್ಮಕ್ಕೂ ಅತೃಪ್ತಿ , ನಮ್ಮ ಆತ್ಮಕ್ಕೂ ಕೇಡು."

#ನೃಪತುಂಗ #ತರಾಸು
"ಶಿಷ್ಯನಿಗೆ ಗುರುವಿನಲ್ಲಿ ಗೌರವವಿಲ್ಲವಾದಲ್ಲಿ ವಿದ್ಯೆ ವಿಕಾಸವಾಗುವುದಿಲ್ಲ."

"ನಮಗೆ ಅಪಮಾನ, ಅಗೌರವ ಇತರರಿಂದ ಆಗುವುದಿಲ್ಲ, ನಮ್ಮ ನಡತೆಯೇ ನಮಗೆ ಮಾನಾಪಮಾನವನ್ನುಂಟುಮಾಡುವುದು."

"ಗಾಳಿ ನೀರನ್ನು ಕಲಕಿದಂತೆ, ಬೆಟ್ಟವನ್ನು ಕಲಕಲು ಸಾಧ್ಯವೇ..?"

#ನೃಪತುಂಗ #ತರಾಸು
"ಚಕ್ರವರ್ತಿ ವೈಯಕ್ತಿಕವಾಗಿ ಯಾವ ಧರ್ಮದಲ್ಲೇ ಶ್ರದ್ದೆ ತೋರಿದರೂ, ಚಕ್ರವರ್ತಿಯಾಗಿ ಆ ಬಗೆಯ ಬೇಧ ಮಾಡಿದರೆ ಅಂತ ಅರಸನಿಗೆ ವಿನಾಶ ತಪ್ಪದು. ಚಕ್ರವರ್ತಿಯಾಗಿ ಪಾಲಿಸಬೇಕಾದದ್ದು ಪ್ರಜಾ ಧರ್ಮವೊಂದೇ "

#ನೃಪತುಂಗ #ತರಾಸು
"ಸುಖ ದುಃಖಗಳ ನಿತ್ಯ ಆಘಾತಕ್ಕೆ ಬೆದರಿ ಬದುಕಿನಿಂದಾಚೆಗೆ ಓಡುವ ಹೇಡಿತನ ಸನ್ಯಾಸವಲ್ಲ, ಅವ್ಯಕ್ತವಾಗಿರುವ ಆತ್ಮವನ್ನು ಸಾಕ್ಷಾತ್ಕಾರಮಾಡಿಕೊಳ್ಳುವ ಸಾಹಸವೇ ಸನ್ಯಾಸ."

"ತಾನು ಉರಿದರೂ ಲೋಕಕ್ಕೆ ಬೆಳಕು ನೀಡುವ ಬತ್ತಿ ನಿಜವಾದ ಸನ್ಯಾಸಿ."

"ಸನ್ಯಾಸಿಗೆ ಸ್ವಸುಖ ವಿಸ್ಮೃತಿ , ಪರಹಿತ ಚಿಂತೆಯೇ ಕರ್ತವ್ಯ."

#ನೃಪತುಂಗ #ತರಾಸು
"ಅಜ್ಞಾನದಂತೆಯೇ ಅತಿಜ್ಞಾನವೂ ಅಪಾಯಕಾರಿ"

"ಗ್ರಹಗಳು ತರುವ ಫಲವನ್ನು ತರಲಿ.
ಏನು ಬಂದರೂ ಕದಲದ ಚಿತ್ತ ಶಾಂತಿಯೊಂದಿರಲಿ."

#ನೃಪತುಂಗ #ತರಾಸು
"ಸ್ನೇಹಿತರ, ಆಪ್ತರ ಹೆಣಗಳನ್ನ ತುಳಿದುಕೊಂಡೇ ಕತ್ತಿ ಹಿರಿದು ಮುಂದೆ ನುಗ್ಗುವ ಸೈನಿಕನಂತೆ, ಚಕ್ರವರ್ತಿ ತನ್ನದೆನ್ನುವುದು ಉರಿದುಬೀಳುತ್ತಿದ್ದರೂ ಲೆಕ್ಕಿಸದೆ ಪ್ರಜಾಹಿತ ಚಿಂತನೆ ಮಾಡಬೇಕು."

#ನೃಪತುಂಗ #ತರಾಸು
"ಸ್ವಾತಂತ್ರ್ಯ ಸ್ವಚ್ಚಂದಾಚರಣೆಗೆ ರಹದಾರಿಯಲ್ಲ,
ಅದು ಹೊಣೆಗಾರಿಕೆಯ ಅರಿವಿನ ಸುವರ್ಣ ಶೃಂಖಲೆ."

#ನೃಪತುಂಗ #ತರಾಸು
"ರಾಜ್ಯರಥವನ್ನು ನಡೆಸುವ ನ್ಯಾಯದ ಕುದುರೆಗೆ ಮಮತೆಯ ಕಡಿವಾಣ ಬಿಗಿಯುವುದು ಸಲ್ಲದು."

#ನೃಪತುಂಗ #ತರಾಸು
"ಪ್ರಕೃತಿಯ ಸಂತಾನ ಜನ, ಆಕೆಯ ನಿಯಮಕ್ಕೆ ವಿರುದ್ಧವಾಗಿ ನಡೆದಾಗ ಪ್ರಕೃತಿ ಮರಣದಂಡನೆ ವಿಧಿಸುತ್ತದೆ. ಆ ಶಿಕ್ಷೆ ಕ್ಷಾಮವಾಗಿ ರೋಗರುಜಿನಗಳಾಗಿ ಕಾರ್ಯಗತವಾಗುತ್ತದೆ."

#ನೃಪತುಂಗ #ತರಾಸು
"ಜಗತ್ತಿನಲ್ಲಿ ಜನಿಸಿದ ಜನ ಸ್ನೇಹ ಶಾಂತಿಗಳಿಂದ ಹೂ ಬಳ್ಳಿಗಳಂತೆ ನಗುತ್ತಾ ಬದುಕಬೇಕೆಂಬುದು ಪ್ರಕೃತಿಯ ಬಯಕೆ, ಅದಕ್ಕೆ ವಿರುದ್ಧವಾಗಿ ಮಾನವನೇ ಮಾನವನ ವೈರಿಯಾಗಿ ರಕ್ತಪಾತಕ್ಕಿಳಿದಾಗ, ಸ್ವಾರ್ಥಕ್ಕಾಗಿ ಕೊಲೆ ಯುದ್ಧಗಳಾಗಿ ಭೂದೇವಿಗೆ ರಕ್ತಸ್ನಾನದ ಕಳಂಕವಾದಾಗ, ಲಲಿತೆಯಾದ ಪ್ರಕೃತಿ ದುರ್ಗೆಯಾಗುತ್ತಾಳೆ."

#ನೃಪತುಂಗ #ತರಾಸು
"ಹಣ್ಣೆಲೆಗಳೇ ಚಿರವಾಗಿರಬೇಕೆಂದರೆ,
ಚಿಗುರುಗಳಿಗೆಲ್ಲಿ ಅವಕಾಶ..!!??"

#ನೃಪತುಂಗ #ತರಾಸು
"ಕೋಟ್ಯಾಂತರ ಚಕ್ರವರ್ತಿಗಳು ಹುಟ್ಟಿ ಸಾಯುವ ಈ ಜಗತ್ತಿನಲ್ಲಿ ಉಳಿಯುವುದು ಅವರಾರ ಹೆಸರೂ ಅಲ್ಲ, ಉದಾತ್ತ ಜೀವನ ನಡೆಸಿದ ಧನ್ಯರ ಹೆಸರೊಂದೇ ಉಳಿಯುವುದು."

#ನೃಪತುಂಗ #ತರಾಸು
ಉಘೇ ಉಘೇ!! 🙌
ಅಮೋಘವರ್ಷ ಚಕ್ರವರ್ತಿ ಉಘೇ!! 🙌
ನೃಪತುಂಗ ಚಕ್ರವರ್ತಿ ಉಘೇ ಉಘೇ!! 🙌

#ನೃಪತುಂಗ 🙏 #ತರಾಸು 🙏
'ಚಕ್ರವರ್ತಿ' ಅನ್ನೋ ಪದಕ್ಕೆ ಕಲಶವಿಟ್ಟಂತೆ ರಾಜ್ಯಭಾರ ಮಾಡಿ, ವೈರಿಗಳ ವಿರುದ್ಧ ಛಲದಿಂದ ಹೋರಾಡಿ ಮೆರೆದಾಡಿದ ಹಲವು ಮಹನೀಯರುಗಳ ಪಟ್ಟಿಯಲ್ಲಿ ನಮ್ಮ ಕನ್ನಡದ💛❤️ದೊರೆಗಳು ಇದ್ದಾರೆ🙏.ನಮ್ಮವರ, ನಮ್ಮ ನಾಡಿನ ಇತಿಹಾಸ ತಿಳಿದಾಗ ರೋಮಾಂಚನ ಆಗತ್ತೆ, ಹೆಮ್ಮೆ ಅನ್ಸುತ್ತೆ.😍

ಧನ್ಯವಾದಗಳು #ತರಾಸು ಅವ್ರೇ.🙏🤗🤗

#ನೃಪತುಂಗ 🙏 🙌

• • •

Missing some Tweet in this thread? You can try to force a refresh
 

Keep Current with ಸುನಿಲ್🌱

ಸುನಿಲ್🌱 Profile picture

Stay in touch and get notified when new unrolls are available from this author!

Read all threads

This Thread may be Removed Anytime!

PDF

Twitter may remove this content at anytime! Save it as PDF for later use!

Try unrolling a thread yourself!

how to unroll video
  1. Follow @ThreadReaderApp to mention us!

  2. From a Twitter thread mention us with a keyword "unroll"
@threadreaderapp unroll

Practice here first or read more on our help page!

More from @KannadigaSunill

Aug 15, 2022
ಸದ್ಯದ ಓದು

ಸಮಗ್ರ ಆಧುನಿಕ ಮೈಸೂರು ಚರಿತ್ರೆ 📖

( ಕ್ರಿ. ಶ. ೧೭೯೯ ರಿಂದ ೧೯೫೬ ರವರೆಗೆ )

✍️ ಎಂ. ಕೃಷ್ಣಯ್ಯ ಅವ್ರು 🙏

#ಕನ್ನಡ 💛❤️ #ಕರುನಾಡು #ಮೈಸೂರು
ಮೈಸೂರಿನ ಪ್ರಾಚೀನತೆ ಮತ್ತು ಯದುವಂಶದ ಸ್ಥಾಪನೆ :

ಅನಾದಿ ಕಾಲದಿಂದಲೂ ಮೈಸೂರು ಎಂಬ ಹೆಸರು ರೂಢಿಯಲ್ಲಿದ್ದಂತೆ ಕಾಣಿಸುತ್ತದೆ. ಆದರೆ ಯಾವಾಗ ಈ ಹೆಸರು ಈ ಸೀಮೆಗೆ ಪ್ರಾಪ್ತವಾಯಿತೆಂದು ಹೇಳಲು ಸಾಧ್ಯವಾಗುತ್ತಿಲ್ಲ.
ಪಾಂಡವರ ಯುಗದಲ್ಲಿ ಈ ಪ್ರಾಂತವನ್ನು ಮಾಹಿಷ್ಮತಿ ಎಂದು ಕರೆಯಲಾಗುತ್ತಿತ್ತೆಂದು ಶಾಸನ ತಜ್ಞ ಬಿ.ಎಲ್. ರೈಸ್‌ರವರು ಹೇಳುತ್ತಾರೆ. ಸಾಮ್ರಾಟ ಅಶೋಕನ ಕಾಲದಲ್ಲಿ ಈ ಸೀಮೆಗೆ ಮಹಿಷ ಮಂಡಲವೆಂದು ಕರೆಯಲಾಗುತ್ತಿತ್ತೆಂದು ಹೇಳಲಾಗಿದೆ. ಅಶೋಕ ಚಕ್ರವರ್ತಿ ಬೌದ್ಧಧರ್ಮ ಪ್ರಚಾರಕ್ಕೆ ಮಹಾದೇವ ಎಂಬುವನನ್ನು ಮಹಿಷ ಮಂಡಲಕ್ಕೆ ಕಳುಹಿಸುತ್ತಾನೆ.
Read 195 tweets
Oct 29, 2020
ಬೇಂದ್ರೆ ಅಜ್ಜ ೪ ನೇ ತರಗತಿಯಲ್ಲಿರುವಾಗ ಕನ್ನಡ ಕುಲಪುರೋಹಿತರಾದ ಆಲೂರು ವೆಂಕಟರಾಯರು ಅವ್ರಿಗೆ ಶಿಕ್ಷಕರಾಗಿದ್ರಂತೆ.

ಎಷ್ಟು ಚಂದ.😍🙏
ಬೇಂದ್ರೆ ಅಜ್ಜನ ಕಾಲದ ಮನರಂಜನೆ ಹೇಗಿತ್ತು..?

ಅಜ್ಜ ಹೀಗ್ ಬರೀತಾರೆ...

೧.
ಶಂಕರಾಚಾರ್ಯರ
ಸೌಂದರ್ಯ ಲಹರಿ
ಗಂಗಾ ಲಹರಿ
ಭಾಮಿನಿ ವಿಲಾಸ
ಗೀತಾ ಗೋವಿಂದಗಳನ್ನ ಕೇಳೋದು.

೨.
ಊರಳಗಿನ ವಿಠೋಬ ದೇವರ ಗುಡಿ,
ದತ್ತಾತ್ರೇಯ ಗುಡಿಯ ಕೀರ್ತನ
ಪುರಾಣ ಪ್ರವಚನಗಳು.

೩.
ಶಿರಹಟ್ಟಿ ನಾಟಕ ಕಂಪನಿ ಪ್ರಯೋಗಗಳು
ಮರಾಠಿ ನಾಟಕದ ಪ್ರಭಾವ.
೪.
ಮನೆಯಲ್ಲಿ ತಾಯಿ ಅಂಬಾ ಬಾಯಿಯವರು ಹೇಳ್ತಾ ಇದ್ದ ಉದಯರಾಗದ ಭಕ್ತಿ ಗೀತೆಗಳು , ಪಾರಂಪರಿಕ ಹಾಡುಗಳು, ದಾಸರ ಕೀರ್ತನೆಗಳು ನನ್ನ ಚಿತ್ತವನ್ನ ಬೆಳಗಿದವು ಅಂತ ಬರೀತಾರೆ.

ಮಹನೀಯರ ಮನರಂಜನೆ ಹೀಗಿದ್ವು
ಅದಿಕ್ಕೆ ಅವ್ರು ಮುಗಿಲೆತ್ತರದ ಸಾಧನೆ ಮಾಡುದ್ರು.🙏🙏🙏

#ಬೇಂದ್ರೆಅಜ್ಜ 🙏
Read 181 tweets
Oct 1, 2020
ಶ್ರೀರಾಮಚಂದ್ರ ಪ್ರಭುವಿನ ವಂಶವೃಕ್ಷ

ಮಾಹಿತಿ ಸಂಗ್ರಹ: ಶರತ್ ವಿಶ್ವಕರ್ಮ ಅವ್ರು
ಕೃಪೆ: ಶಿವರಾಜ ಅವ್ರು

• ಬ್ರಹ್ಮನ ಮಗ ಮರೀಚಿ
• ಮರೀಚಿಯ ಮಗ ಕಾಶ್ಯಪ
• ಕಾಶ್ಯಪರ ಮಗ ಸೂರ್ಯ
• ಸೂರ್ಯನ ಮಗ ಮನು
• ಮನುವಿನ ಮಗ ಇಕ್ಷ್ವಾಕು
• ಇಕ್ಷ್ವಾಕುವಿನ ಮಗ ಕುಕ್ಷಿ
• ಕುಕ್ಷಿಯ ಮಗ ವಿಕುಕ್ಷಿ
• ವಿಕುಕ್ಷಿಯ ಮಗ ಬಾಣ
• ಬಾಣನ ಮಗ ಅನರಣ್ಯ
1/n
• ಅನರಣ್ಯನ ಮಗ ಪೃಥು
• ಪೃಥುವಿನ ಮಗ ತ್ರಿಶಂಕು
• ತ್ರಿಶಂಕುವಿನ ಮಗ ದುಂಧುಮಾರ.(ಯುವನಾಶ್ವ)
• ದುಂಧುಮಾರುವಿನ ಮಗ ಮಾಂಧಾತ
• ಮಾಂಧಾತುವಿನ ಮಗ ಸುಸಂಧಿ
• ಸುಸಂಧಿಯ ಮಗ ಧೃವಸಂಧಿ
• ಧೃವಸಂಧಿಯ ಮಗ ಭರತ
• ಭರತನ ಮಗ ಅಶೀತಿ
• అಶೀತಿಯ ಮಗ ಸಗರ
• ಸಗರನ ಮಗ ಅಸಮಂಜಸ*
• ಅಸಮಂಜಸನ ಮಗ ಅಂಶುಮಂತ
• ಅಂಶುಮಂತನ ಮಗ ದಿಲೀಪ
2/n
• ದಿಲೀಪನ ಮಗ ಭಗೀರಥ
• ಭಗೀರಥನ ಮಗ ಕಕುತ್ಸು
• ಕಕುತ್ಸುವಿನ ಮಗ ರಘು
• ರಘುವಿನ ಮಗ ಪ್ರವುರ್ಧ
• ಪ್ರವುರ್ಧನ ಮಗ ಶಂಖನು
• ಶಂಖನುವಿನ ಮಗ ಸುದರ್ಶನ
• ಸುದರ್ಶನನ ಮಗ ಅಗ್ನಿವರ್ಣ
• ಅಗ್ನಿವರ್ಣನ ಮಗ ಶೀಘ್ರವೇದ
• ಶೀಘ್ರವೇದನ ಮಗ ಮರು
• ಮರುವಿನ ಮಗ ಪ್ರಶಿಷ್ಯಕ
• ಪ್ರಶಿಷ್ಯಕನ ಮಗ ಅಂಬರೀಶ
• ಅಂಬರೀಶನ ಮಗ ನಹುಶ
3/n
Read 11 tweets
Jul 12, 2020
✍️ ನಾಗಾರ್ಜುನ್ ಶರ್ಮ & ಕಿನ್ನಲ್ ರಾಜ್ ಅವ್ರು 🤗

ಮರಳಿ ಮನಸಾಗಿದೆ
ಸಾಗಿದೆ ನಿನ್ನಾ ಹೃದಯಕೆ
ಪಯಣ ಶುರುವಾಗಿದೆ
ಕೋರಿದೆ ಪ್ರೀತಿ ಕಾಣಿಕೆ

ಮತ್ತೆ ಮತ್ತೆ ಮನಸು ಶರಣಾದ ಹಾಗಿದೆ
ಕಿರು ಬೆರಳು ಬಯಸಿದೆ ಸಲುಗೆ
ಇರಬೇಕು ಜೊತೆಯಾಗಿ ನಿನ್ನಲಿ......ನಾ 🎶🎶🎶
ಮಿಂಚುತ್ತಿದೆ ಮಿಂಚುತ್ತಿದೆ
ನಿನ್ನಿಂದ ಕನಸೆಲ್ಲಾ ಹೆಚ್ಚುತ್ತಿದೆ
ಮಿಂಚುತ್ತಿದೆ.....ಇದು ಮಿಂಚುತ್ತಿದೆ
ಹೃದಯಕೆ ಬಿರುಸಾಗಿ ಬಂತು ಕಣೆ

ಮರಳಿ ಮನಸ್ಸಾಗಿದೆ
ಸಾಗಿದೆ ನಿನ್ನಾ ಹೃದಯಕೆ
ಪಯಣ ಶುರುವಾಗಿದೆ
ಕೋರಿದೆ ಪ್ರೀತಿ ಕಾಣಿಕೆ...🎶🎶🎶
ಸಂಭ್ರಮ ದುಪ್ಪಟ್ಟು ಆದಂತ್ತಿದೆ
ನೀನೊಂಥರಾ ನಯನಾದ್ಭುತ
ಆಗಮ.. ಉಸಿರೊಂದು ಉಸಿರಾಗಿದೆ
ತಪ್ಪಾದರೆ ಬಚ್ಚಾಯಿಸು, ಪ್ರೀತಿಲಿ ಗುರಾಯಿಸು
ಹಗಲೆ ಹಗೆಯಾದ ಈ ಜೀವಕೆ
ಬೆಳಕು ನೀನಾಗಿಯೆ
ಬದುಕು ಕುರುಡಾದ ಈ ಮೋಸಕೆ
ಉಸಿರು ನೀನಾಗಿಯೆ..🎶🎶🎶
Read 4 tweets
Jul 12, 2020
#ಕಾಯ್ಕಿಣಿ_ಸಾಲುಗಳು

ಅರೆರೆ ಶುರುವಾಯಿತು ಹೇಗೆ
ಪದವೇ ಸಿಗದಾಯಿತು ಹೇಗೆ
ಹೃದಯ ಕಳುವಾಯಿತು ಹೇಗೆ
ಒಂದೂ ಮಾತು ಆಡದೆ

ಮೊದಲೇ ಬೆಳಗಾಯಿತು ಹೇಗೆ
ಕನಸೇ ಎದುರಾಯಿತು ಹೇಗೆ
ಋತುವೇ ಬದಲಾಯಿತು ಹೇಗೆ
ಹಿಂದೆ ಮುಂದೆ ನೋಡದೆ..🎶
ಕಣ್ಣಲ್ಲೇ ನೂರು ಮಾತು
ಆಡುತ ಮುಂದೆ ಕೂತು
ಜೀವದಲಿ ಛಾಪು ಹೀಗೆ ಬೀರಿಲ್ಲ ಇನ್ಯಾರು

ಆಗಿದೆ ಜೀವ ಹೂವು
ಆದರೂ ಏನೋ ನೋವು
ಭಾವಗಳ ಕಾಟ ಹೀಗೆ ನೀಡಿಲ್ಲ ಇನ್ಯಾರು..🎶🎶

#ಕಾಯ್ಕಿಣಿ_ಸಾಲುಗಳು
ತಂಗಾಳಿ ಬೀಸೋವಾಗ
ಎಲ್ಲೆಲ್ಲೂ ನಿಂದೇ ಮಾರ್ದನಿ
ಗುಟ್ಟಾಗಿ ಕೂಡಿಸಿಟ್ಟ
ಈ ಪ್ರೀತಿ ಒಂದೇ ಠೇವಣಿ

ನೀನಿಲ್ಲೆ ಇದ್ದರೂ ಅಂತರಂಗದಿ ಚಿತ್ರ ಮೂಡಿದೆ
ಈ ಜೀವ ನಿನ್ನನು ಸಂತೆಯಲ್ಲಿಯೂ ಪತ್ತೆಮಾಡಿದೆ
ನಾ ಹೇಗೆ ಇರಲಿ ಹೇಳು ನೀನು ಮುದ್ದು ಮಾಡದೆ.🎶
Read 4 tweets

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3/month or $30/year) and get exclusive features!

Become Premium

Don't want to be a Premium member but still want to support us?

Make a small donation by buying us coffee ($5) or help with server cost ($10)

Donate via Paypal

Or Donate anonymously using crypto!

Ethereum

0xfe58350B80634f60Fa6Dc149a72b4DFbc17D341E copy

Bitcoin

3ATGMxNzCUFzxpMCHL5sWSt4DVtS8UqXpi copy

Thank you for your support!

Follow Us!

:(