My Authors
Read all threads
Life lessons from our Puranas..
ಮಾಡರ್ನ್ ಅಧ್ಯಾತ್ಮ!

ಭಗವಾನ್ ಶ್ರೀಕೃಷ್ಣನ ಅಂತ್ಯದ ಕಥೆ ಎಲ್ಲರಿಗೂ ತಿಳಿದೇ ಇದೆ. ಆದ್ರೂ ಅದನ್ನ ಚುಟುಕಾಗಿ ಹೇಳ್ತೇನೆ

ಅತಿಯಾದರೆ ಅಮೃತವೂ ವಿಷವೇ..
ಮಹಾಭಾರತದ ಕೊನೆಯಲ್ಲಿ, ತನ್ನ ಎಲ್ಲಾ ಮಕ್ಕಳನ್ನು ಕಳೆದುಕೊಂಡ ದುಃಖ ಹಾಗೂ ಸಿಟ್ಟಲ್ಲಿದ್ದ ಗಾಂಧಾರಿಯ ಶ್ರೀಕೃಷ್ಣನನ್ನು ಕಾರಣಕರ್ತ ನಾಗಿಸಿ
ಅವನಿಗೆ ಶಾಪಿಸುತ್ತಾಳೆ "36 ವರ್ಷಗಳ ನಂತರ ನೀನು ನಿನ್ನ ಎಲ್ಲಾ ಬಂಧುಗಳನ್ನು ಕಳೆದುಕೊಳ್ಳುವಂತಾಗಲಿ. ನಿನ್ನ ಯದುಕುಲವು ತಮ್ಮಲ್ಲೇ ಕಚ್ಚಾಡಿ ಕೊನೆಗೊಳ್ಳಲಿ. ನೀನು ಒಂಟಿಯಾಗಿ ಕಾಡಲ್ಲಿ ಮೃಗದಂತೆ ಮರಣ ಹೊಂದುವತಾಗಲಿ." (Refer ಮೌಸಲ parva).
ಕೃಷ್ಣನು ಅವಳನ್ನು ಅಪ್ಪಿ, ಸಾಂತ್ವನ ಮಾಡಿ, ಖುಷಿಯಿಂದ ಈ ಶಾಪವನ್ನು ಒಪ್ಪುತ್ತಾನೆ.
ಇದೇನು ಕೃಷ್ಣನಿಗೆ ತಿಳಿಯದೆ ಇದ್ದದ್ದಲ್ಲ. ಮಹಾಭಾರತದ ನಂತರ ತನ್ನ ಜನರು ಅಹಂಕಾರ ಭರಿತರಾಗಿ, ನೈತಿಕತೆ ಮರೆತು ದಾರಿ ತಪ್ಪಿ ಒಂದು Tipping point ಬಂದಾಗ- ಅವರೂ ಕೊನೆಗೊಳ್ಳುವುದು ಅವರ ಕರ್ಮ. ಇದನ್ನು ಅರಿತ ಕೃಷ್ಣ ಪರಮಾತ್ಮ ಸುಮ್ಮನೆ ಇರುತ್ತಾನೆ.

ಸಾಂಬ ಪ್ರಸಂಗ:
ಇದೆಲ್ಲಾ ಕಳೆದು, ಒಂದು ದಿನ ವಿಶ್ವಾಮಿತ್ರ, ವಸಿಷ್ಠ, ದೂರ್ವಾಸ, ನಾರದ ಮುನಿ
ಎಲ್ಲರೂ ಕೃಷ್ಣ ಬಲರಾಮರನ್ನು ಕಾಣಲು ದ್ವಾರಕೆಗೆ ಬರಲು, ಯಾದವ ಹುಡುಗರು - ಕೃಷ್ಣ ಜಾಂಬವತಿ ಪುತ್ರನಾದ ಸಾಂಬನ ಕೂಡಿ ಋಷಿಗಳ ಮೇಲೆ ಕುಚೇಷ್ಟೆ ಮಾಡಲು ಹೊರಟರು.
ಸಾಂಬನನ್ನು ಗರ್ಭಿಣಿ ವೇಷಧಾರಿ ಮಾಡಿ ಋಷಿಗಳ ಹತ್ತಿರ ಇವಳ ಹೊಟ್ಟೆಯಲ್ಲಿ ಇರುವ ಮಗು ಹೆಣ್ಣೋ ಗಂಡೋ ಅಂತ ಕೇಳಲು.
ಸಿಟ್ಟಾದ ಮುನಿಗಳು 'ಸಾಂಬ ಯದುಕುಲದ ನಾಶಮಾಡುವ ಒಂದು ಕಬ್ಬಿಣದ ತುಂಡನ್ನು ಹೆರುತ್ತಾನೆ' ಎಂದು ಶಪಿಸಿದರು.

ಹಾಗೆಯೇ ಸಾಂಬನು ಒಂದು ಗದೆಯನ್ನು ಹೆರುವನು.
ಯಾದವರು ಹೆದರಿ ಗದೆಯನ್ನು ಉಗ್ರಸೇನ ಮಹಾರಾಜನ ಬಳಿ ತಗೆದುಕೊಂಡು ಹೋಗಲು ಅವನು ಗದೆಯನ್ನು ಪುಡಿಮಾಡಿ ಸಮುದ್ರಕ್ಕೆ ಎಸೆಯಲು ಹೇಳುವನು.
ಪುಡಿಯು ಸಮುದ್ರ ಸೇರಲು, ಒಂದು ದೊಡ್ಡ ತುಂಡು ಮೀನಿನ ಹೊಟ್ಟೆ ಸೇರಿ ಮುಂದೆ ಆ ಮೀನು "ಜರಾ" ಎಂಬ ಒಂದು ಬೇಡನ ಬಳಿ ತಲುಪಿ ಅವನು ಕಬ್ಬಿಣದ ತುಂಡಿಂದ ಒಂದು ಬಾಣ ತಯಾರು ಮಾಡುತ್ತಾನೆ

ಹುಡಿಯು ನೀರಿನ ಜೊತೆಯಲ್ಲಿ ದ್ವಾರಕಾ ದಡ (ಪ್ರಭಾಸ) ಸೇರಿ ಅದರಲ್ಲಿ ಒಂದು ರೀತಿಯ ಬಿದಿರಿನ ಹುಲ್ಲು ಬೆಳೆಯುತ್ತದೆ.
ಇಲ್ಲಿಗೆ ಸಮುದ್ರದ ಬಳಿ ಸೇರಿದ ಯಾದವರು ಪಾನಮತ್ತರಾಗಿ ತಮ್ಮಲ್ಲೇ ಜಗಳವಾಡಿ ಬಿದಿರಿನ ರೀತಿ ಇದ್ದ ಹುಲ್ಲಿಂದ ಹೊಡೆದಾಡಿ (ಗದೆಯ ರೂಪವಾಗಿ ಇದ್ದ ಹುಲ್ಲು) ಸಾಯುವರು.

Recollect this -

ಹಿಂದೊಮ್ಮೆ ಕೃಷ್ಣನು ದೂರ್ವಾಸ ಮುನಿಗಳು ನೀಡಿದ ಪಾಯಸ ತಿಂದ ಬಳಿಕ ಅವ್ರು ಉಳಿದ ಪಾಯಸವನ್ನು ಮೈಮೇಲೆ ಹಚ್ಚಿಕೊಳ್ಳಲು ಹೇಳುತ್ತಾರೆ. ಆದರೆ ಪಾಯಾಸವು
ಕೃಷ್ಣನ ಕಾಲಿನ ಕೆಳಭಾಗಕ್ಕೆ ತಾಕಿರಿವುದಿಲ್ಲ.
ಆಗ ದೂರ್ವಾಸರು "ಅಯ್ಯೋ ಕೃಷ್ಣ - ನಿನ್ನ ಸಾವು ನಿನಿಗೆ ಕಾಲಿನಿಂದ ಬರುವುದು" ಎನ್ನುವರು

ಈಗ, ತನ್ನೆಲ್ಲ ಬಂಧುಗಳನ್ನು ಕಳೆದುಕೊಂಡು ಕಾಡಿನಲ್ಲಿ ಹೋಗುತ್ತಿರುವ ಕೃಷ್ಣನಿಗೆ, ಕಾಡಿನಲ್ಲಿ ಇದ್ದ ಬೇಡನು (ಜರಾ) ಬೇಟೆಯಾಡಲು ಹೊಡೆದ ಬಾಣ ಕಾಲಿನ ಕೆಳಭಾಗಕ್ಕೆ ತಾಗಿ ಕೃಷ್ಣನು ಮರಣ ಹೊಂದುತ್ತಾನೆ
Applying that to present day.
ಕೃಷ್ಣ ಪರಮಾತ್ಮ ಹೇಳಿದ ಹಾಗೆ ಪ್ರತಿ ಜೀವಿಯಲ್ಲೂ ಅವನಿದ್ದಾನೆ.
1. ನಾವೆಲ್ಲ ಯಾದವರು ಇದ್ದ ಹಾಗೆ
2. ನಮ್ಮ ದುರಭಾಸಗಳಿಂದ ನೈತಿಕತೆ ಕಳೆದುಕೊಂಡಿದ್ದೇವೆ
3. ಕೋರೋನ ವೈರಸ್ ಆ ಸಾಂಬ ಹೆತ್ತ "ಕಬ್ಬಿಣದ ತುಂಡು" ಇದ್ದ ಹಾಗೆ
4. ಹೇಗೆ ಅದನ್ನು ಪುಡಿಮಾಡಿ ಸಮುದ್ರ ಸೇರಿದರೂ ಮಾರ್ಪಾಡಾಗಿ ಬಂತೋ ಅದೇ ರೀತಿ -
ಬಾವಲಿ ಇಂದ ತೆಗೆದು - ಚೀನಾದಲ್ಲಿ ಪ್ರಯೋಗಾಲಯದಲ್ಲಿ ಈ ವೈರಸ್ ಮಾರ್ಪಾಡಾಗಿದೆ.
5. ಯಾದವರು ಕುಡಿದು ತಮ್ಮಲ್ಲೇ ಹೊಡೆದಾಡಿ ಸತ್ತರು - ನಾವೂ "ಕ್ವಾರಂಟೈನ್ " ಪಾಲಿಸದೆ ಇದನ್ನ ಎಲ್ಲಾ ಕಡೆ ಹಬ್ಬಿಸಿ ಸಾಯಿಸುತ್ತ ಇದ್ದೀವಿ.

6. ಕೃಷ್ಣನು ಹಚ್ಚಿದ ಪಾಯಸ - ಈಗಿನ "sanitiser" ತರಹ. ಸರಿಯಾಗಿ ಕೈಕಾಲು ತೊಳೆಯದೇ ಹೋದರೆ - ಕೊರೋನ ಅಲ್ಲಿಂದ ಬರಬಹುದು
7. ಕೊರೋನ ವೈರಸ್ ನೋಡಿದರೆ - ಅದರಲ್ಲಿ ಇರೋ ಸ್ಪೈಕ್ ಪ್ರೊಟೀನ್ (spike protein) ಬಾಣದ ರೀತಿ ಇರುತ್ತವೆ - (ಬೇಡನ ಬಾಣ)

ಅದು ನಮ್ಮ ಕೋಶಗಳ ಮೇಲೆ ಬಂದು ಕೂರಲು ಸಹಾಯ ಮಾಡುತ್ತೆ. ಬೇಡನ ಬಾಣ ಮೈ ಸೇರಿದ ಹಾಗೆ

ನಮ್ಮನು ಕಾಪಾಡಲು ಒಂದೇ ಉಪಾಯ - ಸರಿಯಾಗಿ ಶುಚಿತ್ವ ಕಾಪಾಡುವುದು.

ಇಲ್ಲದೇ ಹೋದರೆ ನಮ್ಮ ನಾಶವೂ ಖಂಡಿತ...
ಇನ್ನೂ ಆಳವಾಗಿ ಹೋದರೆ ಕೃಷ್ಣನ ಸಾವಿಗೆ ಕಾರಣನಾದ ಬೇಡ "ಜರಾ"
ಹಿಂದಿನ ಜನುಮದಲ್ಲಿ ವಾಲಿ ಆಗಿರುತ್ತಾನೆ.
ಕೃಷ್ಣನು - ರಾಮನ ರೂಪದಲ್ಲಿ ವಾಲಿಯನ್ನು ಮರಗಳ ನಡುವಿಂದ ಕೊಂದಿರುವನು.

ದ್ವಾಪರಯುಗದಲ್ಲಿ ಇದರ ಕರ್ಮವನ್ನು ಕೃಷ್ಣ ಪಡೆಯುತ್ತಾನೆ

ಕರ್ಮ ದೇವರನ್ನೂ ಬಿಡುವುದಿಲ್ಲ. ಎಷ್ಟು ಸುಂದರವಾಗಿ ಹೇಳಿದ್ದಾರೆ.
Disclaimer:
ಮಹಾಭಾರತದ ಪ್ರಸಂಗವನ್ನು ಈಗಿನ ಕಾಲಕ್ಕೆ ಹೋಲಿಸಿ ಬರೆದಿದ್ದೇನೆ.
Corona ನಮ್ಮೆಲ್ಲರ ಕಾರಣದಿಂದ ಹರುಡುತ್ತಿರೋ ವಿಷಯ ಸತ್ಯ. ಇದು ಕರ್ಮ.

ಅಲ್ಲಿ ಕಬ್ಬಿಣ ಪುಡಿ ಮಾಡಿ ಸಮುದ್ರ ಸೇರಿದ ಹಾಗೆ - ಇಲ್ಲಿ ವೈರಸ್ ಅನೇಕ mutations ಹೊಂದಿದೆ.

ಯಾದವರು ಅಹಂಕಾರ ಮಾಡಿದ ಹಾಗೆ ನಾವೂ ಪ್ರಕೃತಿ ಮೇಲೆ ದೌರ್ಜನ್ಯ ನಡೆಸುತ್ತಾ ಇದ್ದೀವಿ
ನಮ್ಮ ದುರಹಂಕಾರ ತೋರಿಸುತ್ತಾ ಇದ್ದೀವಿ.

ಹೀಗೆ ಹೋದರೆ ಮಂಜುಗಡ್ಡೆ ಕರಗಿ ಮುಂದೆ ಇನ್ನೂ ಅನೇಕ ಇದೇ ರೀತಿ ಇರುವ corona ಬರಲು ಜಾಸ್ತಿ ಸಮಯ ಬೇಡ.

ಕರ್ಮದಿಂದ ನಮಗೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ

This is my take on Mahabharata.
ತಪ್ಪಿರಬಹುದು. Take with pinch of salt

#Mahabharata #corona #Krishna
Missing some Tweet in this thread? You can try to force a refresh.

Enjoying this thread?

Keep Current with Schrodinger's cat

Profile picture

Stay in touch and get notified when new unrolls are available from this author!

Read all threads

This Thread may be Removed Anytime!

Twitter may remove this content at anytime, convert it as a PDF, save and print for later use!

Try unrolling a thread yourself!

how to unroll video

1) Follow Thread Reader App on Twitter so you can easily mention us!

2) Go to a Twitter thread (series of Tweets by the same owner) and mention us with a keyword "unroll" @threadreaderapp unroll

You can practice here first or read more on our help page!

Follow Us on Twitter!

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3.00/month or $30.00/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!