ನಿಮ್ಮ ಮಾತು ಸರಿ ಇದನ್ನು ಬರೆದ್ದಕ್ಕೆ ನಿಮಗೆ ಕೆಲವರು ಬಾಜಪದವ್ರು ಖುಷಿಯಾದ್ರೆ ಕಾಂಗ್ರೇಸ್ ನವರು ಬೇಜಾರಾಗಬಹುದು

ಏಕೆಂದರೆ ೧೯೭೬ ರಲ್ಲಿ ಸಂವಿಧಾನಕ್ಕೆ ೪೨ನೇ ತಿದ್ದುಪಡಿ ತರುವ ಮೂಲಕ ಸಂವಿಧಾನಕ್ಕೆ ೪ಎ ಎಂಬ ಭಾಗ ಮತ್ತು ೫೧ಎ ಎಂಬ ಪರಿಚ್ಛೇದದಡಿಯಲ್ಲಿ ೧೦ ಮೂಲಭೂತ ಕರ್ತವ್ಯಗಳನ್ನು ಸೇರಿಸಿದ್ದು ಇಂದಿರಮ್ಮರ ಕಾಂಗ್ರೇಸ್ ಸರ್ಕಾರವೇ...
ನಮ್ಮ‌ ಸಂವಿಧಾನದ ೧೧ ನೇ ಮೂಲಭೂತ ಕರ್ತವ್ಯವನ್ನು ೨೦೦೨ ರಲ್ಲಿ ವಾಜಪೇಯಿ ಅವರ ಸರ್ಕಾರ ೮೬ ನೇ ತಿದ್ದುಪಡಿ ಮೂಲಕ ಸೇರಿಸಿತು
ಇಲ್ಲಿ ನಾವು ಪಕ್ಷಗಳನ್ನು ದೂರುವದಕ್ಕಿಂತ ಜನರನ್ನು ದೂರಬೇಕಾಗಿದೆ ಏಕೆಂದರೆ ನಮ್ಮ ಹಕ್ಕುಗಳನ್ನು ನಾವು ಪಾಲಿಸುವಲ್ಲಿ ಸಫಲರಾಗಿದ್ದೆವೆ ಆದರೆ ಕರ್ತವ್ಯಗಳನ್ನು ಮರೆತಿದ್ದಕ್ಕೆ ನಾವೇ ಕಾರಣವೇ ಹೊರತು ಕಾಂಗ್ರೇಸ್ಸೋ ಬಾಜಪವೋ
ಅಥವಾ ಇನ್ಯಾವುದೋ ಪಕ್ಷಗಳಲ್ಲ ಅದು ನಮ್ಮ ವಿಫಲತೆ ಅಂತ ಹೇಳಬಹುದು ಏಕೆಂದ್ರೆ ಅದ್ಯಾವ ಉದ್ದೇಶದಿಂದ ಅವರುಗಳು ಮೂಲಭೂತ ಕರ್ತವ್ಯಗಳನ್ನು ಸೇರಿಸಿದ್ರೋ ಒಟ್ಟಿನಲ್ಲಿ ಅದು ಒಳ್ಳೆಯದು ಆದರೆ ನಾವು ಯಾವುದೋ ಒಂದು ಪಕ್ಷಕ್ಕೆ ಅಥವಾ ಸಿದ್ದಾಂತಕ್ಕೆ ಕಟ್ಟು ಬಿದ್ದಾಗ ನಮಗೆ ಕೇವಲ ಹಕ್ಕುಗಳು ಮಾತ್ರ ಕಾಣುತ್ತವೆ ಕರ್ತವ್ಯಗಳು ನಗಣ್ಯವಾಗಿರುತ್ತವೆ...
ಆ ರೀತಿ ಆಯಾ ಕಾಲಘಟ್ಟದಲ್ಲಿ ಅಧಿಕಾರ ಕೇಂದ್ರಿತ ಪಕ್ಷಗಳು ನಮಗೆ ಕೇವಲ‌ ಹಕ್ಕುಗಳ ಬಗ್ಗೆ ಮಾತ್ರ ಹೇಳಿ ಕರ್ತವ್ಯಗಳನ್ನು ಮರೆಸಲಿಕ್ಕೆ ಪ್ರಯತ್ನ ಪಟ್ಟರೂ ನಾವು ನಮ್ಮ ಕರ್ತವ್ಯಗಳನ್ನು ಪಾಲಿಸುವ ನಿಲುವನ್ನು ಬಿಡಬಾರದು ಅಂದಾಗ ಮಾತ್ರ ನಾವು ಉತ್ತಮ ಪ್ರಜಾಪ್ರಭುತ್ವ ರಾಷ್ಟ್ರವನ್ನು ನಾವು ಕಟ್ಟಬಹುದು ಒಂದು ಉತ್ತಮ ಪ್ರಜಾಪ್ರಭುತ್ವ ರಾಷ್ಟ್ರದ ಏಳಿಗೆ
ಆಯಾ ರಾಷ್ಟ್ರಗಳ ಪ್ರಜೆಗಳು ಹಾಗೂ ಅಲ್ಲಿನ ಪತ್ರಿಕೆಗಳು ಹಾಗೂ ಸುದ್ದಿ ಮಾಧ್ಯಮಗಳು ತಾವು ಆರಿಸಿದ ಸರಕಾರವನ್ನು ಹೇಗೆ ಪ್ರಶ್ನಿಸಿ ನೆಡೆಸಿಕೊಳ್ಳುತ್ತಾರೆ ಎಂಬ ಅಂಶದ ಮೇಲೆ‌ ನಿಂತಿದೆ ಆದರೆ ನಮ್ಮಲ್ಲಿ ಹಿಂದೆ ಇರಲಿ ಇವಾಗ ಇರಲಿ‌ ಅದೆಲ್ಲವೂ ತದ್ವಿರುದ್ಧವಾಗಿದೆ ಪ್ರಶ್ನಿಸಿದ ಪ್ರಜೆ ದೇಶದ್ರೋಹಿ ಪ್ರಶ್ನಿಸಿದ ಮಾಧ್ಯಮ ಮತ್ತು ಪತ್ರಿಕೆಗಳು ಸಹ
ದೇಶದ್ರೋಹಿಗಳು ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕರ್ತವ್ಯಗಳನ್ನು ಪಾಲಿಸಲಿಕ್ಕೆ ಇರುವ ದೊಡ್ಡ ಅಡೆತಡೆ.

ಹಿಂದಿನಿಂದ ಇಂದಿನವರೆಗೆ ತಮ್ಮ ಪಕ್ಷ ಅಥವಾ ಸಿದ್ದಾಂತದ ಗೌರವವೇ ರಾಷ್ಟ್ರ ಗೌರವ ಎನ್ನುವಂತೆ ಬಿಂಬಿಸಿದ್ದರ ಫಲ ಹಿಗಾದಾಗ ಕರ್ತವ್ಯಗಳ ಪಾಲನೆ ನಮ್ಮಲ್ಲಿ ಯಶಸ್ಸು ಕಾಣದು

ಅಂದು ಕರ್ತವ್ಯಗಳನ್ನು ಸೇರಿಸಿದಾಗ ಮತ್ತು ಇಂದು ಅವುಗಳು
ಇಂದು ವಿಚಾರಕ್ಕೆ ಬಂದ ದಿನ ಎರಡು ಸಲವೂ ಪ್ರಬಲ‌ ಆಳುವ ಸರ್ಕಾರ ಮತ್ತು ದುರ್ಬಲ ವಿರೋಧ ಪಕ್ಷಗಳಿವೆ.

ಇಂತಹ ಸಂದರ್ಭಗಳಲ್ಲಿ ಪ್ರಜಾಪ್ರಭುತ್ವದ ಅತಿ ದೊಡ್ಡ ಪಾಲುದಾರರಾದ ನಮ್ಮ ಪ್ರಜೆಗಳು ಪತ್ರಿಕೆಗಳು,ಮಾಧ್ಯಮಗಳು ಪ್ರತಿಪಕ್ಷವಾಗಿ ಕಾರ್ಯ ನಿರ್ವಹಿಸಿ ಪ್ರಜಾಪ್ರಭುತ್ವ ಉಳಿಸಬೇಕಿತ್ತು ದುರಾದೃಷ್ಟವಶಾತ್ ಅಂದು ಸಹ ಇವೆಲ್ಲವೂ ಆಡಳಿತ ಪಕ್ಷದ
ಪರವಾಗಿದ್ದವು ಅದೇ ದುರಾದೃಷ್ಟವಶಾತ್ ಇಂದು ಸಹ ಇವೆಲ್ಲವೂ ಮತ್ತೆ ಆಡಳಿತ ಪಕ್ಷದ ಬಾಲಬಡುತನಕ್ಕೆ ಸಾಕ್ಷಿಯಾಗಿವೆ

ಪಕ್ಷ ಯಾವುದೇ ಇರಲಿ ನಾವು ಸರಿ ಇಲ್ಲದಿದ್ದಾಗ ಪಕ್ಷಗಳನ್ನು ದೂಷಿಸಿ ಪ್ರಯೋಜನವಿಲ್ಲ ಅದರ ಫಲ ನಾವೆಲ್ಲರೂ ಪಡೆಯಲೇಬೇಕು ಅದಕ್ಕೆ ನಾವೆಲ್ಲರೂ ಹೊಣೆಗಾರರು ಅಂತ ನನ್ನ ವೈಯುಕ್ತಿಕ ಅಭಿಪ್ರಾಯ ಸರ್.

@threadreaderapp unroll

• • •

Missing some Tweet in this thread? You can try to force a refresh
 

Keep Current with ಹನುಮನಗೌಡ ಪೋಲಿಸ್ ಪಾಟೀಲ್

ಹನುಮನಗೌಡ ಪೋಲಿಸ್ ಪಾಟೀಲ್ Profile picture

Stay in touch and get notified when new unrolls are available from this author!

Read all threads

This Thread may be Removed Anytime!

PDF

Twitter may remove this content at anytime! Save it as PDF for later use!

Try unrolling a thread yourself!

how to unroll video
  1. Follow @ThreadReaderApp to mention us!

  2. From a Twitter thread mention us with a keyword "unroll"
@threadreaderapp unroll

Practice here first or read more on our help page!

More from @hppgouda123

21 Nov
ಹಿಂದೂ ಧರ್ಮ ಅಲ್ಲ ಅದೊಂದು ಜೀವನ ವಿಧಾನ ಇದನ್ನು ನಾನು ಹೇಳಿಲ್ಲ ಈ ದೇಶದ ಉಚ್ಚ ನ್ಯಾಯಾಲಯ ೧೯೯೫ ರಲ್ಲಿ ನ್ಯಾಯಮೂರ್ತಿ ಜೆ.ಎಸ್ ವರ್ಮಾ ಅವರ ನ್ಯಾಯಪೀಠ ಎಸ್ ರಾಧಾಕೃಷ್ಣನ್ ಅವರ ತತ್ವಶಾಸ್ತ್ರ ಮತ್ತು ವಿಲ್ ಡ್ಯೂರಾಂಟ್ ಅವರ ಇತಿಹಾಸದ ಬರವಣಿಗೆಗಳ ಜೊತೆ ಅನೇಕ ದಾಖಲೆಗಳನ್ನು ಅವಲೋಕಿಸಿ ನೀಡಿದ ತಿರ್ಪು ಏಕೆಂದರೆ ನಮಗೆ ಅನೇಕ ವೈವಿಧ್ಯಮಯ ಆಚರಣೆ
ಮತ್ತು ಜೀವನ ಪದ್ದತ್ತಿಗಳಿವೆ(ಧಾರ್ಮಿಕ,ಸಾಂಸ್ಕೃತಿಕ ಮತ್ತು ಸಾಮಾಜಿಕವಾಗಿ)
ಅದಲ್ಲದೇ ಈ ಹಿಂದೂ ಎಂಬ ಪದ ಪ್ರಾಚೀನ ಕಾಲದ ಯಾವ ಧರ್ಮ ಮತ್ತು ಲೌಕಿಕ ಗ್ರಂಥಗಳಲ್ಲಿ ಉಲ್ಲೇಖ ಇಲ್ಲ ಈಗ ಇದನ್ನು ಬಳಸುವವರಿಗೆ ಇದು ಧರ್ಮ ಸೂಚಕವೋ?
ಜನಾಂಗೀಯ ಸೂಚಕವೋ? ಭೌಗೋಳಿಕ ಸೂಚಕವೋ ಎಂದು ನಿಖರವಾಗಿ ಗೊತ್ತಿಲ್ಲ
ಏಕೆಂದರೆ ಸಿಂದೂ ಎಂಬ ಪದದ ಮುಂದಿನ ಅರ್ಥಗಳೇ ಈ
ಹಿಂದೂ(ಪರ್ಶಿಯನ್) & ಇಂಡಸ್(ಗ್ರೀಕರು). ಇವರ ಸಾಂಸ್ಕೃತಿಕ ವಲಸೆ ಪರಿಣಾಮವಾಗಿ ಮತ್ತು ಪದಬಳಕೆಯಲ್ಲಾದ ಶಬ್ದೋಚ್ಚಾರದ ಪರಿಣಾಮದಿಂದ ಸಿಂದೂ ನದಿ ತೀರದ ಸುತ್ತಲಿನ ಪ್ರದೇಶಕ್ಕೆ ಹಿಂದೂ ಅಥವಾ ಇಂಡಸ್ (ಈಗ ಇಂಡಿಯಾ) ಎಂಬ ಉಲ್ಲೇಖಗಳು ಬಂದಿವೆ ಅದೊಂದು ಸೀಮಿತ ವಲಯದ ಪ್ರದೇಶದ ಭೌಗೋಳಿಕ ಸೂಚಕ ಮಾತ್ರ ಇಡಿ ಭಾರತ ಒಕ್ಕೂಟದ ಸೂಚಕವಲ್ಲ.
ಸಾಮಾನ್ಯ ಶಕ ಎಂಟನೆ
Read 9 tweets
19 Nov
ಯಾವ ವೇದ,ಬ್ರಾಹ್ಮಣಕ,ವೇದಾಂಗ,ಉಪನಿಷತ್,ಸ್ಮೃತಿ,ಪುರಾಣಗಳಲ್ಲಿ ಪಟಾಕಿ ಹೊಡೆಯೋದು ಹಿಂದೂ ಸಂಸ್ಕೃತಯ ಭಾಗ ಎಂದು ಹೇಳಿದೆ ಹೇಳಿ ನಾವು ಕೇಳಿ ಪುಣ್ಯ ಕಟ್ಕೊಳ್ತೀವಿ ಏಕೆಂದರೆ ನಿಮ್ಮಷ್ಟು ಜ್ಞಾನ ನಮಗಿಲ್ಲ.
ಇನ್ನೂ ಗೋ ಹತ್ಯೆಯ ವಿಚಾರ ಅಧಿಕಾರಕ್ಕೆ ಬಂದು ಏಳು ವರ್ಷ ಆಗಿದೆ ಒಕ್ಕೂಟ ಸರ್ಕಾರಕ್ಕೆ ಏನು ರೋಗ ನಿಷೇದ ಮಾಡೋದಕ್ಕೆ ಬೇಡ ಅಂದೋರು ಯಾರು?
ಇನ್ನೂ ಧ್ವನಿವರ್ದಕಗಳ ವಿಚಾರ ಸರಕಾರ ಮಾನದಂಡ ಡೆಸಿಬಲ್ ಗಳ ಲೆಕ್ಕದಲ್ಲಿ ನಿಗದಿ ಮಾಡಿದೆ ಸಾಮಾನ್ಯವಾಗಿ ೬೦ ಡೆಸಿಬಲ್ ಗಳ ವರೆಗೆ ಉತ್ತಮ ಅದಕ್ಕಿಂತ ಜಾಸ್ತಿ ಇರುವ ಮುಸ್ಲಿಂರ ಅಜಾನ್ ಹಾಕುವ ಧ್ವನಿವರ್ದಕವಾಗಲಿ ಹಿಂದೂ ಗುಡಿಗಳಲ್ಲಿ‌ ಹಾಕುವ ದ್ವನಿವರ್ದಕಗಳಾಗಲಿ ಟ್ರಾಕ್ಟರ್ ಹಾಡುಗಳಾಗಲಿ ಗಣೇಶ ಇತ್ಯಾದಿ ಉತ್ಸವಗಳಲ್ಲಿ ಹಾಕುವ ಡಿಜೆ ಆಗಲಿ ನಿಷಿದ್ಧ
ಹೀಗೆ ಯಾರೇ ಯಾವುದೇ ಧರ್ಮವರಿರಲಿ ನಿಗದಿತ ಮಾನದಂಡಕ್ಕಿಂತ ಜಾಸ್ತಿ‌ ಶಬ್ದ ಮಾಡಿದರೆ ಅದು ಪರಿಸರಕ್ಕೆ ಹಾನಿ/ಶಬ್ದ ಮಾಲಿನ್ಯ ಇದನ್ನು ಖಂಡಿಸುವ ಹಾಗಿದ್ದರೆ ಪರಿಸರಾತ್ಮಕ ದೃಷ್ಟಿಕೋನದಿಂದ ಇಡಿ ಮಾಲಿನ್ಯಕಾರಕವಾದ ಎಲ್ಲಾ ಬಗೆಯ ಶಬ್ದಮಾಲಿನ್ಯದ ವಿಧಾನಗಳನ್ನೂ ಸಹ ಖಂಡಿಸಬೇಕು ಅದರಲ್ಲಿ‌ ಜಾತಿ ಧರ್ಮ ಹುಡುಕುವುದು ತರವಲ್ಲ.
@threadreaderapp unroll
Read 4 tweets
8 Nov
ಈ ಯವನ ಕುಲ ಅಂದ್ರೆ ಇಂಡೋ ಗ್ರೀಕ್ ಸಂಜಾತರು ನಾವು ಇತಿಹಾಸದಲ್ಲಿ ಯವನರ ಉಲ್ಲೇಖವನ್ನು ಇಂಡೋ ಗ್ರೀಕರು ಎಂದೇ ಗುರುತಿಸುತ್ತೇವೆ ರಾಮಾಯಣದಲ್ಲಿ ಒಂದು ಶ್ಲೋಕದ ಮೂಲಕ ಮತ್ತು ವ್ಯಾಸಭಾರತದಲ್ಲಿ ಶ್ರೀಕೃಷ್ಣನ ಕುರಿತಾದ ಸನ್ನಿವೇಶದಲ್ಲಿ ಈ ಯವನರ ಕುರಿತು ಉಲ್ಲೇಖ ಮಾಡಲಾಗಿದೆ ಅದನ್ನು ಹಾಕ್ತೀನಿ ವ್ಯಾಸಭಾರತದಲ್ಲಿ ಶ್ರೀಕೃಷ್ಣ ಮತ್ತು ಕಾಳಯವನ ನಡುವೆ
ಆದ ದ್ವಂದ್ವ ಯುದ್ದದ ಉಲ್ಲೇಖ ಇದೆ ರಾಮಾಯಣದ ಬಾಲಕಾಂಡದಲ್ಲಿ

ತಸ್ಯಾಃ ಹುಮ್ ಕಾರತಃ
ರವಿ ಸನ್ನಿಭಾ ಕಾಂಬೋಜಾ ಜಾತಾಃ
ಅಥಃ ಉದಸಃ ಶಸ್ತ್ರ ಪಾಣಯಃ
ಪಹ್ಲವ ಸಂಜಾತಾಃ
ಯೋನಿ ದೇಶಾತ್ ಯವನಃ ಚ
ತಥಾ ಶಕ್ ಯಿ ದೇಶಾತ್ ಶಕಾಃ
ರೋಮ ಕುಶೇಪು ಮ್ಲೆಚ್ಛಾಃ ಚ
ಸ ಕಿರಾತಕಾಃ ಹಾರಿತಾಃ

ಈ ಯೋನಿ ದೇಶಾತ್ ಯವನಃ ಚ ಅಂದರೆ ಸ್ತ್ರೀ ಆಧಾರಿತ ಪೂಜಿತ ದೇಶದವ್ರು ಅಂದ್ರೆ
ಯವನರು ಅಥವಾ ಗ್ರೀಕರು ಅಥವಾ ಇಂಡೋ ಗ್ರೀಕರು ಏಕೆಂದರೆ ಗ್ರೀಕರದ್ದು ಸಂಪೂರ್ಣ ಸ್ತ್ರೀ ದೇವತಾಧಾರಿತ ಧಾರ್ಮಿಕ ಆಚರಣೆ ಇದೆ ಇದಕ್ಕೆ ಇನ್ನೂ ಉತ್ತಮ ಉದಾಹರಣೆ ಎಂದರೆ ಭಾರತದಲ್ಲಿ ಗ್ರೀಕ್ ಅಥವಾ ಯವನರ ಪ್ರವೇಶ ಆಗುವವರೆಗೆ ಎಲ್ಲಿಯೂ ನಮ್ಮಲ್ಲಿ ಸೃಷ್ಟಿ ಲಿಂಗ ಪೂಜಾ ಪದ್ದತ್ತಿ ಇರಲಿಲ್ಲ ಕೇವಲ ಶಿಶ್ನ ಲಿಂಗಾಧಾರಿತ ಪೂಜಾ ಪದ್ದತ್ತಿ ಇತ್ತು ಇದಕ್ಕೆ
Read 7 tweets
7 Nov
ಈ ವರದಿ ಮಾಹಿತಿ ಜನರಿಗೆ ತಿಳಿಯಲಿ ನಮಗೆ ಗೊತ್ತಾಗೋದು ಬೇಡ್ವಾ ನಿಮ್ಮ ಕಾರ್ಯಪಡೆ ಏನು ವರದಿ ಸಿದ್ದಪಡಿಸಿದೆ ಅಂತ ಅದರಲ್ಲೂ

ವಿಶೇಷವಾಗಿ ಅದರಲ್ಲಿ ಕನ್ನಡ ಮಾಧ್ಯಮದ ಭಾಷಾಧಾರಿತ ಶಿಕ್ಷಣ ಎಲ್ಲಿಯವರೆಗೆ?

ಪಠ್ಯಕ್ರಮ ಸಂಯೋಜನೆ ಹೇಗೆ?

ಕಲಿಕೆ ನಂತರ ನೌಕರಿಗೆ ವಿದ್ಯಾರ್ಹತೆಯ ಮಾನದಂಡದ ನಿಗದಿ ಹೇಗೆ?
@nimmasuresh
ಏಕೆಂದರೆ ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿದೆ ಅದರ ಮೇಲೆ ಕಾನೂನು ಮಾಡುವ ಅಧಿಕಾರ ಕೇಂದ್ರದಂತೆ ರಾಜ್ಯಕ್ಕೂ ಸಹ ಇದೆ ಅದನ್ನು ನಾವು ಮರೆಯಬಾರದು ಅಲ್ವಾ
#NEP ಪ್ರಕಾರ ಮಾತೃ ಭಾಷಾ ಶಿಕ್ಷಣ ೫+೩ ವರೆಗೂ ಅಂತ ಹೇಳಲಾಗಿದೆ ಅದನ್ನು ೫+೩+೩ ವರೆಗೂ ಮುಂದುವರೆಸಬೇಕು
ಕೌಶಲ್ಯಾಧಾರಿತ ಶಿಕ್ಷಣದಲ್ಲಿ ಕಡ್ಡಾಯ ವ್ಯವಸಾಯ ಕೌಶಲ್ಯ ಹಾಗೂ ನಮ್ಮ ಸ್ಥಳಿಯ...
ಗುಡಿ/ಗೃಹ ಕೈಗಾರಿಕೆಗಳಾಧಾರಿತ ಕೌಶಲ್ಯ ಶಿಕ್ಷಣಕ್ಕೆ ಆದ್ಯತೆ ಇರಬೇಕು

ಇನ್ನೂ ಈ ಹಿಂದೆ ಆಯಾ ನೌಕರಿಗಾಗಿ ವಿದ್ಯಾರ್ಹತೆ ಮಾನದಂಡ ನಿಗದಿಯಾಗಿತ್ತು ಅದು ಈಗ ಯಾವ ಸ್ವರೂಪ ಪಡೆದುಕೊಂಡಿದೆ ಅದಕ್ಕಾಗಿ ಈ ವರದಿಯನ್ನು ಬಹಿರಂಗ ಪಡಿಸಿ ತಜ್ಞರ‌/ಸಾರ್ವಜನಿಕರ ಜೊತೆ ಚರ್ಚೆಯಾಗಲಿ
@CMofKarnataka @nimmasuresh
@drashwathcn @threadreaderapp
Read 4 tweets

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3/month or $30/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!

Follow Us on Twitter!