ಈ ದಿನ ಕರ್ನಾಟಕದ ಉತ್ತರದಲ್ಲಿ ಬಾದಾಮಿ ಬನಶಂಕರಿ ಪಟ್ಟದಕಲ್ಲು ಐಹೊಳೆ ಕಡೆಗೆ ಕಿರು ಪ್ರವಾಸ ಹೋಗಿದ್ದೆವು ಅಲ್ಲಿ ಅನೇಕ ರೀತಿಯ ಸಮಸ್ಯೆಗಳವೆ ಹೆಚ್ಚಾಗಿ ಸ್ವಚ್ಚತಾ ಪರಿಕಲ್ಪನೆ ಅಲ್ಲಿ ಇಲ್ಲ ಇಲ್ಲಿ ಹಾಕಿದ ಚಿತ್ರಗಳು ಬನಶಂಕರಿ ದೇವಾಲಯ ಕಲ್ಯಾಣಿಯದ್ದು ಹೀಗಾದ್ರೆ ಸ್ವಚ್ಚ ಭಾರತ ಯೋಜನೆ ಹೇಗೆ ಯಶಸ್ವಿಯಾಗುತ್ತದೆ ದೇಶದ ಪ್ರಮುಖ ಪ್ರವಾಸಿ ತಾಣಗಳು +
ಹೀಗೆ ಕಸದಿಂದ ಕೂಡಿದರೆ ಬೇರೆ ನಾಡಿನ ಮತ್ತು ಬೇರೆ ದೇಶದ ಪ್ರವಾಸಿಗರು ಹೇಗೆ ಇಂತಹ ಸ್ಥಳಗಳಿಗೆ ಬರುತ್ತಾರೆ ನಮ್ಮ ನಾಡಿನ ಪ್ರವಾಸೋದ್ಯಮ ಹೇಗೆ ಸುಧಾರಿಸುತ್ತದೆ
ಈ ಕಲ್ಯಾಣಿಯಲ್ಲಿ ಜನರು ಸ್ನಾನ ಮಾಡೋದಕ್ಕೆ ಬೇರೆ ಪರ್ಯಾಯ ವ್ಯವಸ್ಥೆ ಮಾಡಿ ಕಲ್ಯಾಣಿ ರಕ್ಷಿಸಿ.
ಪಟ್ಟದಕಲ್ಲು ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡ ಪಾರಂಪರಿಕ ತಾಣವಾಗಿದೆ ಅದು ನಮ್ಮ+
ಹೆಮ್ಮೆ ಇಲ್ಲಿ ಇಂದು ಅನೇಕರಿಗೆ ಕೌಂಟರ್ ನಲ್ಲಿ ಜನರಿಗೆ ಪ್ರವೇಶ ಶುಲ್ಕ ಪಾವತಿ ಮಾಡಿದರೆ ಕೊಡಲು ಚಿಲ್ಲರೆ ಇಲ್ಲ ಅಥವಾ
ಸ್ಕ್ಯಾನ್ ಮಾಡಿ ಪಾವತಿ ಮಾಡುವ ವ್ಯವಸ್ಥೆ ಇಲ್ಲ ಇದಕ್ಕೆ ಒಂದು ವ್ಯವಸ್ಥೆ ಮಾಡಿ
ಐಹೊಳೆಯ ಅನೇಕ ಸ್ಮಾರಕಗಳು ಕೊಳಚೆ ನೀರಲ್ಲಿವೆ ಹೇಳಿದರೆ ಅಲ್ಲಿನ ಸಿಬ್ಬಂದಿಗಳು ಬಹಳ ನಕಾರಾತ್ಮಕ ಪ್ರತಿಕ್ರಿಯೆ ನೀಡಿದರು
ಇದು ತರವಲ್ಲ +
ಸ್ವಚ್ಚ ಭಾರತ ಮತ್ತು ಪ್ಲಾಸ್ಟಿಕ್ ಮುಕ್ತ ಭಾರತದಂತಹ ಜವಬ್ದಾರಿಯುತ ಯೋಜನೆಯನ್ನು ಪ್ರಧಾನಿಗಳು ಘೋಷಣೆ ಮಾಡಿದ್ದಾರೆ ಅದನ್ನು ನಾವುಗಳೆಲ್ಲರೂ ಸೇರಿ
ಯಶಸ್ವಿಯಾಗಿಸುವ ಮಹತ್ತರವಾದ ಘನ ಜವಾಬ್ದಾರಿ ನಮ್ಮ ಮೇಲಿದೆ ಇದಕ್ಕೆ ರಾಜ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಕರಿಸಿ ಈ ಕ್ಷೇತ್ರಗಳಿಗೆ ಸೂಕ್ತ ನಿರ್ದೇಶನ ನೀಡಬೇಕು +
ಏಕೆಂದರೆ ಇವುಗಳೆಲ್ಲಾ ನಮ್ಮ ನಾಡಿನ ಐತಿಹಾಸಿಕ ಮತ್ತು ಧಾರ್ಮಿಕ ಸ್ಮಾರಕಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಹೆಗ್ಗುರುತು ನಾವೇ ಅವುಗಳನ್ನು ಸರಿಯಾಗಿ ನೋಡಿಕೊಳ್ಳದಿದ್ದರೇ ಹೇಗೆ ಸಂಬಂಧಿಸಿದ ಇಲಾಖೆಗಳು ಏನು ಕಾರ್ಯ ಮಾಡುತ್ತಿವೆ ಎಂದು ನಮಗೆ ಅರ್ಥವಾಗುತ್ತಿಲ್ಲ ಇಷ್ಟು ನಿರ್ಲಕ್ಷ್ಯವಾಗಿದ್ದರೆ ಕರ್ನಾಟಕ ಒಂದು ರಾಜ್ಯ ಹಲವು ಜಗತ್ತುಗಳು ಎಂಬ +
ಪ್ರವಾಸೋದ್ಯಮದ ಸೂಕ್ತಿಗೆ ಅರ್ಥವಿರುವದಿಲ್ಲ.
ಭಾರತ ಸಂವಿಧಾನದ ಮೂಲಭೂತ ಕರ್ತವ್ಯಗಳಲ್ಲಿ ೫೧ಎ(ಎಫ್) ಪ್ರಕಾರ
ನಮ್ಮ ವೈವಿಧ್ಯಮಯ ಸಂಸ್ಕೃತಿಯನ್ನು ಗೌರವಿಸುವುದು ಮತ್ತು ಕಾಪಾಡುವುದು ಭಾರತೀಯ ಪ್ರಜೆಗಳಾಗಿ ನಮ್ಮ ಕರ್ತವ್ಯ
ಹಾಗಂತ ನಾವು ಹೇಳಿದ್ರೆ ಜನಗಳು ಕೇಳಲ್ಲ ಅದಕ್ಕೆ ಸರಕಾರದ ಆದೇಶದ ಮೂಲಕ ಇದನ್ನು ಪರಿಹರಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕು+
ಅವರ ಮೂಲ ಹೆಸರು ತಿಮ್ಮಪ್ಪ ನಾಯಕ
ಅವರ ಕೃಷ್ಣದೇವರಾಯನ ಸಾಮ್ರಾಜ್ಯದಲ್ಲಿ ಸೇನೆಯಲ್ಲಿದ್ದರು ನಂತರ ಹರಿದಾಸ ಪಂಥದ ಕವಿಗಳಾದರು ಆದರೆ ಕೃಷ್ಣನ ಕಿಂಡಿ ಅಥವಾ ಕನಕನ ಕಿಂಡಿಯ ಬಗ್ಗೆ ನಮ್ಮ ಸ್ನಾತಕೋತ್ತರ ಪದವಿ ಪ್ರೊಫೆಸರ್ ಒಬ್ಬರು ಹೇಳಿದ್ದು ಹೀಗೆ
ಈ ಕನಕಕಿಂಡಿ ಅಂದಿನ ಸಮಾಜದ ಶೋಷಣೆಯ ಮತ್ತೊಂದು ಮುಖ ಆ ಗುಡಿಯೊಳಗೆ ಕೆಳವರ್ಗದ ಜನರಿಗೆ ಪ್ರವೇಶ
ಇರದಿದ್ದಾಗ ಅದಕ್ಕಾಗಿ ಕನಕದಾಸದ ನೇತೃತ್ವದಲ್ಲಿ ಒಂದು ಜನಕ್ರಾಂತಿ ಅದೇ ದೇವಸ್ಥಾನ ಪ್ರವೇಶ ಚಳುವಳಿ ನೆಡೆದಾಗ ಕೊನೆಗೂ ದೇವಸ್ಥಾನದವರು ಒಳಗೆ ಬಿಡಲಿಕ್ಕೆ ಒಪ್ಪದೇ ಆ ಕಿಂಡಿಯ ಮೂಲಕ ಈ ವರ್ಗಗಳಿಗೆ ಕೃಷ್ಣನ ದರ್ಶನ ಆಗುವಂತೆ ವ್ಯವಸ್ಥೆ ಮಾಡಿದರಂತೆ ಹಾಗಾಗಿ ಅದು ಕನಕನ ಕಿಂಡಿ ಎಂದು ಸೃಷ್ಟಿಯಾಯಿತು ಎಂದು ಹೇಳಿದ್ದು ನೆನಪಿದೆ ಹರಿದಾಸ ಪಂಥ ವೈಷ್ಣವ
ಮತದ ಭಾಗ ಅವಾಗಿನ ಕಾಲದಲ್ಲಿ.
ಅವರ ಮನೆತನದ ತಂದೆಯ ಕಾಲದಿಂದಲೂ ಸಹ ವೈಷ್ಣವ ಮತದ ಅನುಕರಣೆ ಕನಕದಾಸ ಮನೆಯಲ್ಲಿತ್ತು ಅಷ್ಟೇ ಏಕೆ ಅವರ ಮೂಲ ಹೆಸರು ಸಹ ತಿಮ್ಮಪ್ಪ ನಾಯಕ(ಅವರ ತಂದೆತಾಯಿಗೆ ಬೇಗ ಮಕ್ಕಳಾಗದಿದ್ದಾಗ ತಿರುಪತಿ ವೆಂಕಟೇಶ್ವರ ದೇವರಿಗೆ ಬೇಡಿಕೊಂಡಿದ್ದರಂತೆ ಆ ಭಕ್ತಿಗೆ ತಿಮ್ಮಪ್ಪ ನಾಯಕ ಅಂತ ಹೆಸರಿಟ್ಟಿದ್ದರು)ಆಗಿನ ಸಮಾಜದಲ್ಲಿ ಬೇರೆ ಬೇರೆ
ಅಸಲಿಗೆ ಶಿವಾಜಿ ಸಹ ಸಾಮಾನ್ಯ ಅರಸನೇ ಹೊರತು ಹಿಂದೂವಾದಿಯಲ್ಲ ಸರ್ ಹಾಗೆ ಚಿತ್ರಿಸಲಾಗಿದೆ ಅಷ್ಟೇ ಕಾರಣ ಏನೆಂದರೆ ಶಿವಾಜಿ ನಂತರ ಬಂದ ಮರಾಠ ಸಾಮ್ರಾಜ್ಯ ವಶಪಡಿಸಿಕೊಂಡಿದ್ದು ಪೇಶ್ವೆಗಳಾದ ಚಿತ್ಪಾವನರು ಬಹುಸಂಖ್ಯಾತ ಮರಾಠಿಗರಿಗೆ ಈ ಭಾವನೆ ಉಣಬಡಿಸಿ ಮರಾಠಿಗಳ ಬೆಂಬಲವನ್ನು ಪಡೆದುಕೊಂಡು ಆಳ್ವಿಕೆ ನೆಡೆಸಿದರು ಇಲ್ಲದಿದ್ದರೇ ಅವರಿಗೆ ಆಡಳಿತ ಮಾಡಲು
ಆಗುತ್ತಿರಲಿಲ್ಲ ಅದಕ್ಕಾಗಿ ಈ ಭಾವನೆ ಬಿತ್ತಲಾಗಿದೆ ಶಿವಾಜಿ ಅನ್ಯ ಮತೀಯ ಸುಲ್ತಾನರಲ್ಲಿ ಔರಂಗಜೇಬನ ವಿರುದ್ಧ ಮಾತ್ರ ಯುದ್ಧ ಮಾಡಿದ್ದು ಬಿಟ್ಟರೇ ಅವರ ತಂದೆ ಷಹಜಿ ಬೋಂಸ್ಲೆ ಬಿಜಾಪುರದ ಸುಲ್ತಾನನ ಜಹಗೀರುದಾರ ಬೆಂಗಳೂರು ಸುಲ್ತಾನನ ಅಧೀನದಲ್ಲಿ ಇದ್ದಾಗ ಪುಣೆ ಮತ್ತು ಬೆಂಗಳೂರಿನ ಜಹಗೀರುದಾರಿಕೆ ನೋಡಿಕೊಳ್ಳುವ ಅಧಿಕಾರಿಯಾಗಿದ್ದ ಷಹಜಿ ಬೋಂಸ್ಲೆ
ತಂದೆಯ ಮರಣಾನಂತರ ಬಿಜಾಪುರದ ಸುಲ್ತಾನರ ಜೊತೆಗೆ ಸಂಘರ್ಷವಾಗಿ ತನ್ನ ಪಾಲಿನ ಕೊಟೆಗಳೊಂದಿಗೆ ಸ್ವಂತ ರಾಜ್ಯ ಕಟ್ಟಿದ ಶಿವಾಜಿ ಇವರಿಗಿಂತಲೂ ಅನೇಕ ಅರಸರು ದಕ್ಷಿಣದಲ್ಲಿ ಉತ್ತರದ ಸುಲ್ತಾನರಿಗೆ ತಲೆ ಬಾಗದೇ ಪ್ರಬಲ ಸಾಮ್ರಾಜ್ಯ ಕಟ್ಟಿದ್ದರೂ ಅವರಿಗೆ ಈ ಹಿಂದುತ್ವದ ಲೇಪನ ಮಾಡುವದಿಲ್ಲ ಏಕೆಂದರೆ ಪೇಶ್ವೆಗಳಂತೆ ಇಲ್ಲಿ ಯಾರು ಇರಲಿಲ್ಲ ಇಷ್ಟೆಲ್ಲಾ
ನಿಮ್ಮ ಮಾತು ಸರಿ ಇದನ್ನು ಬರೆದ್ದಕ್ಕೆ ನಿಮಗೆ ಕೆಲವರು ಬಾಜಪದವ್ರು ಖುಷಿಯಾದ್ರೆ ಕಾಂಗ್ರೇಸ್ ನವರು ಬೇಜಾರಾಗಬಹುದು
ಏಕೆಂದರೆ ೧೯೭೬ ರಲ್ಲಿ ಸಂವಿಧಾನಕ್ಕೆ ೪೨ನೇ ತಿದ್ದುಪಡಿ ತರುವ ಮೂಲಕ ಸಂವಿಧಾನಕ್ಕೆ ೪ಎ ಎಂಬ ಭಾಗ ಮತ್ತು ೫೧ಎ ಎಂಬ ಪರಿಚ್ಛೇದದಡಿಯಲ್ಲಿ ೧೦ ಮೂಲಭೂತ ಕರ್ತವ್ಯಗಳನ್ನು ಸೇರಿಸಿದ್ದು ಇಂದಿರಮ್ಮರ ಕಾಂಗ್ರೇಸ್ ಸರ್ಕಾರವೇ...
ನಮ್ಮ ಸಂವಿಧಾನದ ೧೧ ನೇ ಮೂಲಭೂತ ಕರ್ತವ್ಯವನ್ನು ೨೦೦೨ ರಲ್ಲಿ ವಾಜಪೇಯಿ ಅವರ ಸರ್ಕಾರ ೮೬ ನೇ ತಿದ್ದುಪಡಿ ಮೂಲಕ ಸೇರಿಸಿತು
ಇಲ್ಲಿ ನಾವು ಪಕ್ಷಗಳನ್ನು ದೂರುವದಕ್ಕಿಂತ ಜನರನ್ನು ದೂರಬೇಕಾಗಿದೆ ಏಕೆಂದರೆ ನಮ್ಮ ಹಕ್ಕುಗಳನ್ನು ನಾವು ಪಾಲಿಸುವಲ್ಲಿ ಸಫಲರಾಗಿದ್ದೆವೆ ಆದರೆ ಕರ್ತವ್ಯಗಳನ್ನು ಮರೆತಿದ್ದಕ್ಕೆ ನಾವೇ ಕಾರಣವೇ ಹೊರತು ಕಾಂಗ್ರೇಸ್ಸೋ ಬಾಜಪವೋ
ಅಥವಾ ಇನ್ಯಾವುದೋ ಪಕ್ಷಗಳಲ್ಲ ಅದು ನಮ್ಮ ವಿಫಲತೆ ಅಂತ ಹೇಳಬಹುದು ಏಕೆಂದ್ರೆ ಅದ್ಯಾವ ಉದ್ದೇಶದಿಂದ ಅವರುಗಳು ಮೂಲಭೂತ ಕರ್ತವ್ಯಗಳನ್ನು ಸೇರಿಸಿದ್ರೋ ಒಟ್ಟಿನಲ್ಲಿ ಅದು ಒಳ್ಳೆಯದು ಆದರೆ ನಾವು ಯಾವುದೋ ಒಂದು ಪಕ್ಷಕ್ಕೆ ಅಥವಾ ಸಿದ್ದಾಂತಕ್ಕೆ ಕಟ್ಟು ಬಿದ್ದಾಗ ನಮಗೆ ಕೇವಲ ಹಕ್ಕುಗಳು ಮಾತ್ರ ಕಾಣುತ್ತವೆ ಕರ್ತವ್ಯಗಳು ನಗಣ್ಯವಾಗಿರುತ್ತವೆ...
ಹಿಂದೂ ಧರ್ಮ ಅಲ್ಲ ಅದೊಂದು ಜೀವನ ವಿಧಾನ ಇದನ್ನು ನಾನು ಹೇಳಿಲ್ಲ ಈ ದೇಶದ ಉಚ್ಚ ನ್ಯಾಯಾಲಯ ೧೯೯೫ ರಲ್ಲಿ ನ್ಯಾಯಮೂರ್ತಿ ಜೆ.ಎಸ್ ವರ್ಮಾ ಅವರ ನ್ಯಾಯಪೀಠ ಎಸ್ ರಾಧಾಕೃಷ್ಣನ್ ಅವರ ತತ್ವಶಾಸ್ತ್ರ ಮತ್ತು ವಿಲ್ ಡ್ಯೂರಾಂಟ್ ಅವರ ಇತಿಹಾಸದ ಬರವಣಿಗೆಗಳ ಜೊತೆ ಅನೇಕ ದಾಖಲೆಗಳನ್ನು ಅವಲೋಕಿಸಿ ನೀಡಿದ ತಿರ್ಪು ಏಕೆಂದರೆ ನಮಗೆ ಅನೇಕ ವೈವಿಧ್ಯಮಯ ಆಚರಣೆ
ಮತ್ತು ಜೀವನ ಪದ್ದತ್ತಿಗಳಿವೆ(ಧಾರ್ಮಿಕ,ಸಾಂಸ್ಕೃತಿಕ ಮತ್ತು ಸಾಮಾಜಿಕವಾಗಿ)
ಅದಲ್ಲದೇ ಈ ಹಿಂದೂ ಎಂಬ ಪದ ಪ್ರಾಚೀನ ಕಾಲದ ಯಾವ ಧರ್ಮ ಮತ್ತು ಲೌಕಿಕ ಗ್ರಂಥಗಳಲ್ಲಿ ಉಲ್ಲೇಖ ಇಲ್ಲ ಈಗ ಇದನ್ನು ಬಳಸುವವರಿಗೆ ಇದು ಧರ್ಮ ಸೂಚಕವೋ?
ಜನಾಂಗೀಯ ಸೂಚಕವೋ? ಭೌಗೋಳಿಕ ಸೂಚಕವೋ ಎಂದು ನಿಖರವಾಗಿ ಗೊತ್ತಿಲ್ಲ
ಏಕೆಂದರೆ ಸಿಂದೂ ಎಂಬ ಪದದ ಮುಂದಿನ ಅರ್ಥಗಳೇ ಈ
ಹಿಂದೂ(ಪರ್ಶಿಯನ್) & ಇಂಡಸ್(ಗ್ರೀಕರು). ಇವರ ಸಾಂಸ್ಕೃತಿಕ ವಲಸೆ ಪರಿಣಾಮವಾಗಿ ಮತ್ತು ಪದಬಳಕೆಯಲ್ಲಾದ ಶಬ್ದೋಚ್ಚಾರದ ಪರಿಣಾಮದಿಂದ ಸಿಂದೂ ನದಿ ತೀರದ ಸುತ್ತಲಿನ ಪ್ರದೇಶಕ್ಕೆ ಹಿಂದೂ ಅಥವಾ ಇಂಡಸ್ (ಈಗ ಇಂಡಿಯಾ) ಎಂಬ ಉಲ್ಲೇಖಗಳು ಬಂದಿವೆ ಅದೊಂದು ಸೀಮಿತ ವಲಯದ ಪ್ರದೇಶದ ಭೌಗೋಳಿಕ ಸೂಚಕ ಮಾತ್ರ ಇಡಿ ಭಾರತ ಒಕ್ಕೂಟದ ಸೂಚಕವಲ್ಲ.
ಸಾಮಾನ್ಯ ಶಕ ಎಂಟನೆ
ಯಾವ ವೇದ,ಬ್ರಾಹ್ಮಣಕ,ವೇದಾಂಗ,ಉಪನಿಷತ್,ಸ್ಮೃತಿ,ಪುರಾಣಗಳಲ್ಲಿ ಪಟಾಕಿ ಹೊಡೆಯೋದು ಹಿಂದೂ ಸಂಸ್ಕೃತಯ ಭಾಗ ಎಂದು ಹೇಳಿದೆ ಹೇಳಿ ನಾವು ಕೇಳಿ ಪುಣ್ಯ ಕಟ್ಕೊಳ್ತೀವಿ ಏಕೆಂದರೆ ನಿಮ್ಮಷ್ಟು ಜ್ಞಾನ ನಮಗಿಲ್ಲ.
ಇನ್ನೂ ಗೋ ಹತ್ಯೆಯ ವಿಚಾರ ಅಧಿಕಾರಕ್ಕೆ ಬಂದು ಏಳು ವರ್ಷ ಆಗಿದೆ ಒಕ್ಕೂಟ ಸರ್ಕಾರಕ್ಕೆ ಏನು ರೋಗ ನಿಷೇದ ಮಾಡೋದಕ್ಕೆ ಬೇಡ ಅಂದೋರು ಯಾರು?
ಇನ್ನೂ ಧ್ವನಿವರ್ದಕಗಳ ವಿಚಾರ ಸರಕಾರ ಮಾನದಂಡ ಡೆಸಿಬಲ್ ಗಳ ಲೆಕ್ಕದಲ್ಲಿ ನಿಗದಿ ಮಾಡಿದೆ ಸಾಮಾನ್ಯವಾಗಿ ೬೦ ಡೆಸಿಬಲ್ ಗಳ ವರೆಗೆ ಉತ್ತಮ ಅದಕ್ಕಿಂತ ಜಾಸ್ತಿ ಇರುವ ಮುಸ್ಲಿಂರ ಅಜಾನ್ ಹಾಕುವ ಧ್ವನಿವರ್ದಕವಾಗಲಿ ಹಿಂದೂ ಗುಡಿಗಳಲ್ಲಿ ಹಾಕುವ ದ್ವನಿವರ್ದಕಗಳಾಗಲಿ ಟ್ರಾಕ್ಟರ್ ಹಾಡುಗಳಾಗಲಿ ಗಣೇಶ ಇತ್ಯಾದಿ ಉತ್ಸವಗಳಲ್ಲಿ ಹಾಕುವ ಡಿಜೆ ಆಗಲಿ ನಿಷಿದ್ಧ
ಹೀಗೆ ಯಾರೇ ಯಾವುದೇ ಧರ್ಮವರಿರಲಿ ನಿಗದಿತ ಮಾನದಂಡಕ್ಕಿಂತ ಜಾಸ್ತಿ ಶಬ್ದ ಮಾಡಿದರೆ ಅದು ಪರಿಸರಕ್ಕೆ ಹಾನಿ/ಶಬ್ದ ಮಾಲಿನ್ಯ ಇದನ್ನು ಖಂಡಿಸುವ ಹಾಗಿದ್ದರೆ ಪರಿಸರಾತ್ಮಕ ದೃಷ್ಟಿಕೋನದಿಂದ ಇಡಿ ಮಾಲಿನ್ಯಕಾರಕವಾದ ಎಲ್ಲಾ ಬಗೆಯ ಶಬ್ದಮಾಲಿನ್ಯದ ವಿಧಾನಗಳನ್ನೂ ಸಹ ಖಂಡಿಸಬೇಕು ಅದರಲ್ಲಿ ಜಾತಿ ಧರ್ಮ ಹುಡುಕುವುದು ತರವಲ್ಲ. @threadreaderapp unroll